ಮೊದಲ ಚಿತ್ರ ರಿಲೀಸ್‌ಗೂ ಮುನ್ನವೇ ಜಮೀರ್ ಪುತ್ರನಿಗೆ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್!

Suvarna News   | Asianet News
Published : Feb 13, 2021, 11:45 AM ISTUpdated : Feb 13, 2021, 12:03 PM IST
ಮೊದಲ ಚಿತ್ರ ರಿಲೀಸ್‌ಗೂ ಮುನ್ನವೇ ಜಮೀರ್ ಪುತ್ರನಿಗೆ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್!

ಸಾರಾಂಶ

ಬನಾರಸ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಕೈ ತುಂಬಾ ಆಫರ್ಸ್ ಪಡೆದುಕೊಂಡ ಜಾಯೀದ್ ಖಾನ್. ನಾಗಶೇಖರ್‌ ಚಿತ್ರಕ್ಕೆ ಒಪ್ಪಿಗೆ, ಕನ್ನಡ ಕಲಿತದ್ದು ಹೀಗೆ....

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್‌ ಪುತ್ರ ಜಾಯೀದ್ ಖಾನ್‌ 'ಬನಾರಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ಅಂದ್ಮೇಲೆ ಕನ್ನಡದಲ್ಲಿ ಮಾತನಾಡಲೇ ಬೇಕು. ಹಾಗಾಗಿ ಜಾಯೀದ್ ಖಾನ್ ಹೀರೋ ಆಗಲು ಮಾಡಿಕೊಂಡ ತಯಾರಿ ಹೇಗಿದೆ ಗೊತ್ತಾ? ನಾಗಶೇಖರ್ ಚಿತ್ರಕ್ಕೆ ತಮನ್ನಾ ಅಥವಾ ಪೂಜೆ ಹೆಗ್ಡೆ ಬರೋದು ಕನ್ಫಾರ್ಮ್?

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಜಾಯೀದ್ ಕನ್ನಡವನ್ನು ಸ್ಪಷ್ಟವಾಗಿ ಮೊದಲು ಮಾತನಾಡುತ್ತಿರಲಿಲ್ಲವಂತೆ. ಏನಾದರೂ ಮಾಡಿ ಕನ್ನಡದಲ್ಲಿ ಪರ್ಫೆಕ್ಟ್‌ ಆಗಬೇಕೆಂದು ರಂಗಕರ್ಮಿ ಗೌರಿದತ್ತು ಅವರ ಬಳಿ ಸುಮಾರು 8 ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ. ಕನ್ನಡ ಮಾತನಾಡುವವರ ಜೊತೆ ಸ್ನೇಹ ಮಾಡಿ ಅವರೊಟ್ಟಿಗೆ ಕನ್ನಡದಲ್ಲಿ ಮಾತನಾಡಿ, ಈಗ ಪರ್ಫೆಕ್ಟ್ ಆಗಿದ್ದಾರಂತೆ. ಜಾಯೀದ್ ಶ್ರಮವನ್ನು ಬನಾರಸ್ ನಿರ್ದೇಶಕ ಜಯತೀರ್ಥ ಕೂಡ ಮೆಚ್ಚಿಕೊಂಡಿದ್ದಾರಂತೆ, ಈ ವಿಚಾರದ ಬಗ್ಗೆ ಸ್ವತಃ ಜಾಯೀದ್ ಖಾಸಗಿ ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದಾರೆ. 

ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ನಟನೆಯ ಚಿತ್ರ ಸದ್ಯದಲ್ಲೇ ತೆರೆಗೆ

ಬನಾಸರ್‌ ಸಿನಿಮಾ ಶೇ.90 ಚಿತ್ರೀಕರಣ ಮುಗಿಸಿದೆ. ಈ ನಡುವೆ ಜಾಯೀದ್ ನಿರ್ದೇಶಕ ನಾಗಶೇಖರ್‌ ಬಳಿ ಮತ್ತೊಂದು ಚಿತ್ರದ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ. ಚಿತ್ರಕತೆ ತುಂಬಾನೇ ವಿಭಿನ್ನವಾಗಿದ್ದ ಕಾರಣ ಆಫ್ರಿಕಾ ಹಾಗೂ ಅಮೆರಿಕದಲ್ಲಿ ಚಿತ್ರೀಕರಣ ಮಾಡಬೇಕೆಂಬುದು ನಾಗಶೇಖರ್ ಕನಸಾಗಿದೆ. ನಾಯಕಿಯಾಗಿ ತಮನ್ನಾ ಹಾಗೂ ಪೂಜೆ ಹೆಗ್ಡೆ ಕರೆತರಲು ಮಾತುಕತೆ ನಡೆಯುತ್ತಿದ್ದು, ಖಂಡಿತವಾಗಿಯೂ ಜಾಯೀದ್‌ಗೆ ಬಿಗ್ ಓಪನಿಂಗ್ ಸಿಗುವುದರಲ್ಲಿ ಅನುಮಾವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!
ದರ್ಶನ್ ಹೇಗಿದ್ದಾರೆ? ಜೈಲಿಂದ ಹೊರಬಂದು ಅಭಿಮಾನಿಗಳ ಆತಂಕ ದೂರಮಾಡಿದ ಶಾಸಕ ವೀರೇಂದ್ರ ಪಪ್ಪಿ!