ಮುಂದುವರೆದ ವರ್ಗಾವಣೆ ಪರ್ವ: ಶಾಲಿನಿ‌ ರಜನೀಶ್ ಸೇರಿ 11 IAS ಆಫೀಸರ್ಸ್ ಎತ್ತಂಗಡಿ

Published : Nov 30, 2018, 05:28 PM IST
ಮುಂದುವರೆದ ವರ್ಗಾವಣೆ ಪರ್ವ: ಶಾಲಿನಿ‌ ರಜನೀಶ್ ಸೇರಿ 11 IAS ಆಫೀಸರ್ಸ್ ಎತ್ತಂಗಡಿ

ಸಾರಾಂಶ

ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು 11 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರ ಹೀಗಿದೆ.

ಬೆಂಗಳೂರು, [ನ.30]: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು [ಶುಕ್ರವಾರ] 11 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದಿಂದ 5 ಐಎಎಸ್‌ ಅಧಿಕಾರಿಗಳ ವರ್ಗ

ಸರ್ಕಾರದ ಕಾರ್ಯದರ್ಶಿ ಕುಮ್ಟಾ ಪ್ರಕಾಶ್ ಅವರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನರಾಜ್ ಸೇರಿದಂತೆ ಒಟ್ಟು 11 ಮಂದಿ ಐಎಎಸ್​​ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. 

 ವರ್ಗಾವಣೆಯಾದ ಅಧಿಕಾರಿಗಳ ವಿವರ ಹೀಗಿದೆ.
ಶಾಲಿನಿ‌ ರಜನೀಶ್-ಪ್ರಧಾನ ಕಾರ್ಯದರ್ಶಿ, ಯೋಜನಾ ಇಲಾಖೆ
ಮಂಜುಳ-ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಕುಮಾರ್ ನಾಯಕ್-ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ
ಪೊನ್ನುರಾಜ್-ಎಂಡಿ, ಕೆಪಿಸಿಎಲ್
ಶಿವಯೋಗಿ-ಎಂಡಿ, ಕೆಎಸ್​​ಆರ್​ಟಿಸಿ
ಎನ್.ವಿ‌.ಪ್ರಸಾದ್-ಎಂಡಿ, ಬಿಎಂಟಿಸಿ
ಡಿ.ರಂದೀಪ್-ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
ಗೋಪಾಲಕೃಷ್ಣ- ಎಂಡಿ, ಚಾಮುಂಡೇಶ್ವರಿ ಪವರ್ ಕಾರ್ಪೋರೇಷನ್
ವಸಂತ ಕುಮಾರ್-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
ಜಾಫರ್-ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಬೋರ್ಡ್ ನಿರ್ದೇಶಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!