ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಘೋಷಣೆ!

Published : Jan 23, 2021, 08:55 AM IST
ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಘೋಷಣೆ!

ಸಾರಾಂಶ

ಎನ್‌ ಕುಮಾರ್‌, ಬಾಬು ಕೃಷ್ಣಮೂರ್ತಿ, ಇಂದು ವಿಶ್ವನಾಥ್‌, ಇಂದ್ರಜಿತ್‌ ಲಂಕೇಶ್‌ಗೆ ಪುರಸ್ಕಾರ

ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪ್ರಶಸ್ತಿ ಘೋಷಣೆ ಆಗಿದೆ. ನಿರ್ಮಾಪಕ ಎನ್‌ ಕುಮಾರ್‌, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ ಅವರು ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಗಾಯಕಿ ಇಂದು ವಿಶ್ವನಾಥ್‌ ಅವರು ಡಾ.ರಾಜ್‌ಕುಮಾರ್‌ ಪ್ರಶಸ್ತಿ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಭಾರತಿ ವಿಷ್ಣುವರ್ಧನ್‌ ನೀಡುವ ಆರ್‌.ಶೇಷಾದ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! 

ರಾಘವೇಂದ್ರ ಚಿತ್ರವಾಣಿಯ ಸ್ಥಾಪಕ, ಹಿರಿಯ ಸಿನಿಮಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ ಅವರ ಹುಟ್ಟುಹಬ್ಬ ದಿನವಾದ ಜ.25ರಂದು ಸಂಜೆ 5ಕ್ಕೆ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಮತ್ತು 20ನೇ ಪ್ರಶಸ್ತಿ ಸಮಾರಂಭ ಪ್ರದಾನ ನಡೆಯಲಿದ್ದು, ಅಂದು ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ತಿಳಿಸಿದ್ದಾರೆ. ಪ್ರತೀ ವರ್ಷ 11 ಪ್ರಶಸ್ತಿ ನೀಡುತ್ತಿದ್ದ ಸಂಸ್ಥೆ ಈ ವರ್ಷ ಕೊರೋನಾ ಕಾರಣ 4 ಪ್ರಶಸ್ತಿ ಮಾತ್ರ ನೀಡುತ್ತಿದೆ.

ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಶೇ.62 ಭಾರತೀಯರ ಬೆಂಬಲ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಟಾಕ್ಸಿಕ್’ನಲ್ಲಿ ಮೆಲ್ಲಿಸಾ ಪಾತ್ರವೇ ವಿಭಿನ್ನ: ಯಶ್ ಜೊತೆ ನಟಿಸಿದ ಅನುಭವದ ಬಗ್ಗೆ ರುಕ್ಮಿಣಿ ವಸಂತ್ ಮಾತು
ಕುಮಟಾದಲ್ಲಿ ಶೂಟಿಂಗ್.. ಮತ್ತೆ ಕನ್ನಡಕ್ಕೆ ಬಂದ 'ಕೆಜಿಎಫ್‌' ನಟಿ ಶ್ರೀನಿಧಿ ಶೆಟ್ಟಿ; ಹೀರೋ ಯಾರು? ಯಾವ ಸಿನಿಮಾ?