ದ್ವೇಷದಲ್ಲಿ ತಾಳ್ಮೆ ಇಷ್ಟ ಪಡುವ Madhagaja: ಟ್ರೇಲರ್‌ನಲ್ಲಿ ಅಬ್ಬರಿಸಿದ ಶ್ರೀಮುರಳಿ

By Suvarna NewsFirst Published Nov 20, 2021, 9:55 AM IST
Highlights

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯುಟ್ಯೂಬ್‌ನಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ಟ್ರೇಲರ್ ನೋಡಿದ ಸಿನಿರಸಿಕರು ಮದಗಜನಿಗೆ ಬಹುಪರಾಕ್ ಎಂದಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಮದಗಜ' (Madhagaja) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ರಿಲೀಸ್‌ ಆದ ಒಂದು ಗಂಟೆಯಲ್ಲೇ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ಯುಟ್ಯೂಬ್‌ನಲ್ಲಿ (YouTube) ಸಖತ್ ಧೂಳೆಬ್ಬಿಸುತ್ತಿದೆ. ಟ್ರೇಲರ್ ನೋಡಿದ ಸಿನಿರಸಿಕರು 'ಮದಗಜ'ನಿಗೆ ಬಹುಪರಾಕ್ ಎಂದಿದ್ದಾರೆ. 2.53 ನಿಮಿಷದ ಟ್ರೇಲರ್‌ನಲ್ಲಿ ಅತಿ ಹೆಚ್ಚು ಆ್ಯಕ್ಷನ್ ದೃಶ್ಯಗಳಿದ್ದು, ಬೃಹತ್​ ಸೆಟ್‌ಗಳು​ ಮತ್ತು ಅದ್ಧೂರಿ ಮೇಕಿಂಗ್‌ ಎದ್ದು ಕಾಣುತ್ತದೆ.

'ಕ್ರೌರ್ಯದಲ್ಲಿ ಶಾಂತಿ ಇಷ್ಟ, ದ್ವೇಷದಲ್ಲಿ ತಾಳ್ಮೆನೇ ಇಷ್ಟ' ಎನ್ನುವ ಡೈಲಾಗ್ ಟ್ರೇಲರ್​ನ ಆರಂಭದಲ್ಲೇ ಬರುತ್ತದೆ. ಹುಲಿನಾ ಬೇಟೆ ಆಡಬೇಕು, ನರಿನಲ್ಲ. ಊಟದಲ್ಲಿ ಎಲೆಗಳನ್ನ ಲೆಕ್ಕ ಹಾಕಬಾರದು, ಸಾವಿನಲ್ಲಿ ತಲೆಗಳನ್ನ ಲೆಕ್ಕ ಹಾಕಬಾರದು. ಭಕ್ತಿ ಕೋಡೋನು ಆ ಶಿವ, ನರಕ ತರ್ಸೋನು ಈ ತಾಂಡವ. ಭಯ ಬಿದ್ದರೆ ದೀಪಕ್ಕೆ ಬತ್ತಿನೂ ಹಾಕೊಕ್ಕಾಗಲ್ಲ, ಧೈರ್ಯ ಇದ್ರೆ... ಇವೆಲ್ಲಾ ಮದಗಜ ಚಿತ್ರದ ಟ್ರೇಲರ್‌ನಲ್ಲಿ ಬರುವ ಪವರ್‌ಫುಲ್ ಡೈಲಾಗ್‌ಗಳು. ಟ್ರೇಲರ್‌ನಲ್ಲಿ ಕೆಲ ದೃಶ್ಯಗಳು ಮೈ ಜುಮ್​ ಎನಿಸುವಂತಿದ್ದು, ಮಚ್ಚು- ಲಾಂಗುಗಳು ಝಳಪಿಸಿವೆ.

Madhagaja Title Song: ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರ ಜೋರು

ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ಜಗಪತಿ ಬಾಬು ಈ ಚಿತ್ರದ ಮುಖ್ಯ ಖಳನಾಯಕನಾಗಿದ್ದು ಅವರ ರಾ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ. ಮಹತ್ವದ ಪಾತ್ರದಲ್ಲಿ 'ಕೆಜಿಎಫ್' (KGF) ಚಿತ್ರದಲ್ಲಿ ಗರುಡನಾಗಿ ಕಾಣಿಸಿಕೊಂಡಿದ್ದ ರಾಮಚಂದ್ರ ರಾಜು (Ramachandra Raju) ಅವರು ಪ್ರಮುಖ  ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಟ್ರ್ಯಾಕ್ (Title Track) ಕೂಡಾ ಬಿಡುಗಡೆಯಾಗಿದ್ದು, ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಅಬ್ಬರಿಸಿದ್ದರು. ಜೊತೆಗೆ ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ (Teaser) 'ರಕ್ತ ಒಳಗಿನಿಂದ ಹರಿದರೆ ಸಂಬಂಧ, ಹೊರಗಿನಿಂದ ಹರಿಸಿದ್ರೆ ಕ್ರೌರ್ಯ' ಎಂಬ ಡೈಲಾಗ್ ಸಖತ್ ವೈರಲ್ (Viral) ಆಗಿತ್ತು.

ವಿಶೇಷವಾಗಿ 'ಮದಗಜ' ಚಿತ್ರದ ಟ್ರೇಲರ್‌ನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಿಡುಗಡೆಗೊಳಿಸಿ, ಶ್ರೀಮುರಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಟ್ರೇಲರ್ ಇಷ್ಟು ಅದ್ಭುತವಾಗಿದೆ ಅಂದರೆ ಸಿನಿಮಾನೂ ಚೆನ್ನಾಗಿರುತ್ತೆ. ಶ್ರೀಮುರಳಿ ಹಾಲಿವುಡ್ ಹೀರೋ ಆಗಿದ್ದಾರೆ. ಒಬ್ಬ ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ, ಸಾಧನೆ ಮುಖ್ಯ ಎಂದು ಹೇಳಿದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಚಿತ್ರತಂಡ ನಮನ ಸಲ್ಲಿಸಿ ಟ್ರೇಲರ್‌ ಕಾರ್ಯಕ್ರಮವನ್ನು ಶುರು  ಮಾಡಿದ್ದಾರೆ. ಮದಗಜ ಚಿತ್ರದಲ್ಲಿ ವಾರಾಣಸಿ ಗ್ಯಾಂಗ್‌ಸ್ಟರ್‌ (Gangster) ಆಗಿ ಶ್ರೀಮುರಳಿ ಕಾಣಿಸಿಕೊಂಡಿದ್ದು, ರವಿ ಬಸ್ರೂರ್‌ (Ravi Basrur) ಸಂಗೀತ ಚಿತ್ರಕ್ಕಿದೆ. 

Madhagaja: ಚಿತ್ರ ನೋಡಲು ರಜೆ ನೀಡುವಂತೆ ಪತ್ರ ಬರೆದ ಶ್ರೀಮುರಳಿ ಅಭಿಮಾನಿ

ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಚಿತ್ರಕ್ಕೆ  ಬಂಡವಾಳ ಹೂಡಿದ್ದು, 'ಮಫ್ತಿ' (Mufti) ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ಡಿಸೆಂಬರ್  3ರಂದು ಕನ್ನಡ ,ತೆಲುಗು, ತಮಿಳು ಭಾಷೆಗಳಲ್ಲಿ 'ಮದಗಜ' ಸಿನಿಮಾ ಬಿಡುಗಡೆಯಾಗಲಿದೆ.
 

click me!