ಏಕತಾ ದೀಪ ಹಚ್ಚಲು ಸಜ್ಜಾದ ಭಾರತ, ಮದ್ವೆಗೆ ರೆಡಿಯಾದ್ರಾ ರಾಧಿಕಾ; ಏ.5ರ ಟಾಪ್ 10 ಸುದ್ದಿ!

Suvarna News   | Asianet News
Published : Apr 05, 2020, 04:50 PM IST
ಏಕತಾ ದೀಪ ಹಚ್ಚಲು ಸಜ್ಜಾದ ಭಾರತ, ಮದ್ವೆಗೆ ರೆಡಿಯಾದ್ರಾ ರಾಧಿಕಾ; ಏ.5ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಏ.8ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಕೊರೋನಾ ವೈರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಜನತೆಗೆ ವಿಶೇಷ ಮನವಿ ಮಾಡಿದ್ದಾರೆ. ಇಂದು ಪ್ರಧಾನಿ ಮೋದಿ ಕರೆ ನೀಡಿರುವ ಏಕತಾ ದೀಪ ಹಚ್ಚಲು ಭಾರತೀಯರು ಸಜ್ಜಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ 2ನೇ ಮದುವೆಗೆ ರೆಡಿಯಾಗಿದ್ದಾರಾ? ಈ ಕುರಿತ ಚರ್ಚೆಗೆ ಕಾರಣವೇನು? ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಬೇಡಿಕೆ, ಲಾಕ್‌ಡೌನ್ ಉಲ್ಲಂಘಿಸಲು ಕಿಲಾಡಿಗಳಿಂದ ಹೊಸ ದಾರಿ ಸೇರಿದಂತೆ ಏಪ್ರಿಲ್ 05ರ ಟಾಪ್ 10 ಸುದ್ದಿ ಇಲ್ಲಿವೆ.

ಕೊರೋನಾ: ಏ.8 ಕ್ಕೆ ಸರ್ವಪಕ್ಷ ನಾಯಕರ ಸಭೆ ಕರೆದ ಮೋದಿ

ಕೊರೋನಾ ನಿಗ್ರಹಕ್ಕೆ ನಾನಾ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವಿಷಯ ಸಂಬಂಧ ಚರ್ಚಿಸಲು ಏ.8 ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.


ಅಸ್ಸಲಾಂ ಅಲೈಕುಂ.. ಏರ್‌ ಇಂಡಿಯಾ ಸೇವೆ ಪ್ರಶಂಸಿದ ಪಾಕಿಸ್ತಾನ!...

ಭಾರತದ ಬದ್ಧವೈರಿ ಪಾಕಿಸ್ತಾನ, ಏರ್‌ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಅಸ್ಸಲಾಂ ಅಲೈಕುಂ ಎಂದು ಸ್ವಾಗತಿಸಿ, ಅವರ ಸೇವೆಯನ್ನು ಪ್ರಶಂಸಿಸಿದ ಘಟನೆ ನಡೆದಿದೆ.


ಹಚ್ಚೋಣ ಏಕತಾ ದೀಪ: ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ!...

 ಕೊರೋನಾ ವೈರಸ್‌ ಎಂಬ ಗಾಢಾಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಭಾನುವಾರ ಭರ್ಜರಿ ಯಶಸ್ಸು ಲಭಿಸುವ ಎಲ್ಲ ಸಾಧ್ಯತೆ ಇದೆ.

ಹೆಚ್ಚುತ್ತಲೇ ಇದೆ ಕೊರೋನಾ: ಜನತೆಗೆ ಯಡಿಯೂರಪ್ಪ ವಿಶೇಷ ಮನವಿ, ದಯವಿಟ್ಟು ಕೇಳಿ

ಲಾಕ್‌ಡೌನ್ ಅವಧಿ ಮುಕ್ತಾಯದ ದಿನ ಹತ್ತಿರವಾಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದ ಆತಂಕಗೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಾರ್ವಜನಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಕೊರೋನಾ ಬಗ್ಗೆ ಅರಿವು: ಆಶಾ ಕಾರ್ಯಕರ್ತೆಯರಿಗೆ ಗ್ರಾಮಸ್ಥರಿಂದ ಪುಷ್ಪವೃಷ್ಟಿ

ಒಂದ್ಕಡೆ ಕೊರೋನಾ ಸೋಂಕಿತರ ಪತ್ತೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದರೆ ಮತ್ತೊಂದು ಕಡೆ ಗ್ರಾಮಕ್ಕೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದ ಘಟನೆ ಬೆಳಗೇರಾ ಗ್ರಾಮದಲ್ಲಿ ನಡೆದಿದೆ. 

ಪ್ರಧಾನಿ ಕೇರ್ಸ್‌ಗೆ ಮತ್ತೆ 75 ಲಕ್ಷ ರುಪಾಯಿ ನೀಡಿದ ಹಾಕಿ ಇಂಡಿಯಾ 

ಕೊರೋನಾ ಸಂಕಷ್ಟವನ್ನು ಎದುರಿಸುತ್ತಿರುವ ಭಾರತಕ್ಕೆ ಈಗಾಗಲೇ 25 ಲಕ್ಷ ರುಪಾಯಿಗಳನ್ನು ಪ್ರಧಾನ ಮಂತ್ರಿ ಕೇರ್ಸ್‌ಗೆ ನೀಡಿದ್ದ ಹಾಕಿ ಇಂಡಿಯಾ ಇದೀಗ ಮತ್ತೆ 75 ಲಕ್ಷಗಳನ್ನು ದೇಣಿಗೆಯಾಗಿ ನೀಡಿದೆ. ಈ ಮೂಲಕ ಒಂದು ಕೋಟಿ ರುಪಾಯಿಗಳನ್ನು ಹಾಕಿ ಇಂಡಿಯಾ ಸರ್ಕಾರಕ್ಕೆ ದೇಣಿಗೆ ನೀಡಿದಂತಾಗಿದೆ. 

ರಾಧಿಕಾ ಕುಮಾರಸ್ವಾಮಿ ಮತ್ತೊಂದು ಮದುವೆ ಆಗ್ತಾ ಇದಾರಾ?

ರಾಧಿಕಾ ಕುಮಾರಸ್ವಾಮಿ ಮತ್ತೊಂದು ಮದುವೆ ಆಗ್ತಾ ಇದ್ದಾರಾ? ಎಲ್ಲೆಲ್ಲೂ ರಾಧಿಕಾ ಮದುವೆಗೆ ತಯಾರಾಗಿರೋ ಫೋಟೋ, ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಮದುವೆ ಆಗುತ್ತಿರೋದು ನಿಜನಾ? ಯಾರು ಆ ಹುಡುಗ? ಏನಿದು ಗಾಂಧಿನಗರದ ಸೆನ್ಸೇಷನಲ್ ಸುದ್ದಿ? ಸ್ಟೋರಿಯಲ್ಲಿ

ಮೊಟ್ಟೆ, ಮ್ಯಾಗಿ ಬೇಕೆಂದು ಪ್ರಧಾನಿ ಮೋದಿಗೆ ವಿದ್ಯಾರ್ಥಿನಿ ಬೇಡಿಕೆ!

 ಕೊರೋನಾ ಲಾಕ್‍ಡೌನ್ ಸಂಕಟದ ಸಂದರ್ಭ ಮಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿರುವ ವಿದ್ಯಮಾನ ನಡೆದಿದೆ.

ಭಾರತ ಲಾಕ್‌ಡೌನ್; ಕಾರಿಗೆ MLA ಸ್ಟಿಕ್ಕರ್ ಅಂಟಿಸಿ ಯುವಕನ ತಿರುಗಾಟ!.

ಕೊರೋನಾ ವೈರಸ್‌ ಕಾರಣ ಭಾರತ ಲಾಕ್‌ಡೌನ್ ಆಗಿದೆ. ಜನರಲ್ಲಿ ಮನೆಯಲ್ಲೇ ಇರಲು ಮನವಿ ಮಾಡಲಾಗಿದೆ. ಅನಗತ್ಯವಾಗಿ ತಿರುಗಾಡಬೇಡಿ ಎಂದು ಅದೆಷ್ಟೇ ಮನವಿ ಮಾಡಿದರೂ ಜನರೂ ಕೇಳುತ್ತಿಲ್ಲ. ಮನೆಯಿಂದ ಹೊರಬಂದು ತಿರುಗಾಡುತಲೇ ಇದ್ದಾರೆ. ಪೊಲೀಸರು ಲಾಠಿ ಚಾರ್ಚ್, ಫೈನ್ ಎಲ್ಲಾ ಪ್ರಯೋಗ ಮಾಡಿದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದೀಗ ಕೆಲವರು ಹೊಸ ಉಪಾಯ ಮಾಡಿದ್ದಾರೆ. 

ಶಿಷ್ಯ ಪಾಕಿಸ್ತಾನಕ್ಕೆ ಗುರು ಚೀನಾ ಅಂಡರ್‌ವೇರ್ ಉಡುಗೊರೆ; ಇಂಟರ್‌ನ್ಯಾಶನಲ್ ಕಾಮಿಡಿ!...

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲೀಗೆ ಗುರಿಯಾದ  ಚೀನಾ-ಪಾಕಿಸ್ತಾನ/ ಅಂಡರ್ ವೇರ್ ನಿಂದ ತಯಾರಿಸಿದ ಮಾಸ್ಕ್ ಕಳಿಸಿಕೊಟ್ಟ ಚೀನಾ/ ಸೋಶೀಯಲ್ ಮೀಡಿಯಾದಲ್ಲಿ ಎರಡು ದೇಶಗಳ ಮಾನ ಹರಾಜು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!