
ಅದರಲ್ಲೂ ಹೊಸಬರ ‘ದಿಯಾ’ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಯಶ್ ಹಾಗೂ ಪುನೀತ್ ಈ ಸಿನಿಮಾ ಬಗ್ಗೆ ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ನೋಡಿ, ಹೊಸಬರನ್ನು ಪ್ರೋತ್ಸಾಹಿಸಿ ಅಂತ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿಭಾನುವಾರ ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. ‘ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರೋದಿಲ್ಲ ಅಂತ ಕೆಲವ್ರು ಆಗಾಗ ಹೇಳ್ತಾ ಇರ್ತಾರೆ. ಆದರೆ ಒಳ್ಳೆಯ ಸಿನಿಮಾ ಬಂದಾಗ ನೋಡಿ ಗೆಲ್ಲಿಸಿ’ ಅಂತ ನಟ ರಕ್ಷಿತ್ ಶೆಟ್ಟಿ‘ದಿಯಾ ’ಸಿನಿಮಾ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ.
ಮರಳಿ ಬಂದರು 6-2=5 ಖ್ಯಾತಿಯ ಅಶೋಕ್!
ವಾಪಸ್ ಹಣ ನಾನ್ ಕೋಡ್ತೀನಿ
‘ಇದೊಂದು ಒಳ್ಳೆಯ ಲವ್ ಸ್ಟೋರಿ. ಅದನ್ನು ತಕ್ಷಣಕ್ಕೆ ವರ್ಣಿಸಲು ನನ್ನಿಂದಾಗದು. ಅಷ್ಟುಚೆನ್ನಾಗಿದೆ. ಚಿತ್ರತಂಡ ಸಾಕಷ್ಟುಶ್ರಮ ಹಾಕಿ ಇಂತಹ ಸಿನಿಮಾ ಮಾಡಿದೆ. ಇಂತಹ ಸಿನಿಮಾಗಳು ಗೆಲ್ಲಬೇಕಿದೆ. ಒಳ್ಳೆಯ ಸಿನಿಮಾಗಳು ಗೆದ್ದಾಗ ಚಿತ್ರೋದ್ಯಮಕ್ಕೂ ಒಳ್ಳೆಯದಾಗುತ್ತೆ. ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತವೆ. ಎಲ್ಲಾ ಸಿನಿಮಾ ಆಸಕ್ತರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕಿದೆ. ಸಿನಿಮಾ ಚೆನ್ನಾಗಿಲ್ಲ ಅಂತಂದ್ರೆ ವಾಪಸ್ ಹಣ ಕೊಡುವುದಕ್ಕೆ ನಾನು ರೆಡಿಯಿದ್ದೇನೆ’ಅಂತ ರಕ್ಷಿತ್ ಶೆಟ್ಟಿಹೇಳಿದ್ದಾರೆ.
ಸಮ್ಮರ್ನಲ್ಲಿ ದೊಡ್ಡ ಚಿತ್ರಗಳ ಸಮರ; ಸ್ಟಾರ್ಗಳಿಲ್ಲದ ಮೊದಲ ಮೂರು ತಿಂಗಳು!
ಒಳ್ಳೆಯ ಸಿನಿಮಾಕ್ಕೆ ಬೆಂಬಲ ನೀಡಿ...
ಮಾಲ್ಗುಡಿ ಡೇಸ್ ಹಾಗೂ ದಿಯಾ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಸಾಥ್ ನೀಡಿದ್ದಾರೆ. ಸೋಷಲ್ ಮೀಡಿಯಾದಲ್ಲಿ ಈ ಚಿತ್ರಗಳ ಪೋಸ್ಟರ್ ಪೋಸ್ಟ್ ಮಾಡುವ ಮೂಲಕ ಒಳ್ಳೆಯ ಸಿನಿಮಾ ಬಂದಾಗ ಪ್ರೇಕ್ಷಕರು ನೋಡಿ ಹರಸಬೇಕಿದೆ ಎಂದು ವಿನಂತಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.