KM Chaitanya Post: ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!

Published : Jul 13, 2026, 06:16 PM IST
KM Chaitanya

ಸಾರಾಂಶ

'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ ಮಲ್ಟಿಫ್ಲೆಕ್ಸ್‌ ( Multiplex) ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ.

ಕನ್ನಡ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆ ಕೆಎಂ ಚೈತನ್ಯ

ಸ್ಯಾಂಡಲ್‌ವುಡ್ ಸಿನಿರಂಗಕ್ಕೆ ಹಲವು ಸಿನಿಮಾ ಕೊಡುಗೆ ಕೊಟ್ಟಿರುವ ನಿರ್ದೇಶಕ ಕೆಎಂ ಚೈತನ್ಯ (KM Chaitanya) ಅವರು ಇದೀಗ ಹೊಸದೊಂದು ಹೇಳಿಕೆ ಕೊಡುವ ಮೂಲಕ ಭಾರೀ ಸಂಚಲನ ಸೃಷ್ಟಿಸಿದ್ದಾರೆ. 'ಆ ದಿನಗಳು, ಆಟಗಾರ, ಸೂರ್ಯಕಾಂತಿ, ಪರಾರಿ, ಬಲರಾಮ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೆಎಂ ಚೈತನ್ಯ ಅವರು 'ಕನ್ನಡ ಚಿತ್ರರಂಗದ ಅವನತಿ' ಬಗ್ಗೆ ಮಾತನ್ನಾಡಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೆಎಂ ಚೈತನ್ಯ ಪೋಸ್ಟ್‌ನಲ್ಲಿ ಏನಿದೆ?

'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ Multiplex ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ. ಇವೆಲ್ಲವೂ ಸೇರಿ ನಮ್ಮ ಚಿತ್ರರಂಗ ಅವನತಿಯ ಕಡೆ ಸಾಗುತ್ತಿದೆ. ಇದನ್ನು ತಡೆಯಲು ಎಲ್ಲರೂ ಸೇರಿ ಯೋಚನೆ ಮಾಡಬೇಕಿದೆ' ಎಂದು ಅವರು ಪೋಸ್ಟ್ ಮಾಡಿದ್ದಾರೆ.

ನಿರ್ದೇಶಕ ಕೆಎಂ ಚೈತನ್ಯ ಅವರ ಪೋಸ್ಟ್‌ಗೆ ಸಹಜವಾಗಿಯೇ ಸಾಕಷ್ಟು ಪರ-ವಿರೋಧಧ ಚರ್ಚೆಗಳು ಆರಂಭವಾಗಿವೆ. ಕೆಎಂ ಚೈತನ್ಯ ಅವರು ಯಾವುದೇ ನಟರ ಹೆಸರು ಹೇಳಿಲ್ಲ. ಸದ್ಯ ಕನ್ನಡ ಚಿತ್ರರಂಗದ 'ಕರಾವಳಿ' ವಿವಾದವನ್ನೂ ಸಹ ಉಲ್ಲೇಖಿಸಿಲ್ಲ. ಹೀಗಾಗಿ ಅವರ ಪೋಸ್ಟ್‌ಗೆ ಯಾರೂ ಕೂಡ ಯಾರನ್ನೂ ಎಳೆದು ತರುವ ಅಗತ್ಯವಿಲ್ಲ. ಎಕೆಂದರೆ, ಕೆಎಂ ಚೈತನ್ಯ ಅವರೂ ಸಹ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ, ಹಲವು ಹೀರೋಗಳ ಜೊತೆಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಹೇಳಿರೋ ಮಾತು ಇಡೀ ಕನ್ನಡ ಚಿತ್ರರಂಗ, ಅದರ ಬೆಳವಣಿಗೆಯನ್ನು ಕುರಿತು ಹೇಳಿದ್ದು. ಅದು ಯಾವುದೇ ನಿರ್ಧಿಷ್ಟವಾಗಿ ಯಾವುದೇ ನಟರನ್ನು ಕುರಿತು ಹೇಳಿದ್ದಲ್ಲ ಎನ್ನಬಹುದು. ಇದೇ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹೇಳುತ್ತಿದ್ದಾರೆ.

ಪೋಸ್ಟ್ ಹಾಗೂ ಚರ್ಚೆಯ ಸಾರಾಂಶವೇನು?

ಅದೇನೇ ಆಗಿರಲಿ, ಕೆಎಂ ಚೈತನ್ಯ ಹೇಳಿಕೆಗೆ ಲಿಂಗದೇವರು, ನಾಗೇಂದ್ರ ಪ್ರಸಾದ್ ಸೇರಿದಂತೆ ಕೆಲವು ಕನ್ನಡದ ನಿರ್ದೇಶಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಹೇಳಿಕೆಗಳ ಸಾರ ಒಂದೇ, ಅದು ಕನ್ನಡ ಚಿತ್ರರಂಗ ಸದ್ಯಕ್ಕೆ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಕನ್ನಡ ಚಿತ್ರರಂಗದ ಅವನತಿಯನ್ನು ತಡೆಯಬೇಕಾದರೆ ಎಲ್ಲಾ ನಿರ್ಮಾಪಕರು, ನಟನಟಿಯರು, ತಂತ್ರಜ್ಞರು ಸೇರಿದಂತೆ ಎಲ್ಲರೂ ಮಾತುಕತೆಯಲ್ಲಿ ಪಾಲ್ಗೊಂಡು ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಚಿತ್ರಗಳನ್ನು ಮೊದಲು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಿ ಆ ಬಳಿಕ ಟಿವಿ ಹಾಗೂ ಒಟಿಟಿ ಮೂಲಕ ಪ್ರೇಕ್ಷಕರು ಮನೆಯಲ್ಲೇ ಕುಳಿತು ನೋಡುವಂತೆ ಆಗಬೇಕು' ಎಂಬ ಅಭಿಪ್ರಾಯ ಎಲ್ಲರ ಪೋಸ್ಟ್ ಸಾರಾಂಶ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಕ್ಕಾ... ಶಿವಣ್ಣನಿಗೆ ತಮನ್ನಾ ಜೊತೆ ಹಾಡು ಬೇಕಂತೆ': ಗೀತಕ್ಕನ ಮುಂದೆ Fitting ಇಟ್ಟ ನಿರ್ದೇಶಕ ಶ್ರೀನಿ
ಸ್ಟಾರ್‌ಡಮ್ ಶಾಶ್ವತವಲ್ಲ, ಸಾವು ಕೂಡ ಬದುಕಿನಷ್ಟೇ ಸತ್ಯ: ಅಪ್ಪು ನೆನೆದು ಶಿವಣ್ಣ ಭಾವುಕ