ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ, ಸೆ.19ರಿಂದ ಐಪಿಎಲ್ ಸವಾರಿ; ಜು.24ರ ಟಾಪ್ 10 ಸುದ್ದಿ!

Published : Jul 24, 2020, 04:49 PM ISTUpdated : Jul 24, 2020, 04:50 PM IST
ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ, ಸೆ.19ರಿಂದ ಐಪಿಎಲ್ ಸವಾರಿ; ಜು.24ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ಕುರಿತು ಹರಿದಾಡುತ್ತಿರುವ ಹಲವು ಊಹಾಪೋಹಗಳಿಗೆ ಸ್ವತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ಕೊಟ್ಟಿದ್ದಾರೆ.  ಕೊರೋನಾ ವೈರಸ್ ನಡುವೆ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಆತಂಕದ ನಡುವೆ ಐಪಿಎಲ್ ಆಯೋಜನೆಗೆ ಸಿದ್ಧತೆ ನಡೆಯತ್ತಿದ್ದು, ದಿನಾಂಕವೂ ಪ್ರಕಟಗೊಂಡಿದೆ. ಕೃತಿ ಕರಬಂದ ಲಿಪ್‌ಲಾಕ್, ಚೀನಾ ಮೂಲದ ಮತ್ತಷ್ಟು ಆ್ಯಪ್ ಬ್ಯಾನ್ ಸೇರಿದಂತೆ ಜುಲೈ 24ರ ಟಾಪ್ 10 ಸುದ್ದಿ ಇಲ್ಲಿವೆ

ನನಗೆ ಕೊರೋನಾ ನೆಗೆಟಿವ್‌ ಬಂದಿಲ್ಲ, ವರದಿ ಸುಳ್ಳು: ಅಮಿತಾಭ್‌ ಸ್ಪಷ್ಟನೆ...

ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂಬ ವರದಿಗಳು ಭಾರೀ ಸದ್ದು ಮಾಡುತ್ತಿದೆ. ಆದರೆ, ತಾವಿನ್ನೂ ಕೋವಿಡ್‌-19ನಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ನಡುವೆ ಸ್ವಾತಂತ್ರ್ಯದಿನ ಆಚರಣೆ ಈ ಬಾರಿ ಹೇಗಿರಲಿದೆ? ಮಾರ್ಗಸೂಚಿ...

ಸ್ವಾತಂತ್ರ್ಯ ದಿನ ಹತ್ತಿರ ಬಂದಿದ್ದು ಹೇಗೆ ಆಚರಣೆ ಮಾಡಬೇಕು ಎಂಬುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೇಗೆ ಆಚರಣೆ ಮಾಡಬೇಕು? ಯಾವೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.


ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!...

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಾರ್ಖಂಡ್‌ ಸರ್ಕಾರ, ರಾಜ್ಯದಲ್ಲಿ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

ಸಮುದಾಯಕ್ಕೆ ಹರಡುತ್ತಿದೆ ಕೊರೋನಾ; 4 ರಿಂದ 5 ವಾರ ಎಚ್ಚರ!...

ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮನಯೊಳಗೆ ಯಾರ ಸಂಪರ್ಕಕ್ಕೂ ಸಿಗದ ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಹರಡುತ್ತಿದೆ. ಈ ಮೂಲಕ ಸಮುದಾಯ ಮಟ್ಟದಲ್ಲಿ ಕೊರೋನಾ ವೈರಸ್ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. 

IPL ಆರಂಭಕ್ಕೆ ಡೇಟ್ ಫೈನಲ್: ಹೊಡಿಬಡಿಯಾಟಕ್ಕೆ ದಿನಗಣನೆ ಆರಂಭ..!...

ಈ ವರ್ಷ ಐಪಿಎಲ್ ಯಾವಾಗ ನಡೆಯುತ್ತೆ ಎಂದು ಚಾತಕ ಪಕ್ಷಿಗಳಂತೆ ಕಾದುಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಮೂಲಗಳಿಂದ ಕೊನೆಗೂ ಗುಡ್‌ ನ್ಯೂಸ್ ಸಿಕ್ಕಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ದಿನಾಂಕ ಪ್ರಕಟಗೊಂಡಿದ್ದು, ಫೈನಲ್ ಪಂದ್ಯದ ದಿನಾಂಕ ಕೂಡಾ ಅಂತಿಮಗೊಂಡಿದೆ. 

ನಾಯಿ ಜೊತೆ ಲಿಪ್‌ಲಾಕ್‌ ಮಾಡಿದ 'ಗೂಗ್ಲಿ' ನಟಿ ಕೃತಿ ಕರಬಂಧ!

ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಕೃತಿ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ತಂದುಕೊಟ್ಟ ಸಿನಿಮಾವೇ 'ಗೂಗ್ಲಿ'. ರಾಕಿಂಗ್ ಸ್ಟಾರ್‌ ಯಶ್‌ಗೆ ಜೋಡಿಯಾಗಿ ಕಾಣಿಸಿಕೊಂಡು ಈ ಸಿನಿಮಾ ಯಶಸ್ವಿಯಾಗಿ 150 ದಿನ ಪ್ರದರ್ಶನ ಕಂಡಿತ್ತು ಅಲ್ಲದೇ ಈ ಸಿನಿಮಾದ  ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಲಿಸ್ಟ್ ಗೆ ಸೇರಿವೆ. 

ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ!...

ಚೀನಾ ಗಡಿ ಖ್ಯಾತೆ ತೆಗೆದ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಮೂಲದ ಆ್ಯಪ್ ನಿಷೇಧಿಸಿ ಆರ್ಥಿಕ ಹೊಡೆತ ನೀಡಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಚೀನಾ ಮೂಲಕ ಬಹುತೇಕ ಎಲ್ಲಾ ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಚೀನಾಗೆ ಮತ್ತೊಂದು ಗುದ್ದು: ನೆರೆ ರಾಷ್ಟ್ರಗಳ ವಸ್ತು, ಸೇವೆಗೆ ಇನ್ನಷ್ಟು ನಿರ್ಬಂಧ...

ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ. ಇದರ ಹಿಂದೆ ಚೀನಾಗೆ ಬಲವಾದ ಪೆಟ್ಟು ನೀಡುವ ಉದ್ದೇಶ ಹೊಂದಲಾಗಿದೆ. 

ಬಳ್ಳಿಯೇ ನಾಗನಂತೆ ವಿಗ್ರಹ ಸುತ್ತಿತು..! ಇಲ್ಲಿವೆ ಫೋಟೋಸ್

ನಾಗಬನದ ಒಂದು ಬಳ್ಳಿ ನಾಗನ ಹೆಡೆಯಾಗಿ ನಾಗ ಕಲ್ಲಿನ ಸುತ್ತ ಬರುವಂತಹ ದೃಶ್ಯವೊಂದು ಮಂಗಳೂರಿನ ಬೆಳ್ತಂಗಡಿ ತಾಲೂಕು ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಂಜ ಬದಿಯಲ್ಲಿ ನಡೆದಿದೆ. 

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ...

2020-21ನೇ ಶೈಕ್ಷಣಿಕ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಹೆಚ್ಚುವರಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ದಿನಾಂಕಗಳನ್ನು ತಿಳಿಯಲು ಮುಂದೆ ಓದಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?
ಗ್ಯಾರಂಟಿ ಯೋಜನೆ ಜನರ ಪರ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ