ಹೀರೋಗೆ ಪೈರಸಿ ಕಾಟ.. ಆಪ್ ಬ್ಯಾನ್ ಮಾಡ್ತಾರೆ..ಇಂಥದ್ದಕ್ಕೆ ಬ್ರೇಕ್ ಯಾವಾಗ?

Published : Mar 07, 2021, 06:26 PM ISTUpdated : Mar 07, 2021, 06:28 PM IST
ಹೀರೋಗೆ ಪೈರಸಿ ಕಾಟ.. ಆಪ್ ಬ್ಯಾನ್ ಮಾಡ್ತಾರೆ..ಇಂಥದ್ದಕ್ಕೆ ಬ್ರೇಕ್ ಯಾವಾಗ?

ಸಾರಾಂಶ

ರಿಷಬ್ ಶೆಟ್ಟಿ ಹೀರೋಕ್ಕೆ ಪೈರಸಿ ಕಾಟ/ ನೊಂದು ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡ ನಟ-ನಿರ್ದೇಶಕ/  ಜನರೇ ಮುಂದಾಗಿ ಇಮಥವನ್ನು ತಡೆಯಬವೇಕು/ ಆಪ್ ಗಳನ್ನು ಬ್ಯಾನ್ ಮಾಡುವ ಸರ್ಕಾರ ಇಂಥವುಗಳನ್ನೇಕೆ ಸುಮ್ಮನೆ  ಬಿಡುತ್ತದೆ?

ಬೆಂಗಳೂರು(ಮಾ.  07) ನಿರ್ದೇಶಕ ರಿಷಬ್‌ ಶೆಟ್ಟಿ ನಟರಾಗಿ ಗುರುತಿಸಿಕೊಂಡಿದ್ದಾರೆ.  ಅವರ 'ಹೀರೋ' ಸಿನಿಮಾ ಮಾರ್ಚ್‌ 5ರಂದು ತೆರೆಕಂಡಿದೆ. ಲಾಕ್‌ಡೌನ್‌ ಅವಧಿಯಲ್ಲಿಯೇ 24 ಜನರ ತಂಡ ಕಟ್ಟಿಕೊಂಡು, ಎಸ್ಟೇಟ್‌ವೊಂದರಲ್ಲಿ ಇದ್ದುಕೊಂಡು 'ಹೀರೋ' ಸಿನಿಮಾ ಮಾಡಿದ ಸಂಗತಿಯನ್ನು ಹಂಚಿಕೊಂಡಿದ್ದರು. ಈಗ ಒಂದು ಅತ್ಯಂತ ಬೇಸರವದ ವಿಚಾರವನ್ನು ಹೇಳಿದ್ದಾರೆ.

'ಹೀರೋ'ಗೆ ಪೈರಸಿ  ಹಾವಳಿ ವಕ್ಕರಿಸಿದೆ.  ಯಾರ ಕೈಯಲ್ಲಿ ಏನೂ ಇಲ್ಲ.. ನಮ್ಮ ಸಿನಿಮಾ ಪೈರಸಿಯಾಗಿದೆ ಎಂದು ರಿಷಬ್  ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್  ಮೀಡಿಯಾ ಮೂಳಕ ನೋವು ಹಂಚಿಕೊಂಡಿದ್ದಾರೆ. 

ಹೀರೋ ಹೇಗಿದ್ದಾನೆ; ಸಿನಿಮಾ ವಿಮರ್ಶೆ

ಇಡೀ ಊರು ಮಲಗಿದ್ದಾಗ, ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ತುಂಬ ಕ್ವಿಕ್ ಆಗಿ ಒಂದು ಸಿನಿಮಾ ಮಾಡುವುದಕ್ಕೆ ಹೊರಡುತ್ತೇವೆ. ಅದನ್ನು ಮಾಡುವಾಗ ಅದನ್ನು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಹಾಕುತ್ತೇವೆ ಎಂಬ ಅಂದಾಜು ಕೂಡ ಸಿಗುವುದಿಲ್ಲ.  ನಂತರ ಚಿತ್ರಮಂದಿರ ಓಪನ್ ಆದಾಗ, ಎಲ್ಲ ಕೆಲಸಗಳನ್ನು ಮಾಡಿಕೊಂಡು, ಚಿತ್ರಮಂದಿರಕ್ಕೆ ತರುತ್ತೇವೆ. ಬಹುತೇಕ ಪ್ರೇಕ್ಷಕರಿಗೆ ಸಿನಿಮಾ ತುಂಬ ಇಷ್ಟ ಆಗುತ್ತದೆ ಆದರೆ, ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಪೈರಸಿ ಆದರೆ....ಎಂದು ನೋವಿನಲ್ಲಿ ಮಾತನಾಡಿದ್ದಾರೆ.

ನಮ್ಮ ಸಿನಿಮಾ ಮಾತ್ರವಲ್ಲ. ದೊಡ್ಡವರ ಸಿನಿಮಾ ಪೈರಸಿ ಮಾಡಿದ್ದನ್ನು ಕಂಡಿದ್ದೇವೆ.  ಮೊಬೈಲ್ ಗಳನ್ನು ಒಳಕ್ಕೆ ಬಿಟ್ಟುಕೊಂಡು ಶೂಟ್ ಮಾಡಲು ಅವಕಾಶ ಮಾಡಿಕೊಡುವುದು ಹೇಗೆ? ನಿಮಗೆ ಈ ಬಗೆಯ ಪೈರಸಿ ಲಿಂಕ್ ಕಳಿಸಿದರೆ ಅದನ್ನು ಕಳಿಸಿ. ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕುವ ಕೆಲಸ ಮಾಡುತ್ತೇವೆ.  ಜನರೇ ಮುಂದೆ ನಿಂತು ಇಂಥವುಗಳಿಂದ ದೂರ  ಇರಬೇಕು ಎಂದು ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?