ಕನ್ನಡ ಸಿನಿಮಾ ಗೆಲ್ಲಬೇಕಾದರೆ ಮೊದಲು ಇದು ಬದಲಾಗಬೇಕು: ನಿರ್ದೇಶಕ ಎಂ.ಡಿ.ಶ್ರೀಧರ್‌

Published : Jul 30, 2026, 04:18 PM IST
MD Sridhar

ಸಾರಾಂಶ

ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್‌.

- ನಾವು ಕ್ವಾಲಿಟಿ ಕಡೆಗೆ ಗಮನ ಕೊಟ್ಟು, ಕನ್ನಡ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಮನಸ್ಸಿನಲ್ಲಿರುವ ಭಾವನೆಗಳನ್ನು ಬದಲಾಯಿಸಬೇಕಿದೆ.

- ನಿರ್ಮಾಪಕರು ಸ್ಟಾರ್‌ ಹೀರೋಗಳ ಹಿಂದೆ ಹೋಗೋದನ್ನು ಮೊದಲು ಬಿಡಬೇಕು. ನಿರ್ಮಾಪಕರೇ ಸ್ಟಾರ್‌ಗಳನ್ನು ಹುಟ್ಟು ಹಾಕಬೇಕು.

- ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ. ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಏಳೆಂಟು ಹೊಸ ಪ್ರತಿಭಾವಂತ ನಟರು ಇದ್ದಾರೆ. ಅವರು ಮುಂದಿನ ಕನ್ನಡ ಚಿತ್ರರಂಗದ ಸ್ಟಾರ್‌ ಹೀರೋಗಳಾಗುತ್ತಾರೆ. ಆದರೆ, ಅವರ ಜೊತೆಗೆ ಈಗ ಸಿನಿಮಾ ಮಾಡಲು ಯಾರು ರೆಡಿ ಇದ್ದಾರೆ?

- ದೊಡ್ಡ ತಾರೆಗಳು ಬದಲಾಯಿಸಿಕೊಳ್ಳಬೇಕಿರುವುದು ಪೇಮೆಂಟ್‌ಗಿಂತ ಕತೆಗೆ ಮಹತ್ವ ಕೊಡೋದನ್ನು. ಚಿತ್ರದ ಪ್ರತಿ ಪಾತ್ರದ ಕತೆ, ಸಂಭಾಷಣೆಯನ್ನು ಕೇಳಿಸಿಕೊಳ್ಳಬೇಕು. ಶೂಟಿಂಗ್‌, ಬಜೆಟ್‌ನಲ್ಲಿ ಮಧ್ಯ ಪ್ರವೇಶಿಸುವ ಬದಲು ಸ್ಕ್ರಿಪ್ಟ್‌ನಲ್ಲಿ ಭಾಗಿಯಾಗಬೇಕು. ದರ್ಶನ್‌ ಅವರು ಹೀಗೆ ಮಾಡುತ್ತಿದ್ದರು. ಕತೆಯನ್ನು ಸಂಪೂರ್ಣವಾಗಿ ಕೇಳುತ್ತಿದ್ದರು. ಏನೇ ಬದಲಾವಣೆ, ಸಲಹೆ, ಪ್ರಶ್ನೆ ಇದ್ದರೆ ಶೂಟಿಂಗ್‌ ಮೊದಲೇ ಕೇಳುತ್ತಿದ್ದರು.

ಸಿನಿಮಾಗಳ ಜೊತೆಗೆ ಅಲ್ಲ

- ನಾವು ಈಗ ಸ್ಪರ್ಧಿಸಬೇಕಿರುವುದು ಮೊಬೈಲ್‌ ಜೊತೆಗೆ ಹೊರತು ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಅಲ್ಲ. ನಿರ್ದೇಶಕರು ಅಪ್‌ಡೇಟ್‌ ಆಗಿ ಚಿತ್ರಮಂದಿರಗಳನ್ನು ಉಳಿಸುವಂತಹ ಸಿನಿಮಾಗಳನ್ನು ಮಾಡಬೇಕಿದೆ.

- ಚಿತ್ರದ ಪ್ರತಿಯೊಂದು ವಿಭಾಗವೂ ಕತೆಗೆ ಶರಣಾಗಬೇಕು. ಕತೆಗಿಂತ ಬಜೆಟ್‌ ದೊಡ್ಡದು, ಕತೆಗಿಂತ ನಾನೇ ದೊಡ್ಡವನು ಅಂತ ಹೋದರೆ ಹೆಸರಿಗೊಂದು ಪ್ಯಾನ್‌ ಇಂಡಿಯಾ ಸಿನಿಮಾ ಆಗುತ್ತದೆ ಅಷ್ಟೇ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..
ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?