
ನವದೆಹಲಿ : ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಸ್ವೀಕಾರ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊಗಳಿದ್ದು, ಪಪ್ಪು ಹೋಗಿ ಪ್ರಬುದ್ಧತೆ ಇರುವ ಅಪ್ಪನಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.
ಮಧ್ಯ ಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪಪ್ಪು ಆಗಿ ಉಳಿದಿಲ್ಲ, ಕಾಂಗ್ರೆಸ್ ನಲ್ಲಿ ಅಪ್ಪ ಆಗಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಸಲಹೆಯೊಂದನ್ನು ನೀಡುವುದಾಗಿ ಹೇಳಿದ ರಾಮದಾಸ್, ಶೀಘ್ರದಲ್ಲೇ ಅವರು ಮದುವೆಯಾಗಿ ಅಪ್ಪನಾಗಲಿ ಎಂದರು.
ಅಲ್ಲದೇ ಪಂಚರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಠಾವಳೆ ಇದು ಪ್ರಧಾನಿ ನರೇಂದ್ರ ಮೋದಿ ಹಿನ್ನಡೆಯಲ್ಲ. ಇದು ಬಿಜೆಪಿಯ ಹಿನ್ನಡೆ ಮಾತ್ರ ಎಂದರು.
ಈ ಹಿಂದೆ ಅನೇಕ ಬಾರಿ ಪಪ್ಪು ಎಂದು ರಾಹುಲ್ ಟ್ರಾಲ್ ಆಗುತ್ತಿದ್ದು, ಬಿಜೆಪಿ ಮುಖಂಡ ದೇವಾಜಿ ಬಾಯ್ ಸಾರ್ವಜನಿಕವಾಗಿಯೇ ಪಪ್ಪು ಎಂದು ಕರೆದು ಸಾಕಷ್ಟು ಟೀಕೆ ಎದುರಿಸಿದ್ದರು.
ಬಿಜೆಪಿ ಮುಖಂಡರಿಂದ ಪಪ್ಪು ಎನಿಸಿಕೊಳ್ಳುತ್ತಿದ್ದ ಎ ಐ ಸಿಸಿ ಅಧ್ಯಕ್ಷ ರಾಹುಲ್ ಪ್ರಬುದ್ಧ ನಾಯಕನೆಂದು ಕರೆಸಿಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.