ಹುಟ್ಟುಹಬ್ಬಕ್ಕೆ ʻಕಿಂಗ್‌-ಸೈಜ್ʼ ಗಿಫ್ಟ್: ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಿಚ್ಚ ಸುದೀಪ್‌?

Published : Aug 31, 2026, 08:06 PM IST
Kichcha Sudeep

ಸಾರಾಂಶ

ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಅಧಿಕೃತ ಘೋಷಣೆ ನಡೆಯಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ‘ಕಿಂಗ್‌-ಸೈಜ್’ ಪ್ರಾಜೆಕ್ಟ್‌ನಲ್ಲಿ ಸುದೀಪ್ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್‌ 2ರಂದು ಕಿಚ್ಚನ ಬರ್ತ್‌ಡೇ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಒಂದಕ್ಕಿಂತ ಹೆಚ್ಚು ಸರ್ಪ್ರೈಸ್‌ಗಳು ಸಿಗುವ ನಿರೀಕ್ಷೆ ಇದ್ದು, ಇದೀಗ ಅವರ ಹೊಸ ಸಿನಿಮಾವೊಂದು ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಚಿತ್ರಕ್ಕೆ ‘ಕಿಂಗ್‌-ಸೈಜ್’ ಕೊಲ್ಯಾಬರೇಷನ್‌ ಆಗಿದ್ದು, ಸಿನಿಮಾದಲ್ಲಿ ಸುದೀಪ್‌ ಐತಿಹಾಸಿಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಿಚ್ಚನ ಹೊಸ ಸಿನಿಮಾ ಅನೌನ್ಸ್‌ಮೆಂಟ್‌ಗೆ ಕೌಂಟ್‌ಡೌನ್

ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾವನ್ನು ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಹಾಗೂ ಪ್ರಿಯಾ ಸುದೀಪ್‌ ಅವರ ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೋಸ್‌ ಜಂಟಿಯಾಗಿ ನಿರ್ಮಿಸುತ್ತಿವೆ ಎನ್ನಲಾಗಿದೆ. ಸುದೀಪ್‌ ಅವರ ಹುಟ್ಟುಹಬ್ಬದಂದೇ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನ ಅಧಿಕೃತ ಘೋಷಣೆ ನಡೆಯಲಿದೆ. ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ಪ್ರಚಾರ ಪೋಸ್ಟರ್‌ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕಿರೀಟದ ಪೋಸ್ಟರ್‌.. ಗರಿಗೆದರಿದ ನಿರೀಕ್ಷೆ

ಚಿತ್ರದ ಘೋಷಣೆಗೂ ಮುನ್ನ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಭವ್ಯವಾದ ರಾಜ ಕಿರೀಟವನ್ನು ತೋರಿಸಲಾಗಿದ್ದು, ‘A King-Size Collaboration’ ಎಂಬ ಟ್ಯಾಗ್‌ಲೈನ್‌ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್‌, ಪೀಪಲ್‌ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್‌ ಹೆಸರುಗಳನ್ನು ಒಟ್ಟಿಗೆ ತೋರಿಸಲಾಗಿದ್ದು, ಸೆಪ್ಟೆಂಬರ್‌ 2ರಂದು ಚಿತ್ರದ ಕುರಿತು ಮಹತ್ವದ ಘೋಷಣೆ ಹೊರಬೀಳಲಿದೆ ಎಂದು ತಿಳಿಸಲಾಗಿದೆ. ಇದೇ ಕಿರೀಟದ ಪೋಸ್ಟರ್‌ ಇದೀಗ ಸಿನಿಮಾದ ಕಥಾಹಂದರದ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಕೃಷ್ಣದೇವರಾಯರಾಗಿ ಕಿಚ್ಚ ಸುದೀಪ್‌?

ಸಿನಿಮಾ ಕುರಿತಂತೆ ಕೇಳಿಬರುತ್ತಿರುವ ಪ್ರಮುಖ ಸುದ್ದಿಯೆಂದರೆ, ಸುದೀಪ್‌ ಅವರು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು. ಕೃಷ್ಣದೇವರಾಯರು ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ದೊರೆಗಳಲ್ಲಿ ಒಬ್ಬರು. 1509ರಿಂದ 1529ರವರೆಗೆ ಆಡಳಿತ ನಡೆಸಿದ ಅವರು ತಮ್ಮ ಶೌರ್ಯ, ಆಡಳಿತ ಸಾಮರ್ಥ್ಯ ಮಾತ್ರವಲ್ಲದೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಪ್ರೋತ್ಸಾಹದಿಂದಲೂ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಇಂತಹ ಐತಿಹಾಸಿಕ ವ್ಯಕ್ತಿಯ ಪಾತ್ರವನ್ನು ಸುದೀಪ್‌ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ಆದರೆ ಇಲ್ಲಿ ಒಂದು ಪ್ರಮುಖ ಸಂಗತಿ ಇದೆ. ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡವಾಗಲಿ ಅಥವಾ ಸುದೀಪ್‌ ಆಗಲಿ ಈವರೆಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಸೆಪ್ಟೆಂಬರ್‌ 2ರಂದು ನಡೆಯಲಿರುವ ಅಧಿಕೃತ ಘೋಷಣೆಯ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಪ್ಯಾನ್‌ ಇಂಡಿಯಾ ಸಿನಿಮಾಗೆ ಸ್ಕೆಚ್‌?

ಕಿರೀಟದ ಪೋಸ್ಟರ್‌ ಹಾಗೂ ಬಿಗ್‌ ಬ್ಯಾನರ್‌ಗಳ ಕಾಂಬಿನೇಷನ್‌ ನೋಡಿದರೆ, ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾ ಆಗಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ದೊಡ್ಡ ಕ್ಯಾನ್ವಾಸ್‌, ಐತಿಹಾಸಿಕ ಹಿನ್ನೆಲೆ ಮತ್ತು ಪ್ಯಾನ್‌ ಇಂಡಿಯಾ ಮಟ್ಟದ ಮೇಕಿಂಗ್‌ನೊಂದಿಗೆ ಸಿನಿಮಾ ರೂಪುಗೊಳ್ಳಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.

ಒಂದು ವೇಳೆ ಕೃಷ್ಣದೇವರಾಯರ ಕಥೆಯೇ ಆಗಿದ್ದರೆ, ವಿಜಯನಗರ ಸಾಮ್ರಾಜ್ಯದ ವೈಭವ, ಯುದ್ಧಗಳು, ರಾಜಕೀಯ ತಂತ್ರಗಳು ಹಾಗೂ ಆ ಕಾಲಘಟ್ಟದ ಸಂಸ್ಕೃತಿಯನ್ನು ಅದ್ದೂರಿಯಾಗಿ ತೆರೆಗೆ ತರುವ ಸಾಧ್ಯತೆ ಇದೆ. ಆಧುನಿಕ ತಂತ್ರಜ್ಞಾನ ಹಾಗೂ ಬೃಹತ್‌ ಬಜೆಟ್‌ನೊಂದಿಗೆ ಇಂತಹ ಕಥೆ ಮೂಡಿಬಂದರೆ, ಇದು ಸುದೀಪ್‌ ಅವರ ವೃತ್ತಿಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗುವ ಸಾಧ್ಯತೆಯೂ ಇದೆ.

ಸುದೀಪ್‌ಗಾಗಿ ಒಂದಾದ ಎರಡು ಬಿಗ್‌ ಬ್ಯಾನರ್‌ಗಳು

ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ ಎಂದರೆ ನಿರ್ಮಾಣ ಸಂಸ್ಥೆಗಳ ಕಾಂಬಿನೇಷನ್‌. ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈಗಾಗಲೇ ‘ಕಾರ್ತಿಕೇಯ 2’, ‘ಧಮಾಕ’, ‘ಬ್ರೋ’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳನ್ನು ನಿರ್ಮಿಸಿದೆ. ಪ್ರಭಾಸ್‌ ಅಭಿನಯದ ‘ದಿ ರಾಜಾ ಸಾಬ್‌’ ಸಿನಿಮಾದೊಂದಿಗೂ ಈ ಸಂಸ್ಥೆ ಗುರುತಿಸಿಕೊಂಡಿದೆ.

ಇನ್ನೊಂದೆಡೆ, ಪ್ರಿಯಾ ಸುದೀಪ್‌ ನೇತೃತ್ವದ ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೋಸ್‌ ಕೂಡ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದೆ. ಇದೀಗ ಸುದೀಪ್‌ ಅವರಂತಹ ಸ್ಟಾರ್‌ ನಟನಿಗಾಗಿ ಎರಡು ನಿರ್ಮಾಣ ಸಂಸ್ಥೆಗಳು ಕೈಜೋಡಿಸಿರುವುದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸೆಪ್ಟೆಂಬರ್‌ 2ಕ್ಕೆ ಎಲ್ಲ ಪ್ರಶ್ನೆಗಳಿಗೆ ಉತ್ತರ

ಸದ್ಯ ಈ ಸಿನಿಮಾದ ಶೀರ್ಷಿಕೆ ಏನು? ನಿರ್ದೇಶಕರು ಯಾರು? ಸುದೀಪ್‌ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ? ಇದು ನಿಜಕ್ಕೂ ಕೃಷ್ಣದೇವರಾಯರ ಕಥೆಯೇ? ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆಯೇ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳ ಮುಂದಿವೆ.

ಈ ಎಲ್ಲಾ ಪ್ರಶ್ನೆಗಳಿಗೆ ಸೆಪ್ಟೆಂಬರ್‌ 2ರಂದು ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬದಂದು ಉತ್ತರ ಸಿಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ, ಕಿಚ್ಚನ ಬರ್ತ್‌ಡೇಗೆ ‘ಕಿಂಗ್‌-ಸೈಜ್’ ಸರ್ಪ್ರೈಸ್‌ ಸಿಗಲಿದೆಯೇ ಎಂಬ ಕುತೂಹಲ ಈಗಾಗಲೇ ಗರಿಗೆದರಿದ್ದು, ಕಿರೀಟದ ಪೋಸ್ಟರ್‌ ಹುಟ್ಟುಹಾಕಿರುವ ನಿರೀಕ್ಷೆಗೆ ಸೆಪ್ಟೆಂಬರ್‌ 2ರಂದು ಅಧಿಕೃತ ಉತ್ತರ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಸಿನಿಮಾ ತಡವಾದ್ರೆ ಏನಾಗುತ್ತೆ?' ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಹೇಳಿಕೊಂಡ ಸೀಕ್ರೆಟ್ ಇಲ್ಲಿದೆ ನೋಡಿ!
ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?