ಪತ್ನಿಗೆ I LOVE YOU ಹೇಳಲು ಈ ನಟನಿಗೆ ಸಹಾಯ ಮಾಡ್ಬೇಕಂತೆ! ಚಾಲೆಂಜ್​ ತಗೊಳಲು ರೆಡಿನಾ?

Published : Jul 31, 2025, 03:42 PM ISTUpdated : Jul 31, 2025, 03:45 PM IST
Drushti Bottu

ಸಾರಾಂಶ

ಸಿಟ್ಟುಗೊಂಡಿರೋ ಪತ್ನಿಯ ಸಿಟ್ಟು ಇಳಿಸೋದು ಹೇಗೆ? ಈ ನಟನಿಗೆ ನೀವೇನಾದ್ರೂ ಐಡಿಯಾ ಕೊಡಲು ರೆಡಿನಾ? ಹಾಗಿದ್ರೆ ಈ ಚಾಲೆಂಜ್​ ತೆಗೆದುಕೊಳ್ಳಿ... 

ದೃಷ್ಟಿ ಎಂದರೆ ಸಾಕು... ಸೀರಿಯಲ್​ ಪ್ರಿಯರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ. ಒಮ್ಮೊಮ್ಮೆ ತೀರಾ ಕಪ್ಪು ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುವ ನಾಯಕಿ ಈಕೆ. ಸದ್ಯ ತನ್ನ ಗಂಡನ ಅಕ್ಕನಿಂದ ಕಿರುಕುಳ ಅನುಭವಿಸುತ್ತಾ, ಅಕ್ಕನ ಮಾತನ್ನೇ ಕೇಳಿಕೊಂಡಿರೋ ತಮ್ಮ ಅರ್ಥಾತ್​ ಪತಿಯಿಂದಲೂ ನಿಂದನೆಗೆ ಒಳಗಾಗ್ತಿದ್ದವಳು ದೃಷ್ಟಿ. ಆದರೆ, ಅದೇ ದೃಷ್ಟಿ ಮತ್ತು ದತ್ತಾ ನಡುವೆ ಈಗ ಪ್ರೀತಿ ಹುಟ್ಟುತ್ತಿದೆ. ದತ್ತಾ ಪ್ರೀತಿಸಿದ್ದ ದೃಷ್ಟಿಯ ಅಕ್ಕ ಓಡಿಹೋಗಿದ್ದಳು. ಅವಳೀಗ ಸಿಕ್ಕಿದ್ದಾಳೆ. ಆದರೆ ಅವಳೇ ದತ್ತನ ಲವರ್​ ಎನ್ನುವ ವಿಷಯ ದೃಷ್ಟಿಗೆ ಗೊತ್ತಿರಲಿಲ್ಲ. ಅದು ಕೂಡ ಈಗ ಗೊತ್ತಾಗಿದೆ.

ಇನ್ನು ದತ್ತಾ ಕಣ್ಣಿಗೆ ದೃಷ್ಟಿ ಅಕ್ಕ ಬಿದ್ದಿರಲಿಲ್ಲದ ಹಿನ್ನೆಲೆಯಲ್ಲಿ ಶರಾವತಿ ಅಸ್ತ್ರವಾಗಿಸಿಕೊಂಡು ಏನೋ ದೊಡ್ಡ ಪ್ಲ್ಯಾನ್​ ಮಾಡಿ ದತ್ತಾ ಮತ್ತು ದೃಷ್ಟಿಯನ್ನು ಹನಿಮೂನ್​ಗೆ ಕಳಿಸಿದ್ದಳು. ತಾನು ಎಷ್ಟೇ ಕಿರುಕುಳ ಕೊಟ್ಟರೂ ದೃಷ್ಟಿ ಪ್ರೀತಿಸುವುದನ್ನು ನೋಡಿ ದತ್ತಾಗೆ ದೃಷ್ಟಿಯ ಮೇಲೆ ಪ್ರೀತಿ ಹುಟ್ಟುತ್ತಿದೆ. ಆದರೆ ಆ ಪ್ರೀತಿಯನ್ನು ಹೇಳಿಕೊಳ್ಳಲು ಪರದಾಡುತ್ತಿದ್ದಾನೆ ದತ್ತಾ. ಎಷ್ಟೋ ವೇಳೆ ಹಲವರಿಗೆ ಹೀಗೆಯೇ ಆಗುವುದು ಉಂಟು. ಮೊದಲ ಬಾರಿ ಲವ್​ ಶುರುವಾದಾಗ, ಅದನ್ನು ಹೇಳಿಕೊಳ್ಳುವುದು ಹೇಗೆ, ಆರಂಭಿಸುವುದು ಹೇಗೆ ಎಂದು ಗೊತ್ತಾಗದೇ ಪೇಚಾಡುವುದು ಇದೆ. ಆದರೆ ಸೀರಿಯಲ್​ಗಳಲ್ಲಿ ಕೆಲ ವರ್ಷಗಳಿಂದ ವಿಚಿತ್ರ ಟ್ರೆಂಡ್​ ಶುರುವಾಗಿದೆ. ಅದೇನೆಂದರೆ ಮದ್ವೆಯಾದರೂ ಪತಿ-ಪತ್ನಿ ದೂರ ಇರುವುದು. ಬಹುತೇಕ ಸೀರಿಯಲ್​ಗಳಲ್ಲಿ ಇದೇ ಹಣೆಬರಹ. ದೃಷ್ಟಿಬೊಟ್ಟುವಿನಲ್ಲಿಯೂ ಇದೇ ಕಥೆ. ಆದರೆ ಇದೀಗ ಲವರ್​ಗೆ ಅಲ್ಲ, ಬದಲಿಗೆ ಪತ್ನಿಗೆ ಐ ಲವ್​ ಯು ಹೇಳಲು ಆಗದೇ ಒದ್ದಾಡ್ತಿದ್ದಾನೆ ದತ್ತಾ.

ದೃಷ್ಟಿಗೆ ತನ್ನ ಪ್ರೀತಿಯನ್ನು ಹೇಗೆ ನಿವೇದನೆ ಮಾಡಿಕೊಳ್ಳಬೇಕು ಎಂದು ಎಲ್ಲರ ಬಳಿ ಟಿಪ್ಸ್​ ಕೇಳ್ತಿದ್ದಾನೆ. ಇದನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದ್ದು, ನೀವೇನಾದ್ರೂ ಟ್ರೈ ಮಾಡ್ತೀರಾ ಎಂದು ಕೇಳಿದೆ. ಸಿಟ್ಟು ಮಾಡಿಕೊಂಡೋ ಗರ್ಲ್​ಫ್ರೆಂಡ್​ ಸಿಟ್ಟು ಇಳಿಸೋದು ಹೇಗೆ ಟಿಪ್ಸ್ ಕೊಡಿ ಎಂದು ಕೇಳಲಾಗಿದೆ. ಆದರೆ ಇಲ್ಲಿ ಗರ್ಲ್​ಫ್ರೆಂಡ್ ಅಲ್ಲ, ಬದಲಿಗೆ ಪತ್ನಿ ಅಷ್ಟೇ. ನಿಮ್ಮ ಸಜೆಷನ್​ ಇದ್ರೆ ಕೊಡ್ಬೋದು! ಅಂದಹಾಗೆ ಇದು ಸೀರಿಯಲ್​ ಅಷ್ಟೇ. 

ಅಷ್ಟಕ್ಕೂ ದತ್ತ ಪಾತ್ರಧಾರಿ ನಟ ವಿಜಯ್ ಸೂರ್ಯ ಅವರಿಗೆ ಇದಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌