ಬಮೂಲ್‌ನಿಂದ ಬಾಂಗ್ಲಾಗೆ 600 ಟನ್‌ ಹಾಲಿನ ಪುಡಿ ರಫ್ತು

Kannadaprabha News   | Asianet News
Published : Jun 16, 2021, 08:40 AM IST
ಬಮೂಲ್‌ನಿಂದ ಬಾಂಗ್ಲಾಗೆ  600 ಟನ್‌ ಹಾಲಿನ ಪುಡಿ ರಫ್ತು

ಸಾರಾಂಶ

ಬಾಂಗ್ಲಾದೇಶಕ್ಕೆ 600 ಟನ್‌ ಕೆನೆರಹಿತ ಹಾಲಿನ ಪುಡಿ  ರಪ್ತು  ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ಸತೀಶ್‌ ಮಾಹಿತಿ  ಹಾಲಿನ ಪುಡಿ ಹೊತ್ತ ರಫ್ತು ವಾಹನಗಳಿಗೆ ಹಸಿರು ನಿಶಾನೆ 

ಕನಕಪುರ (ಜೂ.16):  ಬೆಂಗಳೂರು ಹಾಲು ಒಕ್ಕೂಟ(ಬಮೂಲ್‌)ದ ವತಿಯಿಂದ ನೆರೆ ರಾಷ್ಟ್ರ ಬಾಂಗ್ಲಾದೇಶಕ್ಕೆ 600 ಟನ್‌ ಕೆನೆರಹಿತ ಹಾಲಿನ ಪುಡಿಯನ್ನು ರಪ್ತು ಮಾಡಲಾಗುತ್ತಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ಸತೀಶ್‌ ತಿಳಿಸಿದರು. 

ದನದ ಹಾಲಿನ ಬದಲು ಸೋಯಾ ಹಾಲು ಸೇವಿಸಿ .. ಮ್ಯಾಜಿಕ್ ನೀವೇ ನೋಡಿ

ತಾಲೂಕಿನ ಶಿವನಹಳ್ಳಿ ಬಳಿ ಇರುವ ಮೆಗಾ ಡೇರಿಯ ಆವರಣದಲ್ಲಿ ಹಾಲಿನ ಪುಡಿ ಹೊತ್ತ ರಫ್ತು ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಬಮೂಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಕ್ಕೆ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯ ಯಶಸ್ಸು ಆಗಲು ಡೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶ್ರಮ ಮತ್ತು ಬಮೂಲ್‌ ನಿರ್ದೇಶಕರ ರೈತಪರ ಚಿಂತನೆಗಳೇ ಕಾರಣ ಎಂದರು.

ಹಾಲು ಸೇರಿ ಆಹಾರ ವಸ್ತುಗಳು ಹಾಳಾಗದಂತೆ ತಡಯಲಿವೆ ಪರಿಹಾರ!

ರಾಜ್ಯದ ಹದಿನಾಲ್ಕು ಒಕ್ಕೂಟಗಳ ಪೈಕಿ ಬೆಂಗಳೂರು ಹಾಲು ಒಕ್ಕೂಟವು ಇನ್ನೂರು ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದೆ. ಒಕ್ಕೂಟದ ವತಿಯಿಂದ ಉತ್ಪಾದನೆಯಾಗುವ ಯು.ಎಸ್‌ಡಿ.(ಟೋನಡ್‌ ಮಿಲ್ಕ…) ಹಾಲನ್ನು 2015 ರಿಂದ ಹತ್ತೊಂಬತ್ತು ಹೊರ ರಾಷ್ಟ್ರ ಗಳಿಗೆ ರಪ್ತು ಮಾಡುವ ಮೂಲಕ 50 -60 ಕೋಟಿ ರು. ವಹಿವಾಟು ನಡೆಸಲಾಗಿದೆ.

ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಸಹಕಾರ, ಸಲಹೆ ಜೊತೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ 2025ರ ವೇಳೆಗೆ ಸುಮಾರು 250 ಕೋಟಿ ರು. ರಪ್ತು ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ
ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು