ಚಿರಂಜೀವಿ ಮಗನಿಗೆ ತೊಟ್ಟಿಲು ಶಾಸ್ತ್ರ; ಆರಂಭದಲ್ಲಿ ಭಾವುಕರಾದ ಮೇಘನಾ ರಾಜ್

Suvarna News   | Asianet News
Published : Nov 12, 2020, 02:17 PM IST
ಚಿರಂಜೀವಿ ಮಗನಿಗೆ ತೊಟ್ಟಿಲು ಶಾಸ್ತ್ರ; ಆರಂಭದಲ್ಲಿ ಭಾವುಕರಾದ ಮೇಘನಾ ರಾಜ್

ಸಾರಾಂಶ

ನಟಿ ಮೇಘನಾ ರಾಜ್‌ ಮನೆಯಲ್ಲಿ ಶಾಸ್ತ್ರ ಸಂಪ್ರದಾಯದ ಪ್ರಕಾರ ತೊಟ್ಟಿಲು ಶಾಸ್ತ್ರ ನೆರವೇರಿದೆ. ನಟಿ ಮೇಘನಾ ಹಾಗೂ ಸುಂದರ್ ರಾಜ್‌ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

ಸುಮಾರು 6 ತಿಂಗಳ ನಂತರ ಸುಂದರ್ ರಾಜ್‌ ಹಾಗೂ ಸರ್ಜಾ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿದೆ. ಜೂನಿಯರ್ ಚಿರು ಉರಫ್ ಚಿಂಟು ಇಂದು 21ನೇ ದಿನಕ್ಕೆ ಕಾಲಿಟ್ಟಿದ್ದಾನೆ. ಶಾಸ್ತ್ರ ಸಂಪ್ರದಾಯದ ಪ್ರಕಾರ ನಿವಾಸದಲ್ಲಿ ತೊಟ್ಟಿಲು ಪೂಜೆಯನ್ನು ನೆರವೇರಿಸಲಾಗಿದೆ. 

ಮೇಘನಾ ರಾಜ್‌ ಪುತ್ರನಿಗೆ ವಿಶೇ‍ಷ ಗಿಫ್ಟ್ ತಯಾರಿಸುತ್ತಿರುವ ಅಭಿಮಾನಿ; ಏನದು? 

ಬೆಳಗ್ಗೆ ಆರು ಗಂಟೆಗೆ ಐವರು ಮುತ್ತೈದೆಯರಿಂದ ಮೊದಲು ತೊಟ್ಟಿಲಿಗೆ ಪೂಜೆ ಮಾಡಿಸಲಾಗಿದೆ.  ಆನಂತರ ಗಂಗೆ ಪೂಜೆ ಹಾಗೂ ರುಬ್ಬುವ ಕಲ್ಲನ್ನಿಟ್ಟು ಗುಂಡಮ್ಮನ ಶಾಸ್ತ್ರ ಮಾಡಲಾಗಿದೆ. ಜೂನಿಯರ್‌ನನ್ನು ತೊಟ್ಟಿಲಿಗೆ ಹಾಕಿ ತಾಯಿ ಮೇಘನಾ ಸಂಭ್ರಮಿಸಿದ್ದಾರೆ.

ವಿಶೇಷ ಏನೆಂದರೆ ಗದಗದಿಂದ ಅಭಿಮಾನಿ ವನಿತಾ ಗುತ್ತಲ್ ಎಂಬುವವರು ಮೇಘನಾ ರಾಜ್‌ ಪುತ್ರನಿಗೆ ಮರದ ತೊಟ್ಟಿಲು ಮಾಡಿಸಿಕೊಂಡು ತಂದಿದ್ದಾರೆ. 'ನಾವು ತೊಟ್ಟಿಲು ಗಿಫ್ಟ್ ಕೊಡುವುದಕ್ಕೆ ಕಾರಣವೇ ನಮ್ಮ ಮಕ್ಕಳು. ಕಲಗಟಗಿಯಲ್ಲಿ ತಯಾರಾಗಿರೋ ತೊಟ್ಟಿಲು ಇದು. ಇದರಲ್ಲಿ ಮಹಾಭಾರತ ಹಾಗೂ ರಾಮಾಯಣದ ಚಿತ್ತಾರಗಳಿವೆ,' ಎಂದಿದ್ದಾರೆ ವಕೀಲೆ ವನಿತಾ ಗುತ್ತಲ್. 

ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್! 

ಎಲ್ಲಾ ಶಾಸ್ತ್ರದ ನಂತರ ಸುಂದರ್ ರಾಜ್ ಹಾಗೂ ಮೇಘನಾ ಮಾತನಾಡಿದ್ದಾರೆ. ಆರಂಭದಲ್ಲಿಯೇ ಮೇಘನಾ ತುಂಬಾ ಭಾವುಕರಾಗಿದ್ದರು. ಪೂಜೆಯಲ್ಲಿ ಚಿರು ತಾಯಿ ಅಮ್ಮಾಜಿ ಹಾಗೂ ಅಜ್ಜಿ ಲಕ್ಷ್ಮಿದೇವಿ ಭಾಗಿಯಾಗಿದ್ದರು. ಸುಂದರವಾದ ರಂಗೋಲಿಯಿಂದ ಮನೆ ಬಾಗಿಲನ್ನು ಅಲಂಕರಿಸಲಾಗಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?