ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬ ಯೋಚನೆಯೇ 'ರಂಗನಾಯಕಿ'!

Published : Oct 26, 2019, 09:24 AM IST
ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬ ಯೋಚನೆಯೇ 'ರಂಗನಾಯಕಿ'!

ಸಾರಾಂಶ

ಅದಿತಿ ಪ್ರಭುದೇವ ನಾಯಕಿಯಾ ಅಭಿನಯಿಸಿರುವ ‘ರಂಗನಾಯಕಿ’ ಚಿತ್ರವನ್ನು ಮಹಿಳೆಯರಿಗಾಗಿಯೇ ವಿಶೇಷವಾದ ಪ್ರದರ್ಶನ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್‌ 1ರಂದು ರಾಜ್ಯಾದ್ಯಾಂತ ತೆರೆ ಕಾಣುತ್ತಿರುವ ಈ ಚಿತ್ರವನ್ನು ದಯಾಳ್‌ ನಿರ್ದೇಶನ ಮಾಡಿದ್ದು, ಎಸ್‌ ವಿ ನಾರಾಯಣ್‌ ನಿರ್ಮಿಸಿದ್ದಾರೆ. 

ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡ ಸಿನಿಮಾ. ಈ ಕಾರಣಕ್ಕೆ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಬೇಕೆಂದು ಸೆಲೆಬ್ರಿಟಿ ಶೋ ಮಾದರಿಯಲ್ಲೇ ಮಹಿಳಾ ಸ್ಪೆಷಲ್‌ ಶೋ ಆಯೋಜಿಸಲಾಗುತ್ತಿದೆ.

'ರಂಗನಾಯಕಿ' ಫಸ್ಟ್ ಲುಕ್ ರಿಲೀಸ್!

ಬಿಡುಗಡೆಯ ನಂತರ ಅಥವಾ ಬಿಡುಗಡೆಯ ದಿನವೇ ಈ ವಿಶೇಷ ಪ್ರದರ್ಶನ ನಡೆಯಲಿದೆ. ‘ಅತ್ಯಾಚಾರಕ್ಕೆ ಒಳಗಾದ ಒಬ್ಬ ಹೆಣ್ಣು ಮಗಳ ಕತೆ. ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆಯಿತು. ಒಂದು ವೇಳೆ ಆ ನಿರ್ಭಯ ಬದುಕಿ, ತನಗೆ ಆದ ಅನ್ಯಾಯವನ್ನು ಪ್ರಶ್ನಿಸಿದರೆ ಏನಾಗುತ್ತಿತ್ತು, ಜತೆಗೆ ಆಕೆ ಎಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಳು ಎಂಬುದು ‘ರಂಗನಾಯಕಿ’ ಚಿತ್ರದ ಕತೆ. ಮಹಿಳೆಯರಿಗೆ ಧೈರ್ಯ ತುಂಬುವ ಮತ್ತು ಅರಿವು ಮೂಡಿಸುವ ಕತೆ ಇದಾಗಿದ್ದು ಮಹಿಳೆಯರಿಗೆ ಈ ಸಿನಿಮಾ ತಲುಪಬೇಕು ಎಂದು ಅವರಿಗಾಗಿಯೇ ಪ್ರತ್ಯೇಕವಾದ ಶೋ ಆಯೋಜಿಸಲಾಗಿದೆ’ ಎಂಬುದು ನಿರ್ಮಾಪಕರು ಕೊಡುವ ವಿವರಣೆ.

ನಿರ್ಭಯ ನೆರಳಲ್ಲಿ 'ರಂಗನಾಯಕಿ'!

ಮಣಿಕಾಂತ್‌ ಕದ್ರಿ ಸಂಗೀತ ನೀಡಿರುವ ಚಿತ್ರವಿದು. ಚಿತ್ರದ ನಿರ್ಮಾಪಕ ನಾರಾಯಣ್‌ ಈ ಹಿಂದೆ ಎಟಿಎಂನಲ್ಲಿ ಮಹಿಳೆ ಮೇಲಾದ ಮಾರಣಾಂತಿಕ ಘಟನೆಯನ್ನು ಇಟ್ಟುಕೊಂಡು ಮಾಡಿದ್ದ ‘ಎಟಿಎಂ’ ಚಿತ್ರವನ್ನು ನಿರ್ಮಿಸಿದವರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್