ನವಗ್ರಹದಲ್ಲಿ ದರ್ಶನ್ ಪಾತ್ರ ವಿನೋದ್ ಪ್ರಭಾಕರ್ ಮಾಡಬೇಕಿತ್ತು; ಅಸಲಿ ಕತೆ ಬಯಲು ಮಾಡಿದ ದಿನಕರ್!

Suvarna News   | Asianet News
Published : Feb 13, 2021, 02:38 PM IST
ನವಗ್ರಹದಲ್ಲಿ ದರ್ಶನ್ ಪಾತ್ರ ವಿನೋದ್ ಪ್ರಭಾಕರ್ ಮಾಡಬೇಕಿತ್ತು; ಅಸಲಿ ಕತೆ ಬಯಲು ಮಾಡಿದ ದಿನಕರ್!

ಸಾರಾಂಶ

ಸೂಪರ್ ಹಿಟ್ ನವಗ್ರಹ ಚಿತ್ರದ ಬಗ್ಗೆ ನಿರ್ದೇಶಕ ದಿನಾಕರ್ ಖಾಸಗಿ ಯುಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.   

ಕನ್ನಡ ಚಿತ್ರರಂಗದ ಖಳನಟರ ಮಕ್ಕಳು ಒಟ್ಟಾಗಿ ಕಾಣಿಸಿಕೊಂಡ ನವಗ್ರಹ ಸಿನಿಮಾ ರಿಲೀಸ್‌ ಆಗಿ 12 ವರ್ಷ ಪೂರೈಸಿದೆ. 2008ರಲ್ಲಿ ದೊಡ್ಡ ದಾಖಲೆ ಮಾಡಿದ ಈ ಚಿತ್ರದ ಬಗ್ಗೆ ನಿರ್ದೇಶಕ ದಿನಾಕರ್ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಪಾತ್ರಗಳ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಹಾಗೂ ವಿನೋದ್ ಸದ್ಯಕ್ಕೆ ಟ್ರೆಂಡ್‌ನಲ್ಲಿರವ ಕಾರಣ ಈ ವಿಡಿಯೋ ವೈರಲ್ ಆಗುತ್ತಿದೆ..

ನವಗ್ರಹ ಚಿತ್ರಕ್ಕೆ 12 ವರ್ಷ; ಭಾಗ-2ಕ್ಕೆ ಡಿ-ಬಾಸ್‌ ಸಾಥ್‌ ಕೊಡುತ್ತಾರಾ? 

ನವಗ್ರಹ ಚಿತ್ರದಲ್ಲಿ ಪ್ರತಿಯೊಬ್ಬ ನಟನ ಪಾತ್ರಕ್ಕೂ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದೆ. ಅದರಲ್ಲಿ ಜಗ್ಗು ಪಾತ್ರ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಪ್ರಮುಖ ಪಾತ್ರವಾದರೂ ಖಳನಾಯಕನ ಪಾತ್ರವಾಗಿತ್ತು. ಚಿತ್ರಕತೆ ಚರ್ಚೆ ಸಮಯದಲ್ಲಿ ಈ ಪಾತ್ರವನ್ನು ಮಾಡಲು ವಿನೋದ್ ಪ್ರಭಾಕರ್ ಆಯ್ಕೆಯಾಗಿದ್ದರು. ಆದರೆ ಖಳನಾಯಕನ ಪಾತ್ರವಾದ ಕಾರಣ ವಿನೋದ್ ಹಿಂದೇಟು ಹಾಕಿದ್ದಾರೆ. ಕತೆ ಹೇಳಿ ಸ್ವತಃ ದರ್ಶನ್ ಈ ಪಾತ್ರ ಮಾಡಲು ಒಪ್ಪಿಕೊಂಡರಂತೆ. 

ನವಗ್ರಹ ಚಿತ್ರದ ಕತೆ ಹೇಳಿದ ತಕ್ಷಣವೇ ದರ್ಶನ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.  ನೆಗೆಟಿವ್ ಶೇಡ್ ಆದರೂ ಪರ್ವಾಗಿಲ್ಲ, ನಾನೇ ಮಾಡುತ್ತೇನೆ ಎಂದು ಡಿ ಬಾಸ್ ಹೇಳಿದ್ದರಂತೆ. 100 ದಿನಗಳ ಯಶಸ್ವಿ ಪ್ರದರ್ಶನ ಪಡೆದ ನವಗ್ರಹ ಎರಡನೇ ಭಾಗ ಬರಬೇಕು ಎಂದು ಅಭಿಮಾನಿಗಳು ದಿನಕರ್ ಬಳಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸದ್ಯಕ್ಕೆ ದರ್ಶನ್ ರಾಬರ್ಟ್‌ ಸಿನಿಮಾ ರಿಲೀಸ್ ಆಗಬೇಕಿದೆ, ವಿನೋದ್ ಪ್ರಭಾಕರ್ ಶ್ಯಾಡೋ ಸಿನಿಮಾ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶಣ ಕಾಣುತ್ತಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?