
ನಟ ದರ್ಶನ್ ಜೈಲಲ್ಲಿದ್ರು ಮತ್ತೆ ಮತ್ತೆ ನೆನಪಾಗ್ತಾನೆ ಇದ್ದಾರೆ. ಅದಕ್ಕೆ ಕಾರಣ ದಾಸನ ಆ ಮಾತು. ನಡವಳಿಕೆಗಳು. ಲೈಫ್ ಕೊಟ್ಟ ಡೈರೆಕ್ಟರ್ ಅನ್ನೇ ಪುಡಾಂಗ್ ಅಂದಿದ್ದ ದರ್ಶನ್ ಅಂದು ಭಾರಿ ಚರ್ಚೆ ಹುಟ್ಟುಹಾಕಿದ್ರು. ಆ ಮಾತುಗಳು ಈಗ ಮತ್ತೆ ನೆನಪಾಗ್ತಿವೆ. ಆದ್ರೆ ಈ ಭಾರಿ ಅದಕ್ಕೆ ಕಾರಣ ಆಗಿದ್ದು ಬಾದ್ ಷಾ ಕಿಚ್ಚ ಸುದೀಪ್. ಹಾಗಾದ್ರೆ ಏನಿದು ಪ್ರೇಮ್ ದರ್ಶನ್-ಸುದೀಪ್ ಮಧ್ಯೆ ನಡೆಯೋ ಮಾತಿನ ಕತೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ.
ನಟ ದರ್ಶನ್ ಜೈಲು ಸೇರಿದ್ದಾಗಿದೆ. ಕೊಲೆ ಕೇಸಿನಿಂದ ತಪ್ಪಿಸಿಕೊಂಡು ಹೊರ ಬಂದ್ರೆ ಸಾಕಾಗಿದೆ. ಇಂತಹ ದರ್ಶನ್ ಹೇಳಿದ್ದ ಅದೊಂದು ಮಾತು ಮತ್ತೆ ಮತ್ತೆ ನೆನಪಾಗ್ತಿದೆ. ಅದೇ ಪ್ರೇಮ್ ಏನು ದೊಡ್ಡ ಪುಡಾಂಗ ಅನ್ನೋ ಕೋಪದ ಮಾತು. ಯೆಸ್, 2021ರಲ್ಲಿ 25 ಕೋಟಿ ರೂಪಾಯಿ ಫೇಕ್ ಲೋನ್ ಪ್ರಕರಣದಿಂದ ಶುರುವಾದ ದರ್ಶನ್ ವಿವಾದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಸಪ್ಲೈಯರ್ಗೆ ಹೊಡೆದ ಆರೋಪದವರೆಗೂ ಬಂತು ನಿಂತಿತ್ತು. ಈ ಬಗ್ಗೆ ತಮ್ಮ ಫಾರ್ಮ್ ಹೌಸ್ನಲ್ಲಿ ಪ್ರತಿಕ್ರಿಯೆ ಕೊಡುವಾಗ ನಿರ್ದೇಶಕ 'ಜೋಗಿ' ಪ್ರೇಮ್ ಬಗ್ಗೆ ದರ್ಶನ್ ಲಗುವಾಗಿ ಮಾತನಾಡಿದ್ರು. ಪ್ರೇಮ್ ಏನು ದೊಡ್ಡ ಪುಡಾಂಗಾ? ಎರಡು ಕೊಂಬ್ ಐತಾ ಅಂತೆಲ್ಲಾ ಹೇಳಿದ್ರು.
ನಟ ಕಿಚ್ಚ ಸುದೀಪ್ ಹಾಗು ಜೋಗಿ ಪ್ರೇಮ್ ಆತ್ಮೀಯ ಸ್ನೇಹಿತರು. ಆದ್ರೆ ಅದಕ್ಕೂ ಮೊದಲು ಕಿಚ್ಚ ಸುದೀಪ್ಗೆ ಪ್ರೇಮ್ ಗುರುವಾಗಿದ್ದಾರೆ. ಅದು ಹೇಗೆ ಅಂದ್ರೆ, ಸಿಸಿಎಲ್ ಪಂದ್ಯ ಆಡೋವಾಗ ಕಿಚ್ಚ ಬೌಲರ್ಗೆ ಕೆಟ್ಟ ಭಾಷೆಯಲ್ಲಿ ಬೈದು ಬುದ್ದಿ ಹೇಳಿದ್ರು. ಸುದೀಪ್ ಬೈದಿದ್ದ ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಆದ್ರೆ ಆ ಬೈಗುಳ ಕಿಚ್ಚನ ಬಾಯಲ್ಲಿ ಬರೋದಕ್ಕೆ ಗುರು ಪ್ರೇಮ್ ಅಂತ ಸುದೀಪ್ ಅವರೇ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಅಷ್ಟಕ್ಕೂ ಪ್ರೇಮ್ರನ್ನು ಕಿಚ್ಚ ಎಲ್ಲರೆದುರು ಕಾಲ್ ಎಳೆಯೋಕೆ ಕಾರಣನೇ ಪ್ರೇಮ್. ಕಿಚ್ಚ ಕ್ರಿಕೆಟ್ ಗ್ರೌಂಡ್ನಲ್ಲಿ ಆಡಿದ್ದ ಮಾತನ್ನ ಕಾರ್ಯಕ್ರಮದಲ್ಲಿ ಪ್ರೇಮ್ ಹೇಳಿದ್ರು. ಸುದೀಪ್ ನಮ್ಮ ಟ್ರ್ಯಾಕ್ಗೆ ಬಂದಿದ್ದಾರೆ ಅಂದಿದ್ರು. ಇದಕ್ಕೆ ಕಿಚ್ಚ ಪ್ರೇಮ್ಗೆ ಅಲ್ಲೇ ಕೌಂಟರ್ ಕೊಟ್ಟಿದ್ದು..
ಜೋಗಿ ಪ್ರೇಮ್ ನಟ ದರ್ಶನ್ ಹಾಗು ಕಿಚ್ಚ ಸುದೀಪ್ಗೆ ಅತ್ಯಾತ್ಮೀಯ. ಈ ಇಬ್ಬರು ಜೋಡೆತ್ತುಗಳು ಪ್ರೇಮ್ ಬಗ್ಗೆ ಏನೇ ಮಾತಾಡಿದ್ರು. ಗಟ್ಟಿ ಮನಸ್ಸು ಮಾಡಿ ತಡೆದುಕೊಂಡು ಆಗಿದ್ದಾಯ್ತು ಅಂತ ಮುಂದೆ ಹೋಗ್ತಾರೆ ಪ್ರೇಮ್. ಹೀಗಾಗೆ ದರ್ಶನ್ ಪ್ರೇಮ್ಗೆ ಏನ್ ದೊಡ್ಡ ಪುಡಾಂಗ ಅಂತ ಹೇಳಿದ್ಮೇಲೂ ಸಿನಿಮಾ ಮಾಡೋದಕ್ಕೆ ಕಥೆ ರೆಡಿ ಮಾಡಿದ್ರು ಪ್ರೇಮ್..
ದರ್ಶನ್ ಪ್ರೇಮ್ಗೆ ಪುಡಾಂಗ್ ಅಂದಿದ್ದು 2021ರಲ್ಲಿ. ಅಂದು ಭಾರಿ ನೊಂದುಕೊಂಡಿದ್ದ ಪ್ರೇಮ್ ಕಾಲೆಳೆಯುವುದು, ಕಿಂಡಲ್ ಮಾಡುವ ಅವಶ್ಯಕತೆ ಇಲ್ಲ ಅಂತ ದರ್ಶನ್ಗೆ ನೇರವಾಗೇ ಹೇಳಿದ್ರು. ಕೊನೆಗೆ ದಚ್ಚು ಸ್ನೇಹಿತೆ, ಪ್ರೇಮ್ ಪತ್ನಿ ರಕ್ಷಿತಾ ಇಬ್ಬರ ಮಧ್ಯೆ ಬಂದು ಸಂದಾನ ಮಾಡಿದ್ರು. ಆಗ ಪ್ರೇಮ್ ಮತ್ತೆ ದರ್ಶನ್ ಜೊತೆ ಸೇರಿ ಸಿನಿಮಾ ಮಾಡೋದಕ್ಕೆ ತಯಾರಿ ಮಾಡಿದ್ರು. 2024ರ ಅಗಸ್ಟ್ನಲ್ಲಿ ಆ ಚಿತ್ರ ಸೆಟ್ಟೇರಬೇಕಿತ್ತು. ಅಷ್ಟರಲ್ಲೇ ದರ್ಶನ್ ಕೊಲೆ ಕೇಸ್ನಲ್ಲಿ ಅಂದರ್ ಆದ್ರು..
ಈಗ ಸುದೀಪ್ ಕೂಡ ಪ್ರೇಮ್ಗೆ ಕಿಚಾಯಿಸಿದ್ದಾರೆ. ಸಿಸಿಎಲ್ ಆಡುವಾಗ ಕ್ರಿಕೆಟ್ ಗ್ರೌಂಡ್ನಲ್ಲಿ ಹೇಳಿದ್ದ ಆ ಒಂದು ಮಾತು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ನನ್ನ ಗುರು ಪ್ರೇಮ್ ಅಂತ ಕಿಚ್ಚ ಎಲ್ಲರೆದುರು ಹೇಳಿ ತನ್ನ ವೈರಲ್ ವಿಡಿಯೋ ಹಿಂದಿನ ಸೂತ್ರಧಾರಿ ಪ್ರೇಮ್ ಎಂದುಬಿಟ್ಟಿದ್ದಾರೆ. ಹೀಗಾಗೆ ಪ್ರೇಮ್ ದರ್ಶನ್ ಹಾಗು ಕಿಚ್ಚನ ಕುಚಿಕು ಅನ್ನೋದ್ರಲ್ಲಿ ನೋ ಡೌಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.