ಎನ್‌ಆರ್‌ಸಿ ಸರಿಯಿಲ್ಲ: ಗೃಹ ಸಚಿವರ ಮುಂದೆ ಮಮತಾ ಬೆವರಲಿಲ್ಲ!

By Web DeskFirst Published Sep 19, 2019, 5:20 PM IST
Highlights

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಪ.ಬಂಗಾಳ ಸಿಎಂ| ಎನ್‌ಆರ್‌ಸಿ ಕುರಿತು ಅಮಿತ್ ಶಾ ಮುಂದೆ ಅಸಮಾಧಾನ ಹೊರಹಾಕಿದ ಮಮತಾ ಬ್ಯಾನರ್ಜಿ| ಎನ್‌ಆರ್‌ಸಿ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆ ಮಾಡುವಂತೆ ಮನವಿ ಮಾಡಿದ ಮಮತಾ| ಪಶ್ವಿಮ ಬಂಗಾಳದಲ್ಲಿ ಕೇಂದ್ರದ ಅನಗತ್ಯ ಹಸ್ತಕ್ಷೇಪದ ಕುರಿತು ಪ್ರಸ್ತಾಪ|

ನವದೆಹಲಿ(ಸೆ.19): ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು, ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಜನರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

Delhi: Chief Minister of West Bengal, Mamata Banerjee meets Union Home Minister Amit Shah. pic.twitter.com/Ar168beWuG

— ANI (@ANI)

ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮಮತಾ, ಎನ್‌ಆರ್‌ಸಿ ಪ್ರಕ್ರಿಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎನ್‌ಆರ್‌ಸಿ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆ ಮಾಡುವಂತೆ ಶಾ ಅವರಿಗೆ ಮನವಿ ಮಾಡಿದರು.

WB CM Mamata Banerjee: I handed over a letter to him (HM Amit Shah), told him that of the 19 Lakh people left out of NRC, many are Hindi speaking, Bengali speaking & local Assamese. Many genuine voters have been left out. This should be looked into. I submitted an official letter pic.twitter.com/PiBPbZM02M

— ANI (@ANI)

ಇದೇ ವೇಳೆ ಪಶ್ವಿಮ ಬಂಗಾಳದಲ್ಲಿ ಕೇಂದ್ರದ ಅನಗತ್ಯ ಹಸ್ತಕ್ಷೇಪದ ಕುರಿತು ಪ್ರಸ್ತಾಪಿಸಿದ ಮಮತಾ, ಈ ಅನಗತ್ಯ ರಾಜಕೀಯ ಹಸ್ತಕ್ಷೇಪಗಳು ಕೇಂದ್ರ-ರಾಜ್ಯ ಸರ್ಕಾರಗಳನ್ನು ಮತ್ತಷ್ಟು ದೂರ ತಳ್ಳುತ್ತಿವೆ ಎಂದು ಶಾ ಅವರಿಗೆ ಮನವರಿಕೆ ಮಾಡಿದರು.

West Bengal CM Mamata Banerjee on her meeting with Union Home Minister Amit Shah: He did not say anything about NRC in West Bengal. I have already clarified my stand that NRC is not needed in West Bengal. https://t.co/XyJEpyk5JY

— ANI (@ANI)

ನಿನ್ನೆ(ಸೆ.18) ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ, ರಾಜ್ಯದ ಹೆಸರು ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!