ಗಣರಾಜ್ಯೋತ್ಸವದಂದೇ ಕೇಳು ಜನಮೇಜಯ ಪೋಸ್ಟರ್ ಬಿಡುಗಡೆ

By Suvarna NewsFirst Published Jan 26, 2021, 3:46 PM IST
Highlights

ಕೇಳು ಜನಮೇಜಯ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಡೈರಕ್ಟರ್ ಮತ್ತು ರೈಟರ್ ಚಕ್ರವರ್ತಿ ಚಂದ್ರಚೂಡ್ ಅವರು ಕೇಳು ಜನಮೇಜಯದ ಮೂಲಕ ಪೂರ್ಣ ಪ್ರಮಾಣದ ಕಥಾನಾಯಕರಾಗುತ್ತಿದ್ದಾರೆ.

ಗಣರಾಜ್ಯೋತ್ಸವದ ದಿನದಂದೇ ಕನ್ನಡ ಸಿನಿಮಾ ಕೇಳು ಜನಮೇಜಯ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಡೈರಕ್ಟರ್ ಮತ್ತು ರೈಟರ್ ಚಕ್ರವರ್ತಿ ಚಂದ್ರಚೂಡ್ ಅವರು ಕೇಳು ಜನಮೇಜಯದ ಮೂಲಕ ಪೂರ್ಣ ಪ್ರಮಾಣದ ಕಥಾನಾಯಕರಾಗುತ್ತಿದ್ದಾರೆ.

ಸಂತೋಷ್ ಕೊಡಂಕೇರಿ ನಿರ್ದೇಶನದ ಈ ಸಿನಿಮಾದ ಪೋಸ್ಟರ್ ನಲ್ಲೇ ರಾಧಿಕಾ ಸುಪಾರಿ ವಾಟ್ಸಪ್ ಲೀಕ್ಡ್ ಚಾಟ್  ಆರ್ ಹೌಸ್ ಮುಂತಾದ ತಲೆ ಬರಹಗಳು ಕುತೂಹಲ ಮೂಡಿಸಿವೆ.

ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸ್ವಾತಂತ್ರ್ಯ ಇರುವುದಿಲ್ಲ; ಜಯಶ್ರೀ ಸಾವಿನ ಬಗ್ಗೆ ಟಿಎನ್ ಸೀತಾರಾಮ್ ಮಾತು

ಜೀವನ್ ಪ್ರಕಾಶ್ ಕ್ಯಾಮರಾ, ವಿನಯ್ ಸಂಗೀತವಿರುವ ಈ ಚಿತ್ರಕ್ಕೆ ದೃಷ್ಠಿ ಮೀಡಿಯಾ ಮತ್ತುರಘುನಾಥ್ ನಿರ್ಮಾಪಕರು. ಕ್ರೈಂ ಥ್ರಿಲ್ಲರ್ ಕಥಾ ಹಂದರವಿರುವ ಈ ಸಿನಿಮಾದ ನಾಯಕನಾಗಿ ಚಕ್ರವರ್ತಿ ಚಂದ್ರಚೂಡ್ ಬರುತ್ತಿರುವುದೇ ವಿಶೇಷ.

ರಾಜಕಾರಣವಾ.. ಡ್ರಗ್ಸಾ..? ನಟಿಯೊಬ್ಬಳ ಕಥೆಯ ಚಕ್ರವರ್ತಿ ಅಸಲಿ ಕಥೆಯಾ ಎಂಬುದೆಲ್ಲ ಈಗ ಸದ್ಯ ಕುತೂಹಲದ ವಿಚಾರಗಳಾಗಿಯೇ ಉಳಿದಿದೆ.
ಡಾಲಿ ಧನಂಜಯ, ವಸಿಷ್ಠ ಸಿಂಹ, ಸಂಚಾರಿ ವಿಜಯ್,  ತಾರಾ, ವಿಕ್ಕಿ ವರುಣ್, ರಾಜವರ್ಧನ್ ನಿರ್ದೇಶಕರಾದ ರವಿ ಶ್ರೀವತ್ಸ, ದಯಾಳ್ ಪದ್ಮನಾಭನ್, ಅರವಿಂದ್ ಕೌಶಿಕ್  ಇದ್ದರು.

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ!

ಡಾ.ವಿ ನಾಗೇಂದ್ರಪ್ರಸಾದ್, ಸಿಂಪಲ್ ಸುನಿ, ವಿ ಎಸ್ ಎಸ್ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರಿಂದ ನವನಾಯಕ ದುಶ್ಯಂತ್ ತನಕ ಚೇತನ್ ಗೌಡ ಕಬ್ಬಾಳ್ ಉಮೇಶ್ ಸೇರಿದಂತೆ ನಾನಾ ಪಕ್ಷದ ಮುಖಂಡರು ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿರ್ಮಾಪಕ ರಾಮಪ್ರಸಾದ್ ತನಕ ಹಲವಾರು ವರ್ಗದ ಸೆಲೆಬ್ರೆಟಿಗಳು ಇದ್ದರು.

ಕವಿ ಗೆಳೆಯರೊಬ್ಬರು ಕಲಿಯಾಗುತ್ತಿದ್ದಾರೆ. ಶುಭವಾಗಲಿ.
ಕೇಳು ಜನಮೇಜಯ, loved the title. Wishing the best to Chandrachud Chakravarthy and team:) pic.twitter.com/gkijPndqm4

— Dhananjaya (@Dhananjayaka)

The 'flash-back' technique or simhavalokana krama is an established technique even in traditional Indian works

— ಹಂಸಾನಂದಿ (@hamsanandi)

ನಟ, ನಿರ್ದೇಶಕ, ವಾಗ್ಮಿ, ಪತ್ರಕರ್ತರಾದ ಶ್ರೀ ಅವರ ಚಿತ್ರಕ್ಕೆ ಶುಭ ಕಾಮನೆಗಳು. pic.twitter.com/0k2W0nZaie

— Veerakaputra Srinivasa (@VeerakaputraSri)

ನನ್ನ ಸಹೋದರ ರೈಟರ್ ಡೈರೆಕ್ಟರ್ ಆಕ್ಟರ್ ಆಗುತ್ತಿದ್ದಾರೆ.ಕಥೆ ಹೇಳುವವರು ಕೇಳು ಜನಮೇಜಯ ಎನ್ನುತ್ತಿದ್ದಾರೆ,ವಿವಿಧ ವಿಭಾಗದವರಿಂದ ಮೊದಲ ಪೋಸ್ಟರ್ ಬಿಡುಗಡೆಯಾಗ್ತಿದೆ .ನಾನು ತುಂಬು ಮನಸಿಂದ ಹಾರೈಸಿ ಸಹೋದರರಾದ D J Chakravarthy Chandrachud ಅವರಿಗೆ ಒಳಿತಾಗಲಿ ಎಂದು ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇನೆ pic.twitter.com/TCeD77L6Yi

— Vikky Varun (Santhosh Kumar R) (@Vikky_Varun)

Most retellings of Mahabharata employ flashback technique no ?

ಕೇಳು ಜನಮೇಜಯ ಮಹೀಪತಿ......

Its is hardly a Khandekar innovation.

— vktkv (@Vktkv)
click me!