ದಾವಣಗೆರೆ ನಗರಸಭೆ ಎದುರು ನಟಿ ಲೀಲಾವತಿ ಸಿನಿಮಾ ಚಿತ್ರೀಕರಣ ನಡೆದಿತ್ತು..!

Published : Dec 09, 2023, 03:00 PM IST
ದಾವಣಗೆರೆ ನಗರಸಭೆ ಎದುರು ನಟಿ ಲೀಲಾವತಿ ಸಿನಿಮಾ ಚಿತ್ರೀಕರಣ ನಡೆದಿತ್ತು..!

ಸಾರಾಂಶ

ದಾವಣಗೆರೆಯ ನಗರಸಭೆ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ.ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು, ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯ ಎಲ್ಲವು ಚಿತ್ರೀಕರಣವಾಗಿತ್ತು. 

ದಾವಣಗೆರೆ(ಡಿ.09):  ಶುಕ್ರವಾರ ನಿಧನರಾದ ಖ್ಯಾತ ನಟಿ ಲೀಲಾವತಿ ''''ತುಂಬಿದ ಕೊಡ'''' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದಾವಣಗೆರೆಗೆ ಆಗಮಿಸಿದ್ದರು.

ದಾವಣಗೆರೆಯ ನಗರಸಭೆ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ.ಬಡಾವಣೆಯ ಖಮಿತ್ಕಲ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು, ಹಳೆ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿಯವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿಯವರು ಎದುರಾಗಿ ಬೀಳುವ ದೃಶ್ಯ ಎಲ್ಲವು ಚಿತ್ರೀಕರಣವಾಗಿತ್ತು. 

ಕೂಡ್ಲಿಗಿ: 3 ಬಾರಿ ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿದ್ದ ಲೀಲಾವತಿ

ಈ ಚಿತ್ರಕ್ಕಾಗಿ ಜನಪ್ರಿಯ ಹಾಡು ''''ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ...." ಎನ್ನುವುದನ್ನು ಪಿ ಕಾಳಿಂಗರಾಯರು ಹಾಡಿರುವುದು. ಈ ಚಲನ ಚಿತ್ರದಲ್ಲಿ ಲೀಲಾವತಿಯವರ ಜೊತೆ ರಾಜಕುಮಾರ್ ಜಯಂತಿ ಹಾಗೂ ನಮ್ಮ ನಗರದ ಚಿಂದೋಡಿ ಲೀಲಾ ಮುಂತಾದವರು ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು ಎಂಬ ಮಾಹಿತಿಯನ್ನು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!