ರಾಜಮನೆತನಕ್ಕೆ ಟಿಡಿಆರ್ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿಯೇಟು ನೀಡಿದೆ. ಹಿಂದೆ ನೀಡಿದ್ದ ಆದೇಶದ ಮರುಪರಿಶೀಲನೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಆ ಮೂಲಕ ಈ ವಿಚಾರದಲ್ಲು ಸುಗ್ರೀವಾಜ್ಞೆ ರೂಪಿಸಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇನ್ನೊಂದೆಡೆ ಪ್ರಯಾಗ್ರಾಜ್ನ ಮಹಾಕುಂಭ ಮೇಳಕ್ಕೆ ಬಂದ ಭಕ್ತಾದಿಗಳ ಸಂಖ್ಯೆ 50 ಕೋಟಿ ಗಡಿ ದಾಟಿದೆ. ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ಸಿಎಂ ಯಾರಾಗುತ್ತಾರೆ ಅನ್ನೋ ಸಸ್ಪೆನ್ಸ್ ಕೂಡ ಮುಂದುವರಿದಿದೆ.
09:56 PM (IST) Feb 15
08:54 PM (IST) Feb 15
08:35 PM (IST) Feb 15
ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ತುಳಿಯುವುದು ಎಂದರೆ ಖುಷಿ. ಎಸ್ಸಿ ಗಳಿಗೆ ತುಳಿದರೆ ಎಸ್ಟಿ ಅವರಿಗೆ ಖುಷಿ. ಎಸ್ಟಿ ಯವರಿಗೆ ತುಳಿದರೆ ಒಬಿಸಿಯವರಿಗೆ ಖುಷಿ. ಒಬಿಸಿಯವರನ್ನ ಇನ್ನೊಬ್ಬರು ತುಳಿದರೆ ಅವರಿಗೆ ಖುಷಿ. ನನ್ನ ಕೆಳಗೆ ಇನ್ನೊಬ್ಬರಿದ್ದಾರೆ ಎನ್ನುವ ಖುಷಿ ನಮಗೆ. ಇದರಿಂದ ನಾವು ಹೊರಬರಬೇಕಿದೆ. ನಾವೆಲ್ಲ ಒಂದಾಗಿ ಬದುಕಬೇಕು. ಮಹಾನ್ ನಾಯಕರು ನಮಗೆ ಹೋರಾಟದ ದಾರಿ ತೋರಿಸಿದ್ದಾರೆ. ಅನಿಷ್ಟ ಪದ್ದತಿ ಆಚರಣೆಗಳಲ್ಲಿ ಉತ್ತರ ಭಾರತಕ್ಕೆ ಹೋಲಿಸಿದಲ್ಲಿ ನಮ್ಮ ದಕ್ಷಿಣ ಭಾರತ ಉತ್ತಮವಾಗಿದೆ. ಅಲ್ಲಿ ದಲಿತರು ಮದುವೆ ದಿನ ಕುದುರೆ ಏರುವ ಹಾಗಿಲ್ಲ,ಇಲ್ಲೆಲ್ಲ ಡಿ ಜೆ ಹಚ್ಚುತ್ತೀರ. ಪಂಜಾಬ್ ,ಯುಪಿ,ಬಿಹಾರ ಗಳ ನಂತಹ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.
08:11 PM (IST) Feb 15
ನಮ್ಮ ಪಕ್ಷದ ನಾಯಕರನ್ನ ಭೇಟಿ ಮಾಡೋಕೆ ಯಾವ ನಿರ್ಬಂಧವೂ ಇಲ್ಲ. ನಾನೂ ಮೊನ್ನೆ ದೆಲ್ಲಿಗೆ ಹೋಗಿದ್ದೆ ,ಇದೆಲ್ಲ ನಮ್ಮ ಆಂತರಿಕ ವಿಚಾರ. ರಾಜಕೀಯ ಪಕ್ಷದಲ್ಲಿ ಇದೆಲ್ಲ ಇದ್ದಿದ್ದೆ,ಸಾಧ್ಯತೆಗಳ ನಡೆಯೇ ರಾಜಕಾರಣ. ಪೈಪೋಟಿ ಇರಬೇಕು ಆದರೆ ಆರೋಗ್ಯಕರವಾಗಿರಬೇಕು. ನಮ್ಮದು ಆರೋಗ್ಯಕರ ಪೈಪೋಟಿ ಆದರೆ ಬಿಜೆಪಿದ್ದು ಅನಾರೋಗ್ಯಕರ ಪೈಪೋಟಿ. ಬಿಜೆಪಿಯಲ್ಲಿ ಒಬ್ಬರ ಮೇಲೊಬ್ಬರು ಕೆಸರೆರೆಚಾಟ ,ಆಪಾದನೆ ,ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಬಿಜೆಪಿ ರೀತಿಯ ಕೆಟ್ಟ ಪರಿಸ್ಥಿತಿಗೆ ನಾವು ಹೋಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
07:36 PM (IST) Feb 15
06:16 PM (IST) Feb 15
05:31 PM (IST) Feb 15
04:52 PM (IST) Feb 15
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ₹45 ಕೋಟಿ ನವೀಕರಣದ ಬಗ್ಗೆ ತನಿಖೆಗೆ ಕೇಂದ್ರ ಆದೇಶಿಸಿದೆ. 40,000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಭವನ ನಿರ್ಮಾಣದಲ್ಲಿ ಕಟ್ಟಡ ನಿಯಮಗಳ ಉಲ್ಲಂಘನೆ ಆರೋಪದ ಬಗ್ಗೆ ಸಿವಿಸಿ ತನಿಖೆಗೆ ಆದೇಶಿಸಿದೆ.
ಅಧಿಕಾರ ಕಳೆದುಕೊಳ್ತಿದಂತೆಯೇ ಕೇಂದ್ರದಿಂದ ಕೇಜ್ರಿಗೆ ಶಾಕ್, ಮನೆ ನವೀಕರಣದ ತನಿಖೆಗೆ ಆದೇಶ
03:32 PM (IST) Feb 15
02:58 PM (IST) Feb 15
ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದಿರುವ ತೆಲಂಗಾಣ ಸಿಎಂ ಮಾತಿಗೆ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಏನಿದು ವಿಷ್ಯ?
02:36 PM (IST) Feb 15
ಕರಾವಳಿ ಭದ್ರತೆಗೆ ಇಂಧನ ಕಡಿತದಿಂದ ತೊಂದರೆಯಾಗಿದೆ. ಕರಾವಳಿ ಕಾವಲು ಪಡೆಯ ಇಂಧನ ಪೂರೈಕೆಯಲ್ಲಿ ರಾಜ್ಯ ಸರ್ಕಾರ ಕಡಿತ ಮಾಡಿದೆ. ಇದರಿಂದ ಗಸ್ತು ತಿರುಗುವ ಅವಧಿ ಕಡಿಮೆಯಾಗಿದ್ದು, ಡ್ರಗ್ಸ್, ಭಯೋತ್ಪಾದನೆಗೆ ಅವಕಾಶವಾಗುವ ಆತಂಕವಿದೆ. ಆರ್ಥಿಕ ಮಿತವ್ಯಯದ ನೆಪದಲ್ಲಿ ಭದ್ರತೆಗೆ ಹಿನ್ನಡೆಯುಂಟಾಗಿದೆ.
01:53 PM (IST) Feb 15
ಬೀದರ್ನಲ್ಲಿ ನಡೆದ 93 ಲಕ್ಷ ರೂ. ದರೋಡೆ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಜನವರಿ 16 ರಂದು ನಡೆದ ಈ ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಗುಂಡು ಹಾರಿಸಿ ಹಣದ ಪೆಟ್ಟಿಗೆಯನ್ನು ದೋಚಿದ್ದರು.
ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!
01:07 PM (IST) Feb 15
ಬೆಂಗಳೂರಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಜಾತಿ/ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದೆಯೇ? ಚಿಂತಿಸಬೇಡಿ! ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. 9019913319 ಸಂಖ್ಯೆಗೆ ಕರೆ ಮಾಡಿ.
ಇಲ್ಲಿದೆ ಹೆಚ್ಚಿನ ಮಾಹಿತಿ: ವಿಲೇಜ್ ಅಕೌಂಟೆಂಟ್ ಮುಷ್ಕರ; ಜಾತಿ/ಆದಾಯ ಪ್ರಮಾಣ ಪತ್ರ ಪಡೆಯಲು ಸಹಾಯವಾಣಿ
12:32 PM (IST) Feb 15
ಮಹಾಕುಂಭ ಮೇಳಕ್ಕೆ ಹೋಗಿ ಬರೋ ಭಕ್ತರಿಗೆ ಅನುಕೂಲವಾಗೋಕೆ ಫೆಬ್ರವರಿ 15, 16 ಮತ್ತು 17 ರಂದು ದೆಹಲಿಯಿಂದ ವಾರಣಾಸಿಗೆ ಪ್ರಯಾಗ್ರಾಜ್ ಮೂಲಕ ಸ್ಪೆಷಲ್ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ನಿರ್ಧರಿಸಿದೆ. ಭಕ್ತರಿಗೆ ಇದು ತುಂಬಾ ಅನುಕೂಲವಾಗಲಿದೆ
12:10 PM (IST) Feb 15
ದೇಶಾದ್ಯಂತ ರೇಷನ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. ರೇಷನ್ ಬದಲು ನಗದು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಹೊಸ ನಿಯಮಗಳು ಯಾರಿಗೆ ಅನ್ವಯಿಸುತ್ತವೆ, ಯಾವಾಗ ಜಾರಿಗೆ ಬರುತ್ತವೆ ಎಂಬುದನ್ನು ತಿಳಿದುಕೊಳ್ಳಿ.
11:27 AM (IST) Feb 15
ಖಜಾನೆ ಖಾಲಿ ಇರುವುದರಿಂದ ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹೋರಾಟದ ಎಚ್ಚರಿಕೆ ನೀಡಲಾಗಿದೆ.
10:30 AM (IST) Feb 15
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ಸಂಚಾರ ಮತ್ತು ಸ್ನಾನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೊರಡಿಸಲಾದ ಸೂಚನೆಗಳ ಪ್ರಕಾರ, ಪರೇಡ್ ಮೇಳ ಪ್ರದೇಶದಿಂದ ಸಂಗಮದ ಕಡೆಗೆ ಸ್ನಾನ ಮಾಡಲು ಬರುವ ಭಕ್ತರು ಸಂಗಮ ಮತ್ತು ಪರೇಡ್ ಪ್ರದೇಶದ ಕಡೆಗೆ ನಿರ್ಮಿಸಲಾದ ಇತರ ಘಾಟ್ಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗುತ್ತದೆ.
09:58 AM (IST) Feb 15
ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳ ಪುನರ್ವಸತಿಗಾಗಿ ಕೇಂದ್ರವು ತನ್ನ ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ ಸುಮಾರು 529.50 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ, ಮಾರ್ಚ್ 31 ರೊಳಗೆ ಕೇರಳವು ಈ ಮೊತ್ತವನ್ನು ಬಳಸಿಕೊಳ್ಳಬೇಕು ಎಂಬ ಷರತ್ತನ್ನು ಹೊಂದಿದೆ ಎಂದು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿದ್ದಾರೆ.
09:56 AM (IST) Feb 15
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ $2.24 ಮಿಲಿಯನ್ (₹19.4 ಕೋಟಿ) ನಗದು ಬಹುಮಾನ ಘೋಷಣೆಯಾಗಿದೆ. ರನ್ನರ್-ಅಪ್ ತಂಡಕ್ಕೆ ₹9.72 ಕೋಟಿ ಬಹುಮಾನ ಸಿಗಲಿದ್ದು, ಒಟ್ಟಾರೆ ಬಹುಮಾನ ಮೊತ್ತ ₹6.9 ಮಿಲಿಯನ್.
ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ ಬಂಪರ್ ನಗದು ಬಹುಮಾನ ಘೋಷಿಸಿದ ಐಸಿಸಿ! 53% ಕ್ಯಾಷ್ ಪ್ರೈಸ್ ಹೈಕ್
09:56 AM (IST) Feb 15
ಉತ್ತರ ಪ್ರದೇಶದ ಮಿರ್ಜಾಪುರ-ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಹಾಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರು ಸಾವು ಕಂಡಿದ್ದಾರೆ. ಸಾವು ಕಂಡಿರುವ ಭಕ್ತರನ್ನು ಛತ್ತೀಸ್ಗಢದವರು ಎಂದು ಗುರುತಿಸಲಾಗಿದೆ. ಭಕ್ತರಿದ್ದ ಬೊಲೊರೋ ಕಾರ್, ಮಧ್ಯಪ್ರದೇಶದ ರಾಜ್ಗಢದಿಂದ ಬರುತ್ತಿದ್ದ ಬಸ್ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ 19 ಮಂದಿಗೆ ಗಾಯಗಳಾಗಿವೆ ಎಂದೂ ವರದಿಯಾಗಿದೆ.
ಪ್ರಯಾಗ್ರಾಜ್ನಲ್ಲಿ ಕಾರು-ಬಸ್ ಡಿಕ್ಕಿ: ಕುಂಭಮೇಳಕ್ಕೆ ಹೊರಟಿದ್ದ 10 ಭಕ್ತರು ಸಾವು
09:28 AM (IST) Feb 15
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಮಹಾಕುಂಭದಲ್ಲಿ ಮೊದಲ ಮೂರು ಶಾಹಿ ಸ್ನಾನ ಮತ್ತು ನಂತರ ಮಾಘ ಪೂರ್ಣಿಮೆಯ ಸ್ನಾನದಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ.
09:14 AM (IST) Feb 15
ಟಿಡಿಆರ್ ಅಥವಾ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು ಅನ್ನೋದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಮುಖ ಅಂಶ. ಇದು ಡೆವಲಪರ್ಗಳು ಆಯಾ ಸ್ಥಳಗಳ ಪ್ರಚಲಿತ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ನೆಲದ ಸ್ಥಳ ಸೂಚ್ಯಂಕ (ಎಫ್ಎಸ್ಐ) ಗಿಂತ ಹೆಚ್ಚಿನದನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಬೆಳೆಯುತ್ತಿರುವ ನಗರೀಕರಣ ಮತ್ತು ಸ್ಥಳಾವಕಾಶದ ಕೊರತೆಯ ಹಿನ್ನೆಲೆಯಲ್ಲಿ, ಟಿಡಿಆರ್ ವಿಶೇಷವಾಗಿ ನಗರಗಳ ಉಪನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಇನ್ನು ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ 15 ಎಕರೆ 39 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೈಸೂರು ಮಹಾರಾಜರ ವಾರಸುದಾರರಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರದ ರೂಪದಲ್ಲಿ ರಾಜ್ಯ ಸರ್ಕಾರ ಆರು ವಾರಗಳಲ್ಲಿ 3,000 ಕೋಟಿ ರೂಪಾಯಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಈಗ ಸುಪ್ರೀಂ ಚಾಟಿ ಬೀಸಿದೆ.
ಈ ಕುರಿತಾದ ಹಿಂದಿನ ವರದಿ ಇಲ್ಲಿದೆ..
Bengaluru: ಅರಮನೆ ಮೈದಾನದ ಜಾಗಕ್ಕಾಗಿ ಮೈಸೂರು ರಾಜಮನೆತನಕ್ಕೆ 3 ಸಾವಿರ ಕೋಟಿ ನೀಡಲಿರುವ ರಾಜ್ಯ ಸರ್ಕಾರ!
08:41 AM (IST) Feb 15
ವಿದೇಶಾಂಗ ಸಚಿವಾಲಯವು ನಾಗರಿಕ ವಿಮಾನಯಾನ ಬ್ಯೂರೋಗೆ ಕಳುಹಿಸಿದ ಲಿಖಿತ ಸಂವಹನದ ಪ್ರಕಾರ, ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಇನ್ನೂ ಎರಡು ವಿಶೇಷ ವಿಮಾನಗಳು ವಾರಾಂತ್ಯದಲ್ಲಿ ಪಂಜಾಬ್ನ ಅಮೃತಸರದಲ್ಲಿ ಇಳಿಯಲಿವೆ.
ಅಮೆರಿಕದಿಂದ ಇಂದು ಮತ್ತೆ 119 ಅಕ್ರಮ ಭಾರತೀಯರ ಗಡೀಪಾರು, ಅಮೃತಸರದಲ್ಲಿ ಲ್ಯಾಂಡ್ ಆಗಲಿದೆ ವಿಮಾನ!
08:20 AM (IST) Feb 15
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಶಂಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 80 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣವೊಂದನ್ನ ಇತ್ಯರ್ಥಗೊಳಿಸುವ ಸಲುವಾಗಿ ವ್ಯಕ್ತಿಯೊರ್ವರಿಂದ ಶಿವಶಂಕರ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇಂದು 80 ಸಾವಿರ ಹಣ ಪಡೆಯುವ ವೇಳೆ ಸಬ್ ಇನ್ಸ್ಪೆಕ್ಟರ್ ಶಿವಶಂಕರ್ ಸಿಕ್ಕಿಬಿದ್ದಿದ್ದಾನೆ.
08:18 AM (IST) Feb 15
ದೆಹಲಿಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಏರಿರುವ ಬಿಜೆಪಿ ತನ್ನ ಸರ್ಕಾರವನ್ನು ಫೆ.19 ಅಥವಾ ಫೆ.20ರಂದು ನಡೆಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿರುವ ಕಾರಣ ಸಿಎಂ ಆಯ್ಕೆ ವಿಳಂಬವಾಗಿದೆ.
ಫೆ.19ಕ್ಕೆ ದೆಹಲಿ ಹೊಸ ಸಿಎಂ ಪಟ್ಟಾಭಿಷೇಕ, ಸಚಿವ, ಸ್ಪೀಕರ್ ಹುದ್ದೆಗೆ ಪೈಪೋಟಿ
07:56 AM (IST) Feb 15
ರಾಜಕೀಯ ಪಕ್ಷಗಳಿಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯಿಸಬೇಕೆಂಬ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು 6 ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.
ಆರ್ಟಿಐ ವ್ಯಾಪ್ತಿಗೆ ರಾಜಕೀಯ ಪಕ್ಷಗಳು?; ಆಯೋಗ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
07:54 AM (IST) Feb 15
300ಕ್ಕೂ ಹೆಚ್ಚು ಸಿಬ್ಬಂದಿ ಕಿತ್ತುಹಾಕಿದ ಪ್ರಕರಣದಲ್ಲಿ ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ರಾಜ್ಯದ ಕಾರ್ಮಿಕ ಇಲಾಖೆಗೆ ಕೇಂದ್ರ ಸೂಚನೆ ನೀಡಿದೆ.
ಏಕಕಾಲಕ್ಕೆ 300ಕ್ಕೂ ಅಧಿಕ ಸಿಬ್ಬಂದಿ ವಜಾ ಪ್ರಕರಣ; ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ
07:54 AM (IST) Feb 15
2024ರ ಲೋಕಸಭೆ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳು ಖರ್ಚು ಮಾಡಿದ ಹಣದ ವಿವರವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಶಶಿ ತರೂರ್ ಗರಿಷ್ಠ, ಪ್ರತಿಮಾ ಮಂಡಲ್ ಅತಿ ಕನಿಷ್ಠ ಹಣ ಖರ್ಚು ಮಾಡಿದ್ದಾರೆ.
ಲೋಕಸಭೆ ಚುನಾವಣೆ ವೆಚ್ಚ: ಟಾಪ್ 15 ಸಂಸದರಲ್ಲಿ ಮೂರು ಕನ್ನಡಿಗರು
07:53 AM (IST) Feb 15
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ನವೆಂಬರ್ 15-16 ರೊಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ಖಚಿತ ಎಂದು ಹೇಳಿದ್ದಾರೆ. ಬದಲಾವಣೆಯ ನಂತರ ಕಾಂಗ್ರೆಸ್ನಲ್ಲಿ ಭಿನ್ನಮತ ಉಲ್ಬಣಿಸಲಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಭಿನ್ನಾಭಿಪ್ರಾಯವನ್ನು ಅವರು ಟೀಕಿಸಿದರು.
ನವೆಂಬರ್ 15 ರೊಳಗೆ ಸಿಎಂ ಬದಲಾವಣೆ, ಅನಂತರ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋಟ: ಭವಿಷ್ಯ ನುಡಿದ ಆರ್ ಅಶೋಕ್!
07:45 AM (IST) Feb 15
ರಸ್ತೆ ನಿರ್ಮಾಣಕ್ಕೆ ಮೈಸೂರು ಅರಮನೆ ಜಾಗ ಬಳಸಲು ಉದ್ದೇಶಿಸಿದ್ದ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಟಿಡಿಆರ್ ಪಾವತಿಸುವಂತೆ ಸೂಚಿಸಿದೆ. ಈ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಮೈಸೂರು ಅರಮನೆ ಜಮೀನು ವಿವಾದ: ರಾಜವಂಶಸ್ಥರಿಗೆ ಟಿಡಿಆರ್ ಕೊಡಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು!