35 ವರ್ಷದಲ್ಲಿ ಒಮ್ಮೆಯೂ ಅಪಘಾತ ಮಾಡದ ಬಿಎಂಟಿಸಿ ಚಾಲಕನಿಗೆ ಪ್ರಶಸ್ತಿ

Published : Apr 18, 2023, 07:15 AM ISTUpdated : Apr 18, 2023, 07:19 AM IST
35 ವರ್ಷದಲ್ಲಿ ಒಮ್ಮೆಯೂ ಅಪಘಾತ ಮಾಡದ ಬಿಎಂಟಿಸಿ ಚಾಲಕನಿಗೆ ಪ್ರಶಸ್ತಿ

ಸಾರಾಂಶ

ನವದೆಹಲಿಯ ಎಎಸ್‌ಆರ್‌ಟಿಯು ಸಂಸ್ಥೆ ಅಪಘಾತ ರಹಿತ ಚಾಲಕರಿಗೆ ನೀಡುವ ‘ಹೀರೋಸ್‌ ಆನ್‌ ದ ರೋಡ್‌’ ರಾಷ್ಟ್ರದ ಮಟ್ಟದ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಯ ಮೂವರು ಚಾಲಕರು ಭಾಜನರಾಗಿದ್ದಾರೆ.

ಬೆಂಗಳೂರು (ಏ.18) : ನವದೆಹಲಿಯ ಎಎಸ್‌ಆರ್‌ಟಿಯು ಸಂಸ್ಥೆ ಅಪಘಾತ ರಹಿತ ಚಾಲಕರಿಗೆ ನೀಡುವ ‘ಹೀರೋಸ್‌ ಆನ್‌ ದ ರೋಡ್‌’ ರಾಷ್ಟ್ರದ ಮಟ್ಟದ ಪ್ರಶಸ್ತಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಯ ಮೂವರು ಚಾಲಕರು ಭಾಜನರಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗ(KSRTC Mysore Division)ದ ಎಜಾಜ್‌ ಅಹಮದ್‌ ಷರೀಫ್‌, ಇಶಾಕ್‌ ಶರೀಫ್‌ ಮತ್ತು ಬಿಎಂಟಿಸಿಯ ಲಕ್ಷ್ಮಣ್‌ ರೆಡ್ಡಿ(BMTC Laxmanreddy) ಅವರು ‘ಹೀರೋಸ್‌ ಆನ್‌ ದ ರೋಡ್‌’(Heroes on the Road) ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

Bengaluru: ಬಸ್ ಹತ್ತುವಾಗ ಬಿದ್ದ ವ್ಯಕ್ತಿ: ಚಕ್ರ ಹರಿದು 2 ಕಾಲು ಜಖಂ

ಲಕ್ಷ್ಮಣ್‌ ರೆಡ್ಡಿ ಅವರು ಸುಮಾರು 35 ವರ್ಷ ಬಿಎಂಟಿಸಿ ಸಂಸ್ಥೆಯ ಬಸ್‌ ಚಾಲಕರಾಗಿ ಸೇವೆ ಆರಂಭಿಸಿದ್ದು, ಈವರೆಗೂ ಯಾವುದೇ ಅಪಘಾತ ಮಾಡಿಲ್ಲ. ಅದೇ ರೀತಿ ಎಜಾಜ್‌ ಅಹಮದ್‌ ಷರೀಫ್‌, ಇಶಾಕ್‌ ಶರೀಫ್‌ ಅವರು ಕಳೆದ 33 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗಿದ್ದು ನಗರ, ಗ್ರಾಮಾಂತರ ಮತ್ತು ಅಂತರ್‌ ನಗರ ಸಂಚಾರ ಸಾರಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಅಪಘಾತ ರಹಿತ ಬಸ್‌ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

IPL 2023: ಆರ್‌ಸಿಬಿ ಪಂದ್ಯ ಹಿನ್ನೆಲೆ ಬಿಎಂಟಿಸಿ ಹಾಗೂ ಮೆಟ್ರೋ ಅವಧಿ ವಿಸ್ತರಣೆ

ಈ ಮೂವರು ಅಪಘಾತ ರಹಿತ ಚಾಲಕರಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿರುವ ಎಎಸ್‌ಆರ್‌ಟಿಯು ಸಂಸ್ಥೆ ‘ಹೀರೋಸ್‌ ಆನ್‌ ದ ರೋಡ್‌’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಏಪ್ರಿಲ್‌ 18ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮೂವರು ಚಾಲಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ