
ನಟ ಶ್ರೀನಗರ ಕಿಟ್ಟಿಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಈ ಹಾಡುಗಳನ್ನು ಕೇಳಬಹುದು.
ಗಾರೆ ಕೆಲಸ ಮಾಡುವ ಹುಡುಗನ ಪ್ರೇಮಕತೆ ಇದಾಗಿದ್ದು, ಪ್ರಮೋದ್ ಬೋಪಣ್ಣ, ಮೇಘನಾ ಗೌಡ ಮುಖ್ಯ ಪಾತ್ರಗಳಲ್ಲಿದ್ದಾರೆ. ಆರನ್ ಕಾರ್ತಿಕ್ ವೆಂಕಟೇಶ್ ಸಂಗೀತವಿದೆ. ಈ ಸಂದರ್ಭ ಮಾತನಾಡಿದ ನಿರ್ದೇಶಕ ರಾಘವ್, ‘ಈ ಚಿತ್ರದಲ್ಲಿ ಪ್ರೀತಿ, ಮನರಂಜನೆ ಜೊತೆಗೆ ತಾಯಿ ಸೆಂಟಿಮೆಂಟೂ ಇದೆ. ಜಾನಿ ಮಾಸ್ಟರ್ ಫೈಟ್ ಇದೆ’ ಎಂದರು.
ನಿರ್ಮಾಪಕ ಶಿವರಾಮ್, ನಾಯಕ ಪ್ರಮೋದ್ ಬೋಪಣ್ಣ, ನಾಯಕಿ ಮೇಘನಾ, ಸಿರಿ ಮ್ಯೂಸಿಕ್ನ ಚಿಕ್ಕಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು. ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಹಣವಿದೆ. ರಮೇಶ್ ಭಟ್, ರಾಕ್ಲೈನ್ ಸುಧಾಕರ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.