ದರ್ಶನ್ ಐತಿಹಾಸಿಕ ಸಿನಿಮಾ ಪರ್ವ ಶುರುವಾಗಿದೆ. ಬಹು ನಿರೀಕ್ಷೆಯ ‘ರಾಜವೀರ ಮದಕರಿ ನಾಯಕ’ ಚಿತ್ರಕ್ಕೆ ದೂರದ ಕೇರಳದ ಅರಣ್ಯ ಪ್ರದೇಶದಲ್ಲಿ ಬೃಹತ್ ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡಲು ಸಜ್ಜಾಗಿದ್ದು, ಈಗಾಗಲೇ ಚಿತ್ರತಂಡ ಕೇರಳಾಗೆ ತರಳಿದೆ.
ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಮೂಲಕ ಚಿತ್ರವಿದು. ದುರ್ಗದ ಕೋಟೆ ನಾಡಿನ ದೊರೆ ಮದಕರಿ ನಾಯಕನ ಜೀವನ ಪುಟಗಳನ್ನು ಆಧರಿಸಿದ ಸಿನಿಮಾ. ಕತೆಗಾರ ಬಿ ಎಲ್ ವೇಣು ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಒಂದು ವಾರ ಚಿತ್ರೀಕರಣ: ಚಿತ್ರತಂಡ ಪ್ಲಾನ್ ಮಾಡಿಕೊಂಡಿರುವಂತೆ ಒಂದು ವಾರ ಕೇರಳದಲ್ಲಿ ಚಿತ್ರೀಕರಣ ನಡೆಯಲಿದೆ. ಫೆ.16ರ ಮಧ್ಯರಾತ್ರಿಯಿಂದ ದರ್ಶನ್ ಅವರ ಹುಟ್ಟುಹಬ್ಬ ಸಂಭ್ರಮ ಶುರುವಾಗಲಿದ್ದು, ಹುಟ್ಟುಹಬ್ಬಕ್ಕೆ ಬೆಂಗಳೂರಿಗೆ ವಾಪಸ್ಸು ಬರಲಿದ್ದಾರೆ.
ದರ್ಶನ್ ಲೈಫಲ್ಲಿ ಎಂದೂ ಮರೆಯದ ದಿನವಿದು!
ಗುರುಕುಲದ ಸೆಟ್: ಮೊದಲ ಹಂತದ ಚಿತ್ರೀಕರಣಕ್ಕಾಗಿ ಕೇರಳದಲ್ಲಿ ಗುರುಕುಲದ ಸೆಟ್ ಹಾಕಲಾಗಿದ್ದು, ಈ ಸೆಟ್ನಲ್ಲೇ ಚಿತ್ರೀಕರಣ ನಡೆಯಲಿದೆ. ಗುರುಕುಲ, ಅದಕ್ಕೆ ತಕ್ಕಂತೆ ಗಿರಿಜನರ ಕಾಲೋನಿ, ನೂರಾರು ಕುಟುಂಬಗಳು ವಾಸಿಸುವ ತಾಂಡ, ಅಲ್ಲಿರುವ ಒಂದು ಸಮುದಾಯ ಹೀಗೆ ಹಲವು ಅಂಶಗಳನ್ನು ಕ್ರಿಯೇಟ್ ಮಾಡಿರುವ ಸೆಟ್ ಇದಾಗಿದ್ದು, ಮೊದಲ ಹಂತವಾಗಿ ಐದು ದಿನಗಳ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದಾರೆ.
ಗೂಗಲ್ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್ ಮಾಡ್ತಾರೆ ನೋಡಿ!
ಸಮರ ಕಲಿಯುವ ತಾಣ: ಮದಕರಿ ನಾಯಕ ಸಿಂಹಾಸನ ಏರುವ ಮುನ್ನ ರಾಜನಾಗಲು ಬೇಕಾಗುವ ತಯಾರಿ ಮಾಡಿಕೊಳ್ಳುತ್ತಾನೆ. 12 ವರ್ಷಕ್ಕೆ ಮದಕರಿನಾಯಕ ಸಿಂಹಾಸನ ಏರುತ್ತಾನೆಂಬುದು ಇತಿಹಾಸದ ಪುಟಗಳು ಹೇಳುತ್ತವೆ. ಹಾಗೆ ತೀರಾ ಚಿಕ್ಕ ವಯಸ್ಸಿಗೆ ರಾಜನಾಗಿ, ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಮದಕರಿ ನಾಯಕನಿಗೆ ಸಕಲ ವಿದ್ಯೆಗಳನ್ನೂ ಕೇರಳದಲ್ಲಿ ಕಲಿಸಿಕೊಡಲಾಗುತ್ತದೆ. ಇದೇ ಭಾಗದ ಚಿತ್ರೀಕರಣ ಕೇರಳದ ಗುರುಕುಲ ಸೆಟ್ನಲ್ಲಿ ನಡೆಯುತ್ತಿದೆ. ಬಾಲ್ಯ ಮತ್ತು ಯೌವ್ವನದ ದಿನಗಳ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು. ‘ಮದಕರಿ ನಾಯಕ ನಾಯಕರ ರಾಜ ಅಲ್ಲ, ಚಿತ್ರದುರ್ಗದ ದೊರೆ, ಆಗಿನ ಸಾಮ್ರಾಜ್ಯದ ರಾಜ’ ಎಂದು ಹೇಳುವ ಈ ಚಿತ್ರದಲ್ಲಿ ದರ್ಶನ್ ರಾಜವೀರ ಮದಕರಿ ನಾಯಕನಾಗಿ ಹೇಗೆ ಮಿಂಚಲಿದ್ದಾರೆಂಬ ಕುತೂಹಲ ಎಲ್ಲರಿಗೂ ಶುರುವಾಗಿದೆ.