ಮೂಗಿನ ನಳಿಕೆಯೊಂದಿಗೆ ಸಿಎಂ ಕೆಲಸ : ಪ್ರತಿಪಕ್ಷಗಳ ಕುಹಕ

Published : Dec 17, 2018, 01:37 PM ISTUpdated : Dec 17, 2018, 01:55 PM IST
ಮೂಗಿನ ನಳಿಕೆಯೊಂದಿಗೆ ಸಿಎಂ ಕೆಲಸ : ಪ್ರತಿಪಕ್ಷಗಳ ಕುಹಕ

ಸಾರಾಂಶ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ತಮ್ಮ ಅನಾರೋಗ್ಯದ ನಡುವೆಯೂ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹಲವು ಪ್ರತಿಪಕ್ಷ ಮುಖಂಡರೂ ಕುಹಕವಾಡಿದ್ದಾರೆ. 

ಪಣಜಿ : ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ  ಮನೋಹರ್ ಪರ್ರಿಕರ್ ಭಾನುವಾರ ಸಾರ್ವಜನಿಕವಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರಿಗೆ ಮೂಗಿನಲ್ಲಿ ಹಾಕಿದ ನಳಿಕೆಯು ಇದ್ದು, ಬೇರೆಯವರ ಸಹಾಯದೊಂದಿಗೆ ನಡೆದಾಡುತ್ತಿದ್ದರು. . 

 ಮಾಂಡೋವಿ ನದಿಯ ಸೇತುವೆಯನ್ನು ಪರಿಶೀಲನೆ ನಡೆಸಿದ್ದು,  ಈ ನಿಟ್ಟಿನಲ್ಲಿ ಹಲವು ವಿಪಕ್ಷ ಮುಖಂಡರು ಕುಹಕವಾಡಿದ್ದಾರೆ. 

ಅನಾರೋಗ್ಯಕ್ಕೆ ಒಳಗಾದ ಮುಖ್ಯಮಂತ್ರಿ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಗ್ಗೆ ಟ್ವೀಟ್ ಮಾಡಿರುವ  ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ,  ಮೂಗಿನಲ್ಲಿ ನಳಿಕೆ ಹಾಕಿದ್ದು, ಇಷ್ಟು ಅನಾರೋಗ್ಯದಲ್ಲಿಯೂ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ.  ಯಾಕೆ ಇಂತಹ ಸಂದರ್ಭದಲ್ಲಿಯೂ ಕೆಲಸ ಮಾಡುವ ಒತ್ತಡ ಹಾಕಿ ತಮಾಷೆ ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು,  ಇದೇನಿದು ಅಧಿಕಾರದ ವ್ಯಾಮೋಹ, ಇಂತಹ ಸಂದರ್ಭದಲ್ಲಿಯೂ ರಾಜೀನಾಮೆ ನೀಡಲು ಬಿಡದೇ ಕೆಲಸ ಮುಂದುವರಿಸುವಂತೆ ಒತ್ತಡ ಹಾಕುತ್ತಿರುವುದು ಅಮಾನವೀಯ ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಆಸ್ಪತ್ರೆಯಿಂದ ಎದ್ದು ಬಂದು ಕಾಮಾಗಾರಿ ವೀಕ್ಷಿಸಿದ ಸಿಎಂ ಪರಿಕ್ಕರ್

63 ವರ್ಷದ ಗೋವಾ ಸಿಎಂ ಮನೋಹರ್ ಪರ್ರಿಕ್ಕರ್ ಅವರಿಗೆ ಪ್ಯಾಂಕ್ರಿಯಾಟಿಕ್ ಸಮಸ್ಯೆ ಹಿನ್ನೆಲೆ  ಸರ್ಜರಿ ನಡೆಸಲಾಗಿದ್ದು, ಅದಾದ ಬಳಿಕ ದಿಲ್ಲಿಯ ಏಮ್ಸ್ ಗೆ ದಾಖಲಿಸಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. 

ಮೊದಲ ಬಾರಿಗೆ ಹೊರಕ್ಕೆ ಬಂದ ಪರ್ರಿಕ್ಕರ್ ಅವರು ನಿರ್ಮಾಣ ಹಂತದ ಸೇತುವೆಯನ್ನು ಪರಿಶೀಲನೆ ನಡೆಸಿದ್ದರು. ಸ್ಥಳದಲ್ಲಿಯೇ ಕಾರು ನಿಲ್ಲಿಸಿ ಅಲ್ಲಿನ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಅವರೊಂದಿಗೆ ಸಹಾಯಕ್ಕೆ ಅನೇಕರು ಇದ್ದು, ಇಬ್ಬರೂ ವೈದ್ಯರು ಕೂಡ ಮುಖ್ಯಮಂತ್ರಿಯೊಂದಿಗೆ ಇದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗಲೇ ಉದ್ಯಮಿಗೆ ಹಠಾತ್ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!