ಬೋಗಿಬೀಲ್ ಸೇತುವೆ ಉದ್ಘಾಟನೆಗಿಲ್ಲ ಆಹ್ವಾನ: ದೊಡ್ಡ ಗೌಡರ ಅಪಸ್ವರ!

Published : Dec 25, 2018, 06:35 PM ISTUpdated : Dec 25, 2018, 06:47 PM IST
ಬೋಗಿಬೀಲ್ ಸೇತುವೆ ಉದ್ಘಾಟನೆಗಿಲ್ಲ ಆಹ್ವಾನ: ದೊಡ್ಡ ಗೌಡರ ಅಪಸ್ವರ!

ಸಾರಾಂಶ

ದೇಶದ ಅತಿ ಉದ್ದದ ಬೋಗಿಬೀಲ್ ಸೇತುವೆ ಲೋಕಾರ್ಪಣೆ| 4.9 ಕಿ.ಮೀ. ಉದ್ದದ ರೈಲ್ ರೋಡ್ ಉದ್ಘಾಟಿಸಿದ ಪ್ರಧಾನಿ ಮೋದಿ| ಉದ್ಘಾಟನೆಗೆ ಆಹ್ವಾನ ನೀಡದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅಪಸ್ವರ| ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ| ಸಮಾರಂಭಕ್ಕೆ ಆಹ್ವಾನಿಸದಿರುವುದು ನೋವುಂಟು ಮಾಡಿದೆ ಎಂದ ದೇವೇಗೌಡ

ಬೆಂಗಳೂರು(ಡಿ.25): ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ಉದ್ದದ ರೖಲ್ ರೋಡ್ ಆದ ಬೋಗಿಬೀಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ ಮಧ್ಯೆ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸದ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಪಸ್ವರ ಎತ್ತಿದ್ದಾರೆ.

‘ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ನನಗೆ ಅಹ್ವಾನ ನೀಡಿಲ್ಲ..’ ಎಂದು ದೇವೇಗೌಡ ಅಸಮಾಧಾನ ಹೊರ ಹಾಕಿದ್ದಾರೆ. ‘ನನ್ನನ್ನು ಯಾರು ಉದ್ಘಾಟನೆಗೆ ಕರೆದಿಲ್ಲ.ನಾವು ಮಾಡಿದ ಕೆಲಸ ಯಾರು ನೆನಪು ಇಟ್ಟುಕೊಳ್ತಾರೆ ಹೇಳಿ.ಅದೇನೂ ದೊಡ್ಡ ವಿಷಯ ಅಲ್ಲ ಬಿಡಿ..’ಎಂದು ಮಾಜಿ ಪ್ರಧಾನಿ ಮುಗುಳ್ನಕ್ಕರು. 

ಕಾಶ್ಮೀರ ರೈಲ್ವೆ ಯೋಜನೆ, ದೆಹಲಿ ಮೆಟ್ರೋ ಯೋಜನೆಗಳಿಗೆಲ್ಲಾ ತಾವು ಪ್ರಧಾನಿಯಾಗಿದ್ದಾಗಲೇ ಮಂಜೂರಾತಿ ದೊರಕಿದ್ದು ಎಂದೂ ದೇವೇಗೌಡ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಅದೆಲ್ಲವನ್ನೂ ಮರೆತು ಕೇವಲ ಪ್ರಧಾನಿ ಮೋದಿ ಅವರನ್ನು ವಿಜೃಂಭಿಸುತ್ತಿದೆ ಎಂದು ದೇವೇಗೌಡರು ಹರಿಹಾಯ್ದರು.

ಪ್ರಧಾನಿ ಮೋದಿಯಿಂದ ದೇಶದ ಉದ್ದದ ರೈಲ್ ರೋಡ್ ಲೋಕಾರ್ಪಣೆ!

ಗೌಡರು ಶಂಕು ಸ್ಥಾಪನೆ ಮಾಡಿದ್ದ ಅತಿ ಉದ್ದನೆ ಸೇತುವೆ ಲೋಕಾರ್ಪಣೆಗೆ ಸಿದ್ಧ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ