ಕೊನೆಗೂ ಶುರುವಾಯಿತು ದುನಿಯಾ ಸೂರಿ ಚಿತ್ರ ಕಾಗೆ ಬಂಗಾರ: ತಾರಾಬಳಗದಲ್ಲಿ ಸರ್ಪ್ರೈಸ್!

Published : Sep 07, 2026, 03:48 PM IST
Duniya Suri Kaage Bangara

ಸಾರಾಂಶ

ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರೀಕರಣ ಆರಂಭವಾಗಿದ್ದು, ಸೂರ್ಯ ಪ್ರಖ್ಯಾತ್ ಮತ್ತು ರಿತನ್ಯಾ ವಿಜಯ್ ನಾಯಕ-ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಸಿದ್ಧಿ ಸೇರಿದಂತೆ ಹಳೆಯ ಚಿತ್ರಗಳ ಹಲವು ನಟರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಬಹುದಿನಗಳಿಂದ ಸುದ್ದಿಯಲ್ಲಿದ್ದ ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರ ಇದೀಗ ಚಿತ್ರೀಕರಣದ ಹಂತಕ್ಕೆ ಪ್ರವೇಶಿಸಿದೆ. ಹಲವು ಕಾರಣಗಳಿಂದ ವಿಳಂಬವಾಗಿದ್ದ ಈ ಸಿನಿಮಾದ ಕೆಲಸಕ್ಕೆ ಕೊನೆಗೂ ಚಾಲನೆ ಸಿಕ್ಕಿದ್ದು, ಚಿತ್ರೀಕರಣ ಆರಂಭಗೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲೇ ಚಿತ್ರತಂಡದಿಂದ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಇದರ ನಡುವೆ ಸಿನಿಮಾದ ತಾರಾಬಳಗದ ಕುರಿತ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ‘ನಡುವೆ ಅಂತರವಿರಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟ ಸೂರ್ಯ ಪ್ರಖ್ಯಾತ್ ಇದೀಗ ‘ಕಾಗೆ ಬಂಗಾರ’ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಜೆಸಿ - ದಿ ಯೂನಿವರ್ಸಿಟಿ’ (JC – The University) ಚಿತ್ರದಲ್ಲೂ ಅವರು ನಟಿಸಿದ್ದರು.

ಇನ್ನು ‘ಕಾಗೆ ಬಂಗಾರ’ಕ್ಕೆ ನಾಯಕಿಯಾಗಿ ನಟಿ ರಿತನ್ಯಾ ವಿಜಯ್ ಆಯ್ಕೆಯಾಗಿದ್ದಾರೆ. ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯಾ, ಜಡೇಶಾ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇದೀಗ ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ ಅವರ ಮುಂದಿನ ಪ್ರಮುಖ ಹೆಜ್ಜೆಯಾಗಲಿದೆ.

‘ಕೆಂಡಸಂಪಿಗೆ’, ‘ಪಾಪ್‌ಕಾರ್ನ್ ಮಂಕಿ ಟೈಗರ್‌’ ಜೊತೆ ಹೊಸ ಕನೆಕ್ಷನ್

‘ಕಾಗೆ ಬಂಗಾರ’ ಕೇವಲ ಹೊಸ ಕಥೆಯ ಸಿನಿಮಾವಾಗಿರದೆ, ದುನಿಯಾ ಸೂರಿ ಅವರ ಹಿಂದಿನ ಚಿತ್ರಗಳ ಜಗತ್ತಿನೊಂದಿಗೂ ಒಂದು ರೀತಿಯ ಸಂಪರ್ಕ ಹೊಂದಿರಲಿದೆ ಎಂಬುದು ವಿಶೇಷ. ‘ಕೆಂಡಸಂಪಿಗೆ’ ಹಾಗೂ ‘ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರಗಳ ತುದಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಈ ಸಿನಿಮಾದಲ್ಲಿದೆ ಎನ್ನಲಾಗಿದೆ.

ಈ ಕನೆಕ್ಷನ್‌ನ ಭಾಗವಾಗಿ ನಟ ಪ್ರಶಾಂತ್ ಸಿದ್ಧಿ ಮತ್ತೊಮ್ಮೆ ಸೂರಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು ‘ಕೆಂಡಸಂಪಿಗೆ’ ಚಿತ್ರದಿಂದಲೇ ಮುಂದುವರಿಸಲಾಗಿದೆ ಎನ್ನಲಾಗುತ್ತಿದ್ದು, ಈ ಕಾರಣದಿಂದ ‘ಕಾಗೆ ಬಂಗಾರ’ದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಇದರ ಜೊತೆಗೆ ದುನಿಯಾ ಸೂರಿ ಅವರ ಹಿಂದಿನ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇನ್ನೂ ಹಲವು ನಟರು ‘ಕಾಗೆ ಬಂಗಾರ’ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಿನಿಮಾದ ಕಥೆ, ಪಾತ್ರಗಳು ಮತ್ತು ಹಿಂದಿನ ಚಿತ್ರಗಳ ನಡುವಿನ ಕನೆಕ್ಷನ್ ಹೇಗಿರಲಿದೆ ಎಂಬ ಕುತೂಹಲ ಇದೀಗ ಸಿನಿಪ್ರಿಯರಲ್ಲಿ ಮೂಡಿದೆ. ಇನ್ನು ಚಿತ್ರದ ಅಧಿಕೃತ ಘೋಷಣೆ ಹಾಗೂ ಸಂಪೂರ್ಣ ತಾರಾಬಳಗದ ವಿವರಗಳು ಹೊರಬಂದ ಬಳಿಕ ‘ಕಾಗೆ ಬಂಗಾರ’ದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ಬಿಗ್ ಬಾಸ್ ವೇದಿಕೆ ಮೇಲೆ 'ವಿಷ್ಣುವರ್ಧನ್' ಸ್ಟೈಲ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್‌.. ಇದು ಏಕೆ ಗೊತ್ತಾ?
'ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್': ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು