ಜನರ ಅನುಕಂಪ ದೂರ ಕರ್ಕೊಂಡು ಹೋಗಲ್ಲ, ಆ ಘಟನೆ ನಂತರ ನಗುವುದಕ್ಕೆ ಭಯ ಆಗುತ್ತಿತ್ತು: ಮೇಘನಾ ರಾಜ್

Published : Mar 18, 2025, 03:02 PM ISTUpdated : Mar 18, 2025, 03:06 PM IST
ಜನರ ಅನುಕಂಪ ದೂರ ಕರ್ಕೊಂಡು ಹೋಗಲ್ಲ, ಆ ಘಟನೆ ನಂತರ ನಗುವುದಕ್ಕೆ ಭಯ ಆಗುತ್ತಿತ್ತು: ಮೇಘನಾ ರಾಜ್

ಸಾರಾಂಶ

ಮೇಘನಾ ರಾಜ್ ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ. ತಾಯ್ತನದ ಜವಾಬ್ದಾರಿ ಸುಲಭವಲ್ಲವೆಂದೂ, ಕುಟುಂಬದ ಬೆಂಬಲದಿಂದ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಚಿರು ಅಗಲಿಕೆಯ ನೋವಿನಲ್ಲೂ, ಮಗ ರಾಯನ್‌ನಿಂದ ಸಂತೋಷವಾಗಿದೆ. ಅನುಕಂಪ ಬೇಡ, ಬದಲಾಗಿ ಪ್ರೋತ್ಸಾಹವಿರಲಿ ಎಂದು ಸಂದರ್ಶನದಲ್ಲಿ ಮೇಘನಾ ಹೇಳಿದ್ದಾರೆ.

ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್ ಮಾಡಿದವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯನ್ನು ನೋಡಿ ಕಲಿಯುವುದು ಹೆಚ್ಚಿದೆ. ಆದರೆ ಮೇಘನಾ ರಾಜ್‌ ಮುಂದಿನ ಹೆಜ್ಜೆಗಳ ಬಗ್ಗೆ ಜನರು ಏನನ್ನುತ್ತಿದ್ದರು? ರಾಯನ್ ಬಂದ್ಮೇಲೆ ಎಷ್ಟು ಬದಲಾವಣೆ ಆಗಿದೆ ಎಂದು ಹಂಚಿಕೊಂಡಿದ್ದಾರೆ.

ಕಮ್‌ಬ್ಯಾಕ್‌ ಪದ ಬೇಡ:

'ಏನಿದು ಕಮ್‌ಬ್ಯಾಕ್ ಪದ..ನನಗೆ ಅದು ಇಷ್ಟನೇ ಆಗುವುದಿಲ್ಲ. ಮದರ್‌ಹುಡ್‌ ಅನ್ನೋದು ಅಷ್ಟು ಸುಲಭವಾಗಿ ಇರಲಿಲ್ಲ. ಇತ್ತೀಚಿಗೆ ಬಹುತೇಕ ತಾಯಂದಿರು ಈ ಜರ್ನಿ ತುಂಬಾ ಸುಲಭವಾಗಿದೆ ಅನ್ನೋ ರೀತಿಯಲ್ಲಿ ಇರುತ್ತಾರೆ. ಈ ನಾನು ಮಾಡುತ್ತಿರುವುದು 30 ವರ್ಷಗಳ ಹಿಂದೆ ನನ್ನ ತಾಯಿ ಮಾಡಿದ್ದರು. ನನ್ನ ತಾಯಿ ಕೆಲಸ ಮಾಡಲೇ ಬೇಕಿತ್ತು ತಂದೆ ಕೂಡ ಕೆಲಸ ಮಾಡಲೇ ಬೇಕಿತ್ತು ಏಕೆಂದರೆ ದುಡಿಮೆ ಇರುವುದು ಸಿನಿಮಾದಿಂದಲೇ. ಹೀಗಾಗಿ ನಾನು ತಿಂಗಳು ಮಗು ಆಗಿದ್ದಾಗ ತಾತ ಅಜ್ಜಿ ಜೊತೆ ನನ್ನನ್ನು ಬಿಟ್ಟು ಕೆಲಸ ಮಾಡುತ್ತಿದ್ದರು. ಈಗ ಮಾಡರ್ನ್‌ ತಾಯಂದಿರಿಗೆ ಇರುವ ಪ್ರೆಶರ್‌ನಿಂದ ಒಬ್ಬರೇ ಮಾಡಿಕೊಳ್ಳಲು ಆಗುವುದಿಲ್ಲ. ಹಿಂದೆ ಒಂದು ಮಾತು ಹೇಳುತ್ತಿದ್ದರು ಒಂದು ಮಗು ಬೆಳೆಸುವುದು ಒಂದು ಹಳ್ಳಿ ಬೇಕು ಎಂದು. ಇಂದು ನಾನೇ ಏನೇ ಆಗಿದ್ದರೂ ಅಥವಾ ಇಲ್ಲಿಗೆ ಬಂದಿದ್ದರೂ ಅದಕ್ಕೆ ಕಾರಣ ನನ್ನ ಕುಟುಂಬ. ಮಗನನ್ನು ತಾಯಿ ತಂದೆ ಅಥವಾ ಅಕ್ಕನ ಜೊತೆ ಬಿಟ್ಟು ನಾನು ಕೆಲಸ ಮಾಡಲು ಸಾಧ್ಯವಾಗುತ್ತಿರುವುದು ಇಲ್ಲವಾದರೆ ಆಗುತ್ತಿರಲಿಲ್ಲ. ನನ್ನ ಸುತ್ತ ಇರುವುದು ಸೂಪರ್‌ ಮಹಿಳೆಗಳು ಇವರನ್ನು ನೋಡಿದರೆ ನನಗೆ ಏನೂ ಕಷ್ಟ ಇಲ್ಲ' ಎಂದು ಗೋಲ್ಡ್‌ ಕ್ಲಾಸ್‌ ವಿತ್ ಮಯೂರ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ.

ಅಪ್ಪ ಎದುರು ಬಂದ್ರೆ ಅಳು ಬರುತ್ತೆ; ಮಿಸ್ ಡೀವಾ ಸ್ಪರ್ಧಿಯಲ್ಲಿ ಕೇಳಿದ ಪ್ರಶ್ನೆಗೆ KGF ನಟಿ ಕೊಟ ಉತ್ತರ ವೈರಲ್

ಅನುಕಂಪ ಬೇಡವೇ ಬೇಡ:

'ಚಿರು ಅಗಲಿದಾಗ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೆ. ನನಗೆ ಜನರಿಂದ ಯಾವುದೇ ರೀತಿ ಕರುಣೆ ಬೇಡ ಅವರು ನೋಡಿದಾಗ ನಗುತ್ತಿರಬೇಕು ಅಷ್ಟೇ. ಅನುಕಂಪ ಒಳ್ಳೆಯದೆ ಆದರೆ ತುಂಬಾ ದೂರ ಕರೆದುಕೊಂಡು ಹೋಗುವುದಿಲ್ಲ. ಎಷ್ಟು ದಿನ ಅನುಕಂಪ ತೋರಿಸುತ್ತಾರೆ ಅವರಿಗೆ ಅವರ ಜೀವನ ನೋಡಿಕೊಳ್ಳಲು ಸಾಕಷ್ಟು ಇರಲಿದೆ. ನಾನು ಒಳ್ಳೆಯದನ್ನು ಮಾಡುತ್ತಿದ್ದರೆ ಅದನ್ನು ನೋಡಿ ನೀವು ಮಾಡಿ ಆದರೆ ಯಾವುದೇ ಕಾರಣಕ್ಕೆ ಕೊರುಣೆ ತೋರಿಸಬೇಡಿ. ತುಂಬಾ ಜನರು ನನಗೆ ಆ ಸಮಯದಲ್ಲಿ ಅನುಕಂಪ ತೋರಿಸಿದ್ದಾರೆ. ಆ ಸಮಯದಲ್ಲಿ ತುಂಬಾ ಜನರಿಗೆ ನನ್ನನ್ನು ಹೇಗೆ ಎದುರಿಸಬೇಕು ಅನ್ನೋದು ಗೊತ್ತಾಗುತ್ತಿರಲಿಲ್ಲ. ರಾಯನ್ ಇಲ್ಲದಿದ್ದರೆ ನಾನು ಇಷ್ಟು ಖುಷಿಯಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಈ ಘಟನೆ ನಡೆದ ಮೊದಲು ನನ್ನ ತಲೆಗೆ ಬಂದಿದ್ದು ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು. ರಾಯನ್ ಇಲ್ಲದಿದ್ದರೆ ನನ್ನ ಜೀವನ ಹೇಗೆ ಅನಿಸುತ್ತಿತ್ತು. ರಾಯನ್‌ನಿಂದ ನಾನು ಖುಷಿಯಾಗಿದ್ದೀನಿ. ಮೊದಲು ನನಗೆ ನಗುವುದಕ್ಕೆ ಭಯ ಆಗುತ್ತಿತ್ತು. ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖುಷಿಯಾಗಿರುವುದನ್ನು ಕಲಿತಿದ್ದೀನಿ' ಎಂದು ಮೇಘನಾ ರಾಜ್ ಹೇಳಿದ್ದಾರೆ.

ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ