ಮುಸ್ಲಿಂ ಪವಿತ್ರ ಕ್ಷೇತ್ರ ಹಾಜಿ ಅಲಿ ದರ್ಗಾ ನವೀಕರಣಕ್ಕೆ ಭರ್ಜರಿ ಹಣ ನೀಡಿದ ಅಕ್ಷಯ್‌ ಕುಮಾರ್‌!

By Santosh NaikFirst Published Aug 8, 2024, 6:10 PM IST
Highlights

ರಾಮಮಂದಿರದ ಬಳಿಕ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಂಬೈನ ಪವಿತ್ರ ಮುಸ್ಲಿಂ ಕ್ಷೇತ್ರ ಹಾಜಿ ಅಲಿ ದರ್ಗಾದ ನವೀಕರಣಕ್ಕೆ ದೊಡ್ಡ ಪ್ರಮಾಣದ ದಾನ ಮಾಡಿದ್ದಾರೆ.
 

ಮುಂಬೈ (ಆ.8): ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಮುಂಬೈನ ಹಾಜಿ ಅಲಿ ದರ್ಗಾದಲ್ಲಿ ಚಾದರ್ ಅರ್ಪಿಸಿದರು ಮತ್ತು ದರ್ಗಾದ ನವೀಕರಣಕ್ಕಾಗಿ 1.21 ಕೋಟಿ ರೂಪಾಯಿ ನೀಡಿದ್ದಾರೆ ಎಂದು ವರದಿಯಾಗಿದೆ. ನಿರ್ದೇಶಕ ಮುದಸ್ಸರ್ ಅಜೀಜ್ ಅವರೊಂದಿಗೆ ಗುರುವಾರ ಬೆಳಗ್ಗೆ ಮುಂಬೈನ ಹಾಜಿ ಅಲಿ ದರ್ಗಾಕ್ಕೆ ಅಕ್ಷಯ್ ಕುಮಾರ್‌ ಭೇಟಿ ನೀಡಿದರು. ಈ ಹಿಂದೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 3 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಹಾಜಿ ಅಲಿ ದರ್ಗಾ ಟ್ರಸ್ಟ್ ಮತ್ತು ಮಾಹಿಮ್ ದರ್ಗಾ ಟ್ರಸ್ಟ್‌ನ ಟ್ರಸ್ಟಿ ಸುಹೇಲ್ ಖಂಡ್ವಾನಿ ಅವರು ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅಕ್ಷಯ್ ಕುಮಾರ್ ದರ್ಗಾಕ್ಕೆ ಭೇಟಿ ನೀಡಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ದೇಣಿಗೆಗಾಗಿ ಅವರು ಅಕ್ಷಯ್‌ ಕುಮಾರ್‌ಗೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ದರ್ಗಾದ ಟ್ರಸ್ಟಿಗಳು ಅಕ್ಷಯ್ ಕುಮಾರ್ ಅವರ ತಂದೆ ತಾಯಿ ಅರುಣಾ ಭಾಟಿಯಾ ಮತ್ತು ತಂದೆ ಹರಿಓಂ ಭಾಟಿಯಾ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಹಾಜಿ ಅಲಿ ದರ್ಗಾಕ್ಕೆ ಭೇಟಿ ನೀಡಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದಕ್ಕೂ ಮುನ್ನ ಮುಂಬೈನಲ್ಲಿ ಅಕ್ಷಯ್ ನಿರ್ಗತಿಕರಿಗೆ ಆಹಾರ ಒದಗಿಸಿದ್ದರು. ಮುಂಬೈನಲ್ಲಿರುವ ತಮ್ಮ ಮನೆಯ ಹೊರಗಿನ ಜನರಿಗೆ ಅವರು ಅನ್ನದಾನದ ಕಾರ್ಯವನ್ನೂ ಮಾಡಿದ್ದರು.

Latest Videos

ಗೌರಿ ಖಾನ್‌- ಟ್ವಿಂಕಲ್ ಖನ್ನಾವರೆಗೆ ಬಾಲಿವುಡ್ ಸ್ಟಾರ್ ಪತ್ನಿಯರ ಕರಾಳ ವಿವಾದಗಳು

ಅಕ್ಷಯ್ ಕುಮಾರ್ ಅವರ ಸಿನಿಮಾದ ಬಗ್ಗೆ ಮಾತನಾಡುವುದಾದರೆ, ಈ ವರ್ಷದ ಅವರ ಮೂರನೇ ಚಿತ್ರ 'ಖೇಲ್ ಖೇಲ್ ಮೇ' ಈ ವರ್ಷ ಬಿಡುಗಡೆಯಾಗಲಿದೆ. ಅವರ ಹಿಂದಿನ ಚಿತ್ರಗಳಾದ 'ಬಡೆ ಮಿಯಾನ್ ಚೋಟೆ ಮಿಯಾನ್' ಮತ್ತು 'ಸರ್ಫಿರಾ' ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗುತ್ತಿರುವ 'ಖೇಲ್ ಖೇಲ್ ಮೇ' ಚಿತ್ರದಲ್ಲಿ ವಾಣಿ ಕಪೂರ್, ತಾಪ್ಸಿ ಪನ್ನು, ಆಮಿ ವಿರ್ಕ್ ಮತ್ತು ಫರ್ದೀನ್ ಖಾನ್ ನಟಿಸಿದ್ದಾರೆ. 'ಖೇಲ್ ಖೇಲ್ ಮೇ' ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ, ಅದೇ ದಿನ ಶ್ರದ್ಧಾ ಕಪೂರ್-ರಾಜ್‌ಕುಮಾರ್ ರಾವ್ ಅವರ 'ಸ್ತ್ರೀ 2' ಮತ್ತು ಜಾನ್ ಅಬ್ರಹಾಂ-ಶಾರ್ವರಿ ವಾಘ್ ಅವರ 'ವೇದ' ಕೂಡ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

 

ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಸೋತಾಗ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್‌!

click me!