ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

Kannadaprabha News   | Asianet News
Published : Dec 19, 2019, 01:48 PM ISTUpdated : Dec 19, 2019, 03:03 PM IST
ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

ಸಾರಾಂಶ

ಚಂದನವನದ ಸುಂದರ ಚೆಲುವೆ ಆಶಿಕಾ ರಂಗನಾಥ್ ಜೀವನದಲ್ಲಿ ಎಂದೂ ಊಹಿಸಿಕೊಳ್ಳದ ಘಟನೆಯೊಂದು ಸೌತ್ ಆಫ್ರಿಕಾದಲ್ಲಿ ನಡೆದಿದೆ ಇದಕ್ಕೆ ಕಂಗಾಲಾಗದೆ ನಟಿ ಏನ್ ಮಾಡಿದ್ರು ಗೊತ್ತಾ? 

ಆಶಿಕಾ ರಂಗನಾಥ್ ಎರಡು ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರು ಅಲ್ಲಿದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ಸಂಜೆ ಜೊಹಾನ್ಸ್‌ಬರ್ಗ್ ಸ್ಟ್ರೀಟ್‌ನಲ್ಲಿ ಹೋಗುತ್ತಿದ್ದಾಗ ಒಬ್ಬ ರೌಡಿ ಅವರ ಮೇಲೆ ಕಣ್ಣು ಹಾಕಿ, ಕಿರಿಕ್ ಮಾಡಿದ. ಆತನ ಕಪಾಳಕ್ಕೆ ಬಾರಿಸಿದರು ಆಶಿಕಾ. ಆತ ಮತ್ತಷ್ಟು ಕಿರಿಕ್ ಶುರು ಮಾಡಿದ. ಆ ಹೊತ್ತಿಗೆ ಆಶಿಕಾ ನೆರವಿಗೆ ಬಂದವರು ‘ರೋಗ್’ ಖ್ಯಾತಿಯ ಕನ್ನಡದ ನಟ ಇಶಾನ್.

ನೋಟದಲ್ಲೇ ಮಳ್ಳ ಮಾಡ್ತಾಳೆ ಈ ಮಿಲ್ಕ್ ಬ್ಯೂಟಿ!

ಅದು ಸೌತ್ ಆಫ್ರಿಕನ್ ರೌಡಿ ಗ್ಯಾಂಗ್. ಆ ಗ್ಯಾಂಗ್ ಹಾಗೂ ಇಶಾನ್ ನಡುವೆ ಹೊಡೆದಾಟ. ಕೊನೆಗೂ ಇಶಾನ್ ರೌಡಿಗಳನ್ನು ಥಳಿಸಿ, ಬುದ್ಧಿ ಕಲಿಸಿ, ಆಶಿಕಾ ಮುಂದೆ ಹೀರೋ ಆದರು! ಇದು ನಡೆದಿದ್ದು ರಿಯಲ್ ಆಗಿ ಅಲ್ಲ. ಬದಲಿಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಇಶಾನ್ ಹಾಗೂ ಆಶಿಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ರೆಮೋ’ ಚಿತ್ರಕ್ಕಾಗಿ. ರೆಮೋ ಚಿತ್ರತಂಡ ಸೌತ್ ಆಫ್ರಿಕಾ ಹೋಗಿ ಬಂದಿದೆ. ಜೊಹಾನ್ಸ್‌ಬರ್ಗ್, ಕೇಪ್ ಟೌನ್ ಹಾಗೂ ಡರ್ಬನ್‌ನಲ್ಲಿ ಚಿತ್ರದ ಹಾಡು, ಫೈಟು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿದೆ. ಅದು ಚಿತ್ರದ ಪ್ರಮುಖ ಆ್ಯಕ್ಷನ್ ಸನ್ನಿವೇಶ. ಅದನ್ನು ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ನಿರ್ದೇಶಿಸಿದ್ದಾರೆ.

ಫ್ರಾನ್ಸ್‌, ಸ್ವಿಜರ್‌ಲ್ಯಾಂಡ್‌ ಬೀದಿಯಲ್ಲಿ ಕಾಣಿಸಿಕೊಂಡ ಚುಟುಚುಟು ಚೆಲುವೆ!

ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನದಲ್ಲಿ ಹಾಡಿನ ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಚಿತ್ರದ ಮೊದಲಭಾಗದ ಪೂರ್ಣ ಕತೆ ವಿದೇಶದಲ್ಲೇ ನಡೆಯಲಿದೆ. ಸೌತ್ ಆಫ್ರಿಕಾ, ಸಿಂಗಾಪುರ್, ಮಲೇಷಿಯಾ, ಬ್ಯಾಂಕಾಕ್‌ನಲ್ಲಿಯೇ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಒಟ್ಟಾರೆ ಈ ಸಿನಿಮಾದಲ್ಲಿ ಅರ್ಧ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ ಪವನ್ ಒಡೆಯರ್.

ಆಶಿಕಾ ರಂಗನಾಥ್ ಫೋನ್‌ನಲ್ಲಿರುವುದೆಲ್ಲಾ ಲೀಕ್?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?