ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಹಿತಿ ಬಿಚ್ಚಿಟ್ಟ ಸಿನಿಮಾ ನಿರ್ದೇಶಕ, ಸ್ಯಾಂಡಲ್‌ವುಡ್‌ನಲ್ಲಿ ಕೋಲಾಹಲ

Published : Feb 02, 2026, 03:33 PM ISTUpdated : Feb 02, 2026, 04:08 PM IST
Represntative image Gemini AI

ಸಾರಾಂಶ

ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಹಿತಿ ಬಿಚ್ಚಿಟ್ಟ ಸಿನಿಮಾ ನಿರ್ದೇಶಕ, ಸ್ಯಾಂಡಲ್‌ವುಡ್‌ನಲ್ಲಿ ಕೋಲಾಹಲ,   ವಿವಾದ ಜೋರಾಗುತ್ತಿದ್ದಂತೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ಆಧರೆ ನಿರ್ಮಾಪಕರ ಸಂಘ ಕೆರಳಿದೆ. 

ಬೆಂಗಳೂರು (ಫೆ.02) ಕನ್ನಡ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇಂಡಸ್ಟ್ರಿ ಪ್ರಮುಖರ ಹೇಳಿಕೆಗಳು ದೇಶದಲ್ಲೇ ಕೋಲಾಹಲ ಸೃಷ್ಟಿಸುತ್ತಿದೆ. ಇದೀಗ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿರುವ ಹೇಳಿಕೆ ಇದೀಗ ಕೋಲಾಹಲಕ್ಕೆ ಕಾರಣಾಗಿದೆ. ಕಲಾವಿದರಿಗೆ ಕಾಂಡೋಮ್ ಸಪ್ಲೈ ಆಗುತ್ತಿರುವ ಮಾಹಿತಿಯನ್ನು ಚಂದ್ರಚೂಡ್ ಬಿಚ್ಚಿಟ್ಟಿದ್ದಾರೆ. ಕೆಲ ನಿರ್ಮಾಪಕರು ಕಲಾವಿದರಿಗೆ ಕಾಂಡೋಮ್ ಪೂರೈಕೆ ಮಾಡುತ್ತಿದ್ದಾರೆ ಎಂದು ಸ್ಫೋಟಕ ಮಾಹಿತಿ ತೆರೆದಿಟ್ಟಿದ್ದರು. ಚಕ್ರವರ್ತಿ ಚಂದ್ರಚೂಡ್ ಹೇಳಿಕೆಯಿಂದ ಇದೀಗ ಭಾರಿ ವಿವಾದ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ತಾವು ಮಾತನಾಡಿರುವುದು ತಮಿಳು ಸನಿಮಾ ರಂಗ ಹಾಗೂ ಅಲ್ಲಿಯ ವಾತಾವರಣ. ನನ್ನ ಹೇಳಿಕೆಗೂ ಕನ್ನಡ ನಿರ್ಮಾಪಕರ ವಿರುದ್ದ ಅಲ್ಲ. ಕಮೋಡ್ ಟು ಕಾಂಡೋಮ್ ಅನ್ನೋ ಉಪಮೆಯನ್ನು ಬಳಕೆ ಮಾಡಿದ್ದೇನೆ ಹೊರತು, ಕರ್ನಾಟಕ ಸಿನಿಮಾ ನಿರ್ಮಾಪಕರ ವಿರುದ್ದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು 

ಚಕ್ರವರ್ತಿ ಚಂದ್ರಚೂಡ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಅದಕ್ಕೂ ಮೊದಲೇ ಕನ್ನಡ ನಿರ್ಮಾಪಕರ ಸಂಘ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್,  ತಮಿಳು ಸಿನಿಮಾ ರಂಗದ ಕುರಿತು ಮಾತನಾಡುವ ವೇಳೆ ಈ ಉಪಮೆ ಬಳಕೆ ಮಾಡಿದ್ದಾರೆ.  ತೆರೆ ಹಿಂದೆ ನಡೆಯುತ್ತಿರುವ ಕೆಲ ಘಟನೆಗಳ ಕುರಿತು ಮಾತನಾಡಿದ್ದರು. ಈ ಪೈಕಿ ಕಾಂಡೋಮ್ ಸಪ್ಲೈ ಹೇಳಿಕೆಗೆ ಕನ್ನಡ ನಿರ್ಮಾಪಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ತುರ್ತು ಸಭೆ ಕರೆದ ನಿರ್ಮಾಪಕರ ಸಂಘ

ಕೆಲ ನಿರ್ಮಾಪಕರು, ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಡುತ್ತಿದ್ದಾರೆ ಹೇಳಿಕೆ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಕನ್ನಡ ಸಿನಿಮಾ ನಿರ್ಮಾಪಕರ ಸಂಘ ತುರ್ತು ಸಭೆ ಕರೆದಿತ್ತು. ಈ ಸಭೆಯಲ್ಲಿ ಎಲ್ಲಾ ನಿರ್ಮಾಪಕರ ಸಂಘಡದ ಪದಾಧಿಕಾರಿಗಳು, ಸದಸ್ಯರು ಚಕ್ರವರ್ತಿ ಚಂದ್ರಚೂಡ್ ವಿರುದ್ದ ದೂರು ದಾಖಲಿಸಲು ಒಮ್ಮತದ ನಿರ್ಧಾರ ಮಾಡಿದ್ದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಎಮ್.ಜಿ ರಾಮಮೂರ್ತಿ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಕೇಸ್​ ದಾಖಲಿಸುವುದಾಗಿ ನಿರ್ಮಾಪಕ ಸಂಘ ಹೇಳಿತ್ತು. ಚಕ್ರವರ್ತಿ ಚಂದ್ರಚೂಡ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಯಾವುದೇ ಆದಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕನ್ನಡ ಸಿನಿಮಾ ನಿರ್ಮಾಪಕರನ್ನೇ ಅನುಮಾನದಿಂದ ನೋಡುವಂತೆ ಮಾಡಿದ್ದಾರೆ. ಕಲಾವಿದರನ್ನು ನಿರ್ಮಾಪಕರ ಸಂಘ ಗೌರವದಿಂದ ನೋಡಿಕೊಂಡಿದೆ, ನಡೆಸಿಕೊಂಡಿದೆ. ಇದರ ನಡುವೆ ಚಕ್ರವರ್ತಿ ಚಂದ್ರಚೂಡ್ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಗೊಂದಲ, ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ನಿರ್ಮಾಪಕರ ಸಂಘ ಆಕ್ರೋಶ ಹೊರಹಾಕಿದೆ.

ಸಿಜೆ ರಾಯ್ ಕುರಿತು ಸ್ಫೋಟಕ ಹೇಳಿಕೆ

ಇತ್ತೀಚೆಗೆ ನಿಧನರಾದ ಉದ್ಯಮಿ ಸಿಜೆ ರಾಯ್ ಸಾವಿನ ಕುರಿತು ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್, ಇದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದರು. ಸಿಜೆ ರಾಯ್ ಬದುಕು ಅಂತ್ಯಗೊಳಿಸುವ ನಿರ್ಧಾರ ಮಾಡುವ ವ್ಯಕ್ತಿಯಲ್ಲ.ಸಿಜೆ ರಾಯ್ ಸಾವಿನ ಹಿಂದೆ ಮೂವರು ತೆಲುಗು ನಟಿಯರ ಕೈವಾಡವಿದೆ ಎಂದಿದ್ದರು. ಮೂವರು ತೆಲುಗು ನಟಿಯರು ಸಿಜೆ ರಾಯ್ ಹನಿಟ್ರಾಪ್‌ಗೆ ಯತ್ನಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಸಿಜೆ ರಾಯ್ ರಾಜಕಾರಣಿಗಳಿಗೆ ಫಂಡಿಂಗ್ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಒತ್ತಡವೂ ಸಿಜೆ ರಾಯ್ ಸಾವಿಗೆ ಕಾರಣವಾಗಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್
ನಟಿ ತಾರಾ ಪುತ್ರನಿಗೆ 13ರ ಸಂಭ್ರಮ: ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ- ಹುಟ್ಟುಹಬ್ಬದ ವಿಡಿಯೋ ವೈರಲ್