ಚಿರಂಜೀವಿ ಸರ್ಜಾಗೆ Hi ಹೇಳಿದ ಜೂ.C: ಫೆ.14 ನಿಮಗೂ ಹಾಯ್ ಹೇಳಲಿದ್ದಾನೆ!

Suvarna News   | Asianet News
Published : Feb 12, 2021, 09:41 AM IST
ಚಿರಂಜೀವಿ ಸರ್ಜಾಗೆ Hi ಹೇಳಿದ ಜೂ.C: ಫೆ.14 ನಿಮಗೂ ಹಾಯ್ ಹೇಳಲಿದ್ದಾನೆ!

ಸಾರಾಂಶ

ಎರಡು ದಿನಗಳಿಂದ ಕಾಯ್ದಿರಿಸಿದ ಗುಡ್‌ ನ್ಯೂಸ್ ರಿವೀಲ್ ಮಾಡಿದ ನಟಿ ಮೇಘನಾ ರಾಜ್. ವಿಡಿಯೋ ವೀಕ್ಷಿಸಿ ಇನ್ನೆರಡು ದಿನ ಕಾಯಿರಿ ಎಂದ ನಟಿ. ಆದರೆ ಬೇಬಿ ಸಿ ಹಾಯ್ ಹೇಳುವುದನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್.  

ಸ್ಯಾಂಡಲ್‌ವುಡ್‌ ಮನೆ ಮಗಳು, ಮೇಘನಾ ರಾಜ್‌ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗುಡ್‌ ನ್ಯೂಸ್‌ವೊಂದನ್ನು ರಿವೀಲ್ ಮಾಡಿರುವುದಾಗಿ ಸೂಚನೆ ನೀಡುತ್ತಿದ್ದರು. ಇದೀಗ ಏನೆಂದು ರಿವೀಲ್ ಮಾಡಿದ್ದಾರೆ.

ತಿಂಗಳ ನಂತರ ಸ್ನೇಹಿತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್! 

ಮೇಘನಾ ಫೋಸ್ಟ್:
'Jr C, ನಮ್ಮ ಸಿಂಬಾ.  ನೀವೆಲ್ಲರೂ ನಮ್ಮ ಪುಟ್ಟ ಕಂದಮ್ಮನನ್ನು ನೋಡಲು ಕಾತುರಳಾಗಿದ್ದೀರಿ,' ಎಂದು ಬರೆದುಕೊಂಡ ಮೇಘನಾ ರಾಜ್. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಇಷ್ಟು ವರ್ಷದಲ್ಲಿ ಸೆರೆ ಹಿಡಿದ ಹಲವು ಫೋಟೋಗಳನ್ನು ಕೊಲ್ಯಾಜ್ ಮಾಡಿ, ಆ ನಂತರ ಪೂರ್ತಿ ಮುಖ ಕಾಣಿಸಿದ ಪುತ್ರನ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡು ಹಾಯ್‌ ಹೇಳಿರುವ ಧ್ವನಿ ಕೇಳಿಸಿದ್ದಾರೆ. 'ಇದೀಗ ನೀವು ಅವನ ಧ್ವನಿ ಕೇಳಿದ್ದೀರಾ. ಇದೇ ಫೆ.14 ಅವನನ್ನು ನೋಡಿ ಹಾಯ್ ಹೇಳಬಹುದು,' ಎಂದು ವಿಡಿಯೋ ಅಂತ್ಯದಲ್ಲಿ ಬರೆಯಲಾಗಿದೆ.  

"

ಮೇಘನಾ ಸಿಹಿ ವಿಚಾರ ಹಂಚಿಕೊಳ್ಳುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು ಕೂಡ ಅಪ್ಡೇಟ್ ನೀಡುತ್ತಿದ್ದರು. ಪುತ್ರನ ಫೋಟೋನೇ ನೋಡಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಧ್ವನಿ ಮಾತ್ರ ಕೇಳಿಸಿದೆ.  ಇತ್ತೀಚಿಗೆ ಜೂನಿಯರ್ Cಗೆ ಪೋಲಿಯೋ ಲಸಿಕೆ ಹಾಕಿಸುತ್ತಿರುವ ಫೋಟೋ ಹಂಚಿ ಕೊಂಡಿದ್ದರು. ಪುತ್ರನ ಕೈ ಬೆರಳು ತೋರಿಸಿ, ಕ್ರಿಸ್ಮಸ್‌ ಶುಭಾಶಯಗಳನ್ನು ತಿಳಿಸಿದ್ದರು. ಪ್ರೇಮಿಗಳ ದಿನದಂದು ಸರ್ಜಾ ಕುಟುಂಬದಿಂದ ಸ್ಪೆಷಲ್ ಫೋಟೋ ರಿವೀಲ್ ಆಗುವುದು ಕನ್ಫರ್ಮ್ ಆಗಿದೆ.

ಮೇಘನಾ ರಾಜ್‌ ಪುತ್ರನಿಗೆ ಸಿಗ್ತು ಮತ್ತೊಂದು ಸ್ಪೆಷಲ್ ಗಿಫ್ಟ್‌: ಜೂನಿಯರ್ C ಫುಲ್ ಖುಷ್! 

ಕಳೆದ ವರ್ಷ ಜೂನ್ 8ರಂದು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?