'ಇನ್ನೊಬ್ಬರ ಬಳಿ ಹಿಂದೂತ್ವ ಕಲಿಯುವ ಅಗತ್ಯ ಇಲ್ಲ': ಕೆಎಸ್ ಈಶ್ವರಪ್ಪಗೆ ಸಂಸದ ರಾಘವೇಂದ್ರ ತಿರುಗೇಟು

Published : Mar 30, 2024, 07:38 PM ISTUpdated : Mar 30, 2024, 07:40 PM IST
'ಇನ್ನೊಬ್ಬರ ಬಳಿ ಹಿಂದೂತ್ವ ಕಲಿಯುವ ಅಗತ್ಯ ಇಲ್ಲ': ಕೆಎಸ್ ಈಶ್ವರಪ್ಪಗೆ ಸಂಸದ ರಾಘವೇಂದ್ರ ತಿರುಗೇಟು

ಸಾರಾಂಶ

ಯಾವುದೋ ಗ್ಯಾರೆಂಟಿ, ಯಾವುದೋ ಕುಟುಂಬ ಅಥವಾ ಯಾರನ್ನೋ ಎಂಪಿ ಮಾಡಲು ನಡೆಯುತ್ತಿರುವ ಚುನಾವಣೆ ಇದಲ್ಲ, ದೇಶದ ಭವಿಷ್ಯ, ರೈತ, ಬಡವ, ಮಹಿಳೆಯರಿಗಾಗಿ ಮಾಡುತ್ತಿರುವ ಚುನಾವಣೆ ಇದಾಗಿ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ತೀರ್ಥಹಳ್ಳಿ (ಮಾ.30): ಯಾವುದೋ ಗ್ಯಾರೆಂಟಿ, ಯಾವುದೋ ಕುಟುಂಬ ಅಥವಾ ಯಾರನ್ನೋ ಎಂಪಿ ಮಾಡಲು ನಡೆಯುತ್ತಿರುವ ಚುನಾವಣೆ ಇದಲ್ಲ, ದೇಶದ ಭವಿಷ್ಯ, ರೈತ, ಬಡವ, ಮಹಿಳೆಯರಿಗಾಗಿ ಮಾಡುತ್ತಿರುವ ಚುನಾವಣೆ ಇದಾಗಿ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ತೀರ್ಥಹಳ್ಳಿ ತಾಲೂಕಿನ ದರಲಗೋಡುನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ರಾಷ್ಟ್ರಕವಿಗಳನ್ನು ಕೊಟ್ಟ ಕ್ಷೇತ್ರ ತೀರ್ಥಹಳ್ಳಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರಿಗೆ ಎಂಬತ್ತು ಸಾವಿರಕ್ಕೂ ಅಧಿಕ ಮತ ಬಂದಿತ್ತು. ಈ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ನಿಮ್ಮ ಕೈಯಲ್ಲಿ: ಪ್ರಿಯಾಂಕ್ ಖರ್ಗೆ

ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕಾರಣದ ಬಗ್ಗೆ  ವಿರೋಧ ಪಕ್ಷಕ್ಕೆ ಚರ್ಚೆ ಮಾಡಲಾಗದೇ ಟೀಕೆ ಮಾಡುವುದನ್ನೇ ಚುನಾವಣೆ ಪ್ರಚಾರ ಅಂದು ಕೊಂಡಿವೆ. ಇದು ವೈಯಕ್ತಿಕ ಟೀಕೆ ಮಾಡುವ ಚುನಾವಣೆ ಅಲ್ಲ,  ಅಭಿವೃದ್ಧಿಯನ್ನು ನೋಡಿ, ದೇಶದ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಆಗಿರುವ ಕೆಲಸದ ದೃಷ್ಟಿಯಿಂದ ಜನರು ಮತ ನೀಡುತ್ತಾರೆ ಎಂದರು.

ಇನ್ನು ಯತೀಂದ್ರ ಸಿದ್ದರಾಮಯ್ಯ ಅವರ ಗೂಂಡಾ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಂಸದರು, ಸರ್ದಾರ್ ಪಟೇಲರಿಗೆ ಹೋಲಿಕೆ ಮಾಡುವಂಥ ಅಮಿತ್ ಶಾ ಅವರ ಬಗ್ಗೆ ಯತೀಂದ್ರ ಗೂಂಡಾ ಎಂದಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿ ದೇಶಕ್ಕೆ ಅನುಕೂಲ ಮಾಡುತ್ತಿರುವ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಇದೇ ವೇಳೆ ಕೆಎಸ್ ಈಶ್ವರಪ್ಪ ಅವರ ಬಂಡಾಯ ವಿಚಾರ ಪ್ರಸ್ತಾಪಿಸಿದ ಸಂಸದರು, ಈಶ್ವರಪ್ಪನವರ ಬಗ್ಗೆ ನನಗೆ ಗೌರವ ಇದೆ. ಎರಡು ವಾರಗಳ ಹಿಂದೆ ರಾಘಣ್ಣನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದಿದ್ದರು. ಆದರೆ ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ರಾಜಕಾರಣ, ಅಧಿಕಾರ ಬರುತ್ತದೆ ಹೋಗುತ್ತದೆ. ಹಿಂದುತ್ವ ವಿರೋಧಿ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಹಿಂದುತ್ವವನ್ನು ಇನ್ನೊಬ್ಬರ ಬಳಿ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಆಗ ವಿಜಯೇಂದ್ರರನ್ನು ಹೊಗಳಿದ್ದ ಈಶ್ವರಪ್ಪ ಈಗ ಬದಲಾಗಿದ್ದು ಯಾಕೆ?: ಬಿ.ವೈ.ರಾಘವೇಂದ್ರ

 ಈ ಚುನಾವಣೆ ಅಭಿವೃದ್ಧಿ ಪರವಾಗಿ, ಅಭಿವೃದ್ಧಿಗೆ ಮನ್ನಣೆ ಕೊಡದವರ ನಡುವೆ ನೆಡೆಯುವ ಚುನಾವಣೆಯಾಗಿದೆ. ಕಾಂಗ್ರೆಸ್ ನಾಯಕರನ್ನು ಆಪರೇಷನ್ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಕ್ಷದ ಕಾರ್ಯಕರ್ತರು, ನಾಯಕರು ಬೇಸತ್ತಿದ್ದಾರೆ. ಅವರೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ