'ರಾಹುಲ್ ಗಾಂಧಿ ಇನ್ನು ಪಪ್ಪು ಅಲ್ಲ ಅಪ್ಪ'

By Web DeskFirst Published Dec 17, 2018, 2:24 PM IST
Highlights

ಪಂಚರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಬುದ್ಧತೆಯನ್ನು ಗಳಿಸುವ ಮೂಲಕ ಪಪ್ಪು ಹೋಗಿ ಅಪ್ಪನಾಗಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೊಗಳಿದ್ದಾರೆ. 

ನವದೆಹಲಿ :  ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ  ಗೆಲುವು ಸಾಧಿಸಿ ಅಧಿಕಾರ ಸ್ವೀಕಾರ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊಗಳಿದ್ದು,  ಪಪ್ಪು ಹೋಗಿ ಪ್ರಬುದ್ಧತೆ ಇರುವ ಅಪ್ಪನಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ. 

ಮಧ್ಯ ಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ,  ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪಪ್ಪು ಆಗಿ ಉಳಿದಿಲ್ಲ, ಕಾಂಗ್ರೆಸ್ ನಲ್ಲಿ ಅಪ್ಪ ಆಗಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಸಲಹೆಯೊಂದನ್ನು ನೀಡುವುದಾಗಿ ಹೇಳಿದ ರಾಮದಾಸ್, ಶೀಘ್ರದಲ್ಲೇ ಅವರು ಮದುವೆಯಾಗಿ ಅಪ್ಪನಾಗಲಿ ಎಂದರು. 

ಅಲ್ಲದೇ ಪಂಚರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಠಾವಳೆ ಇದು ಪ್ರಧಾನಿ ನರೇಂದ್ರ ಮೋದಿ ಹಿನ್ನಡೆಯಲ್ಲ. ಇದು ಬಿಜೆಪಿಯ ಹಿನ್ನಡೆ ಮಾತ್ರ ಎಂದರು. 

ಈ ಹಿಂದೆ ಅನೇಕ ಬಾರಿ ಪಪ್ಪು ಎಂದು ರಾಹುಲ್ ಟ್ರಾಲ್ ಆಗುತ್ತಿದ್ದು, ಬಿಜೆಪಿ ಮುಖಂಡ  ದೇವಾಜಿ ಬಾಯ್ ಸಾರ್ವಜನಿಕವಾಗಿಯೇ ಪಪ್ಪು ಎಂದು ಕರೆದು ಸಾಕಷ್ಟು ಟೀಕೆ ಎದುರಿಸಿದ್ದರು. 

ಬಿಜೆಪಿ ಮುಖಂಡರಿಂದ ಪಪ್ಪು ಎನಿಸಿಕೊಳ್ಳುತ್ತಿದ್ದ ಎ ಐ ಸಿಸಿ ಅಧ್ಯಕ್ಷ ರಾಹುಲ್  ಪ್ರಬುದ್ಧ ನಾಯಕನೆಂದು ಕರೆಸಿಕೊಳ್ಳುತ್ತಿದ್ದಾರೆ.

ಪಂಚರಾಜ್ಯ ಚುನಾವಣೆ: ಬಿಜೆಪಿ ಇನ್ನಾದರೂ ಬದಲಾಗುವುದೇ?

 

ಮತ್ತೆ ಅರಳಿತು ಕಮಲ : ಭರ್ಜರಿ ಗೆಲುವು
click me!