ತಮಿಳು ಚಿತ್ರರಂಗಕ್ಕೆ ಮತ್ತೊಬ್ಬ ಕನ್ನಡಿಗ ಎಂಟ್ರಿ!

Suvarna News   | Asianet News
Published : Jul 29, 2021, 11:27 AM IST
ತಮಿಳು ಚಿತ್ರರಂಗಕ್ಕೆ ಮತ್ತೊಬ್ಬ ಕನ್ನಡಿಗ ಎಂಟ್ರಿ!

ಸಾರಾಂಶ

ಪಿಚ್ಚಕಾರನ್‌ ನಟನ ಜತೆಗೆ ದಿಯಾ ಚಿತ್ರದ ನಾಯಕ ಪೃಥ್ವಿ. ಡಾಲಿ ಧನಂಜಯ್‌ ಕೂಡ ಇರಲಿದ್ದಾರಂತೆ.   

ಕ್ಯೂಟ್ ಸ್ಮೈಲ್‌ನಿಂದ ಹೊಸ ರೀತಿಯ ಲವ್ ಸ್ಟೋರಿ ಕ್ರಿಯೇಟ್ ಮಾಡಿದ ನಟ ಪೃಥ್ವಿ ಅಂಬರ್‌ಗೆ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಜಯ್‌ ಆ್ಯಂಟನಿ ನಟನೆಯ, ವಿಜಯ್‌ ಮಿಲ್ಟನ್‌ ನಿರ್ದೇಶನದ ಚಿತ್ರದಲ್ಲಿ ಪೃಥ್ವಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ’ ಚಿತ್ರಕ್ಕೆ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಆ ಚಿತ್ರದಲ್ಲಿ ಪೃಥ್ವಿ ಹಾಗೂ ಧನಂಜಯ್‌ ಪ್ರತಿಭೆ ನೋಡಿದ ನಿರ್ದೇಶಕರು ಇಬ್ಬರು ಕಲಾವಿದರನ್ನು ತಮಿಳು ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್‌ ಕೂಡ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ 'ಪುಷ್ಪಾ' ಚಿತ್ರದ ಮೂಲಕ ಡಾಲಿ ಕಾಲಿವುಡ್‌ಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. 

ಕಡಲ ತೀರದಲ್ಲಿ ನಿಧಿ-ಆದಿ ಒಟ್ಟಾಗಿ ಕಂಡು ನೆಟ್ಟಿಗರು ಶಾಕ್; ನೀವಿನ್ನೂ ಬದುಕಿದ್ದೀರಾ?

ಇದೊಂದು ಆ್ಯಕ್ಷನ್‌ ಆಧರಿತ ಸಿನಿಮಾ ಆಗಿದ್ದು, ವಿಜಯ್‌ ಮಿಲ್ಟನ್‌ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಈ ಚಿತ್ರಕ್ಕೆ ಶೂಟಿಂಗ್‌ ಶುರುವಾಗಲಿದೆ. ಪೃಥ್ವಿ ನಟನೆಯ ಹಲವು ಸಿನಿಮಾಗಳು ರಿಲೀಸ್‌ಗೆ ಕಾಯುತ್ತಿವೆ. ಲೋಹಿತ್ ನಿರ್ದೇಶನ ಲೈಫ್‌ ಇಸ್ ಬ್ಯೂಟಿಫುಲ್ ಸಿನಿಮಾ, ಶಶಿಧರ್ ನಿರ್ದೇಶನದ ಶುಗರ್ ಫ್ಯಾಕ್ಟರಿ, ನವೀನ್ ದ್ವಾರಕನಾಥ್ ನಿರ್ದೇಶನ Regn., ದರ್ಶನ್ ಅಪೂರ್ವ ನಿರ್ದೇಶನ ಹೆಸರಿಡದ ಚಿತ್ರ ರಿಲೀಸ್‌ಗೆ ಸಿದ್ಧವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?