ಒಂದು ಚಿತ್ರ, ನೂರೊಂದು ಕಣ್ಣೀರ ಕಥೆ: ಶಾಲೆ ಟ್ರಿಪ್​ಗೆಂದು ವೃದ್ಧಾಶ್ರಮಕ್ಕೆ ಹೋಗಿದ್ದ ಬಾಲಕಿಗೆ ಕಂಡಿದ್ದೇನು?

By Suchethana DFirst Published Sep 13, 2024, 5:40 PM IST
Highlights

ಮುತ್ತು ಕೊಡೋಳು ಬಂದಾಗ ತುತ್ತು ಕೊಡೋಳು ಬೇಡವಾಗ್ತಾಳೆ ಅನ್ನೋ ಗಾದೆ ಮಾತು ಅದೆಷ್ಟು ನಿಜವಾಗ್ತಿದೆ? ಈ ವೈರಲ್​ ಫೋಟೋ ಹಿಂದಿದೆ ಸಾವಿರಾರು ಕುಟುಂಬಗಳ ಕಥೆ-ವ್ಯಥೆ!
 

ಈ ಒಂದು ಚಿತ್ರವು  ಚಿತ್ರವು ಸಾವಿರ ಪದಗಳಿಗೆ ಸಮನಾಗಿದೆ. ಆದರೂ ಕೆಲವೊಮ್ಮೆ ಚಿತ್ರದ ಹಿಂದಿನ ಕಥೆಗಳು ಹೃದಯ ವಿದ್ರಾವಕವಾಗಿರುತ್ತದೆ. ಈ ಚಿತ್ರದಲ್ಲಿ ಶಾಲಾ ಬಾಲಕಿಯೊಬ್ಬಳು  ಅಳುತ್ತಿರುವ ದೃಶ್ಯ ಕಾಣಿಸುತ್ತದೆ. ಅಲ್ಲಿ ಇರುವ ವೃದ್ಧೆ ಕೂಡ ಕಣ್ಣೀರು ಹಾಕುವುದನ್ನು ನೋಡಿದರೆ ಇದರ ಹಿಂದಿನ ಕಥೆ ಸುಲಭವಾಗಿಯೇ ಅರ್ಥವಾಗುತ್ತದೆ.   ತನ್ನ ಶಾಲಾ ಪ್ರವಾಸದ ಭಾಗವಾಗಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದಳು ಈ ಬಾಲಕಿ. ಆದರೆ ಅಲ್ಲಿ ಅವಳಿಗೆ ಕಂಡದ್ದು ತನ್ನದೇ ಸ್ವಂತ ಅಜ್ಜಿ! ಬಾಲಕಿಗೆ ತನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. ಈಕೆ ನನ್ನನ್ನು ಮುದ್ದಿಸಿ, ಆಡಿಸಿ ಬೆಳೆಸಿದ ಅಜ್ಜಿ ಹೌದೋ ಅಲ್ಲವೋ ಎನ್ನುವುದು ತಿಳಿದುಕೊಳ್ಳುವಷ್ಟರಲ್ಲಿಯೇ ಆ ಅಜ್ಜಿ ತನ್ನ ಮೊಮ್ಮಗಳನ್ನು ನೋಡಿ ಓಡೋಡಿ ಬಂದು ಎದೆಗವಚಿಕೊಂಡು ಒಂದೇ ಸಮನೆ ಕಣ್ಣೀರು ಹಾಕಿದಳು. ಬಾಲಕಿಗೆ ಆಕಾಶವೇ ಕುಸಿದ ಅನುಭವ!

ಹೌದು. ಈ ಬಾಲಕಿಯ ಅಪ್ಪ-ಅಮ್ಮ ಅವಳಿಗೆ ಸುಳ್ಳು ಹೇಳಿದ್ದರು. ಅಜ್ಜಿ ಸಂಬಂಧಿಕರ ಮನೆಯಲ್ಲಿ ಇದ್ದಾಳೆ ಎಂದು ಹೇಳಿದ್ದರು. ತನ್ನ ಅಜ್ಜಿಯನ್ನು ನೋಡಬೇಕು ಎಂದು ಬಾಲಕಿ ಪಟ್ಟುಹಿಡಿದಾಗಲೆಲ್ಲಾ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಸತ್ಯ ಬೇರೆಯದ್ದೇ ಆಗಿತ್ತು. ಅಜ್ಜಿಯನ್ನು ನಿರ್ದಯಿಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಈ ವಿಡಿಯೋ ವೈರಲ್​ ಆಗುತ್ತಲೇ ಇಂಥ ಮಕ್ಕಳನ್ನು ಕೊಡುವ ಬದಲು ಮಕ್ಕಳೇ ಹುಟ್ಟದಿರುವುದು ಎಷ್ಟೋ ಲೇಸು ಎನ್ನುತ್ತಿದ್ದಾರೆ. ಮಗಳಿಗೆ ಈಗ ಸತ್ಯ ಗೊತ್ತಾಗಿದೆ. ಮುಂದೊಂದು ದಿನ ಅವಳೂ ಅಪ್ಪ-ಅಮ್ಮನನ್ನು ಹೀಗೆಯೇ ಮಾಡಬೇಕು ಎಂದು ಹಲವರು ಶಪಿಸುತ್ತಿದ್ದಾರೆ. ತಾವೂ ಮುಂದೊಂದು ದಿನ ವೃದ್ಧರಾಗುತ್ತೇವೆ ಎನ್ನುವ ಅರಿವೇ ಇಲ್ಲದೇ ಈ ರೀತಿಯ ವೃದ್ಧಾಶ್ರಮಕ್ಕೆ ತಳ್ಳುವವರ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Latest Videos

ಮನಸಿಗೆ ವಯಸ್ಸಿನ ಹಂಗೇಕೆ? ಬೆಳಗಾವಿಯ ವೃದ್ಧಾಶ್ರಮದ ಮಹಿಳೆಯರ ಕ್ಯೂಟ್​ ಸ್ಟೆಪ್: ಮನಸೋತ ನಟ ವಿಕ್ಕಿ ಕೌಶಲ್

ಅಷ್ಟಕ್ಕೂ, ಇಂದು ವೃದ್ಧಾಶ್ರಮಗಳು ಗಲ್ಲಿಗೊಂದರಂತೆ ತಲೆ ಎತ್ತಿವೆ. 2021 ರಲ್ಲಿ ಭಾರತದಲ್ಲಿ ಸರಿಸುಮಾರು 138 ಮಿಲಿಯನ್ ವೃದ್ಧರು ಇದ್ದರು. ಇವರ ಸಂಖ್ಯೆ 2031 ರಲ್ಲಿ ಸರಿಸುಮಾರು 56 ಮಿಲಿಯನ್​ಗೆ ತಲುಪಲಿದೆ.  ಭಾರತದಲ್ಲಿ ಸದ್ಯದ ಮಟ್ಟಿಗೆ 18 ಮಿಲಿಯನ್ ನಿರಾಶ್ರಿತ ವೃದ್ಧರಿದ್ದಾರೆ. ಇವರಲ್ಲಿ ಹಲವರು ಮಕ್ಕಳು, ಮೊಮ್ಮಕ್ಕಳು ಅಥವಾ ಕುಟುಂಬವನ್ನು ಹೊಂದಿರುವವರೇ. ಆದರೆ ಅವರಿಗೆ ಇದು ಬೇಡ ಅಷ್ಟೇ.  ಇಂದು ಹಲವು ಮಕ್ಕಳಿಗೆ ಅಪ್ಪ-ಅಮ್ಮ ತಮ್ಮನ್ನು ಸಾಕಿ ಸಲಹುವ ವಸ್ತು ಮಾತ್ರ. ತಮ್ಮ ಕಾಲ ಮೇಲೆ ತಾವು ನಿಂತ ತಕ್ಷಣ ಅಪ್ಪ-ಅಮ್ಮ ಹೊರೆಯಾಗಿಬಿಡುತ್ತಾರೆ. ಅದಕ್ಕಾಗಿಯೇ ವೃದ್ಧಾಶ್ರಮಗಳು ಇಂದು ತುಂಬಿ ತುಳಕಾಡುತ್ತಿವೆ. ಈ ಆಶ್ರಮದಲ್ಲಿ ಇರುವ ವಯೋ ವೃದ್ಧರನ್ನು ಮಾತನಾಡಿದರೆ, ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ. 

ಅವರಲ್ಲಿ ಬಹುತೇಕ ಮಂದಿ ಮಕ್ಕಳಿಗೆ ತ್ಯಜಿಸಲ್ಪಟ್ಟವರೇ ಹೆಚ್ಚು. ಮದುವೆಯಾದ ಮೇಲೆ ಅಪ್ಪ-ಅಮ್ಮ ಮಕ್ಕಳಿಗೆ ಬೇಡ, ಇನ್ನು ಕೆಲವರು ವಿದೇಶಗಳಲ್ಲಿ ಉದ್ಯೋಗ ಸಿಕ್ಕರೆ, ಅಲ್ಲಿ ಹೆತ್ತವರನ್ನು ಕರೆದುಕೊಂಡು ಹೋಗುವುದು ಭಾರವಾಗುತ್ತದೆ.... ಹೀಗೆ ಒಬ್ಬೊಬ್ಬರದ್ದು ಒಂದು ಕಥೆ-ವ್ಯಥೆ. ಈ ವೈರಲ್​ ವಿಡಿಯೋಗೆ ಹರಿದು ಬರುತ್ತಿರುವ ಕಮೆಂಟ್ಸ್​ ನೋಡಿದರೆ, ಇನ್ನೂ ಮನುಷ್ಯತ್ವ ಎನ್ನುವುದು ಹಲವರ ಹೃದಯದಲದಲ್ಲಿ ಜಾಗೃತವಾಗಿದೆ ಎಂದು ಗೊತ್ತಾಗುತ್ತದೆ. ಕೆಲವರು ತಮ್ಮ ಕಥೆಗಳನ್ನೂ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ಅರಿವಿಗೆ ಬಂದಿರುವವರ ಕಥೆಯನ್ನು ಹೇಳಿದ್ದಾರೆ. ಈ ಪ್ರಪಂಚ ಎಷ್ಟು ಕ್ರೂರಿ ಎಂದು ಮತ್ತೆ ಕೆಲವರು ಕಮೆಂಟ್​ ಮಾಡಿದ್ದಾರೆ. 

ಲಕ್ಷ್ಮೀ ನಿವಾಸದ ವಿಲನ್​ ಕಾವೇರಿ ಡಾನ್ಸ್​ ನೋಡಿರುವಿರಾ? ಸೈಂಟಿಸ್ಟ್​ ಆದಾಕೆ ನಟಿಯಾದ ರಿಯಲ್​ ಸ್ಟೋರಿ ಇಲ್ಲಿದೆ...

click me!