Virata Parvam Movie Review; ಕಾಡಿನಲ್ಲಿ ಸಾಯಿ ಪಲ್ಲವಿಯ ಹೊಸ ಅವತಾರ

By Suvarna NewsFirst Published Jun 17, 2022, 7:37 PM IST
Highlights

90 ರ ದಶಕದಲ್ಲಿ ತೆಲಂಗಾಣದಲ್ಲಿ ನಡೆದ “ವಿರಾಟ ಪರ್ವಂ” ಕಥೆಯ ಆಧಾರಿತ ಸ್ಟೋರಿಯನ್ನು  ವೇಣು ಉಡುಗುಲ ರಚಿಸಿದ್ದಾರೆ.  ನಕ್ಸಲರು ಮತ್ತು ಆಂಧ್ರಪ್ರದೇಶದ ಪೊಲೀಸರೊಂದಿಗಾದ ಗಲಭೆಯ ಜೊತೆ ಪ್ರೀತಿಯ ಕನಸು ಕಾಣುವ ಮುಗ್ದ ಹುಡುಗಿಯ ಕಥೆ.

“ನೀಡಿ ನಾಡಿ ಓಕೆ” ಕಥೆಯು ಮೆಚ್ಚುಗೆ ಗಳಿಸಿದ ನಂತರ ವೇಣು ಉಡುಗುಲ ಅವರು  ಒಂದು ಕ್ರಾಂತಿಯ ನಡುವೆ ಪ್ರೇಮ್ ಕಹಾನಿಯನ್ನು ನಿರ್ದೇಶಿಸುತ್ತಾರೆ. 90 ರ ದಶಕದಲ್ಲಿ ತೆಲಂಗಾಣದಲ್ಲಿ ನಡೆದ “ವಿರಾಟ ಪರ್ವಂ” ಕಥೆಯ ಆಧಾರಿತ ಸ್ಟೋರಿ ರಚಿಸಿದ್ದಾರೆ. ಈ ಕಥೆಯಲ್ಲಿ ನಕ್ಸಲರು ಮತ್ತು ಆಂಧ್ರಪ್ರದೇಶದ ಪೊಲೀಸರೊಂದಿಗಾದ ಗಲಭೆಯ ಜೊತೆ ಪ್ರೀತಿಯ ಕನಸು ಕಾಣುವ ಮುಗ್ದ ಹುಡುಗಿಯ ಕಥೆಯನ್ನು ಹೇಳುತ್ತಾರೆ.

ಒಂದು ದಿನ ಹುಣ್ಣಿಮೆ ರಾತ್ರಿ ಯುದ್ದದ ಸಮಯದಲ್ಲಿ ವನ್ನೆಲಾ (ಸಾಯಿ ಪಲ್ಲವಿ) ಜನಿಸುತ್ತಾಳೆ. ಬಾಲ್ಯದಿಂದಲು ಬಹಳ ಹಠಮಾರಿ ಸಾಧಿಸುವೆನೆಂಬ ಬಯಕೆ ಅವಳದು ಮತ್ತು ಅಷ್ಟೆ ಮುಗ್ದ ಮನಸಿನ ಬಾಲಕಿ. ಅವಳು ವಿದ್ಯಾವಂತಳು ಯಾವಾಗಲೂ ಸ್ವತಂತ್ರವಾಗಿ ಬದುಕುವ ನೆಲೆಯಲ್ಲೇ ಬೆಳೆದವಳು. ಆಕೆಯ ತಂದೆ ಒರ್ವ “ಒಗ್ಗು ಕಥಾಲು” ಕಲಾವಿದರಾಗಿದ್ದರು. ತಂದೆ ಮನೆಗೆ ತಂದ ಪುಸ್ತಕಗಳನ್ನು ಓದುತ್ತಾ ವನ್ನೆಲಾ ನಲಿಯುತ್ತಿದ್ದಳು.

ಹೀಗೆ ಮಾವೋವಾದಿ ನಾಯಕ ಅರಣ್ಯ ಅಕಾ ರಾವಣ್ಣ (ರಾಣಾ ದಗ್ಗುಬಾಟಿ) ಬರೆದ ಕವನಗಳನ್ನು ಓದುವ ಅವಕಾಶವನ್ನು ಪಡೆದಳು. ಆಟಕ್ಕಿಂತಲು ಪಾಠಕ್ಕೆ ಜಾಸ್ತಿ ಗಮನ ಕೊಡುತ್ತಿದ್ದಳು. ಪುಸ್ತಕದಿಂದ ಪ್ರೇರಿತಳಾಗಿ ಜಗತ್ತಿನಲ್ಲಿ ಪ್ರೀತಿಗಿಂತ ದೊಡ್ಡ ಶಕ್ತಿ ಇಲ್ಲ ಎಂದು ಅವಳು ತಿಳಿದಾಗ, ಅವಳು ತನ್ನ ಉಳಿದ ಜೀವನವನ್ನು ಅಕಾ ರಾವಣ್ಣನೊಂದಿಗೆ ಕಳೆಯುವ ಭರವಸೆಯಲ್ಲಿ ಅವನನ್ನು ಭೇಟಿಯಾಗಲು ಪ್ರಯಾಣ ಬೆಳೆಸುತ್ತಾಳೆ. 

THURTHU NIRGAMANA ಚಿತ್ರದ ಪಾತ್ರಕ್ಕೆ ಬೆಚ್ಚಿಬಿದ್ದ ಸುಧಾರಾಣಿ!

ವೇಣು ಉಡುಗುಲ ಅವರು ಈ ಸಿನೆಮಾದಲ್ಲಿ ಪ್ರೀತಿ ಒಂದು ಸಮಂಜಸವಲ್ಲದ ಭಾವನೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ವೆನ್ನೆಲಾ ಅವರನ್ನು ಹಲವಾರು ಬಾರಿ ಕೇಳಲಾಗುತ್ತದೆ, ರಾವಣ್ಣನ ಕಾವ್ಯವು  ಅವಳನ್ನು ಆತನೆಡೆಗೆ ಆಕರ್ಷಿಸುವಂತೆ ಮಾಡಿತ್ತು. ಇದಕ್ಕೆ ಅವಳಲ್ಲಿ ಉತ್ತರವಿಲ್ಲ, ಅದನ್ನು ಮೀರಿದ ಒಂದು ಶುದ್ಧ  ಬಂಧನವಾಗಿತ್ತು.

ಅವಳ ಪ್ರಯಾಣಕ್ಕೂ ಅದೇ ಅನ್ವಯಿಸುತ್ತದೆ. ಮಹಿಳೆಯೊಬ್ಬಳು ನದಿ ಮತ್ತು ಕಾಡುಗಳನ್ನು ದಾಟಿಕೊಂಡು ಮಳೆ ಬಿಸಿಲು ಬಂದರು ಪುರುಷನೊಂದಿಗೆ ಬರುತ್ತಾಳೆ ಹೇಗೆ ಇಷ್ಟು ಶಕ್ತಿಯನ್ನು ಕಂಡುಕೊಳ್ಳುತ್ತಾಳೆಂದು   ನಿಜವಾಗಿಯೂ ಗೊತ್ತಿಲ್ಲ.  ಸಾಯಿ ಪಲ್ಲವಿ ಮತ್ತು ಸಾಯಿ ಚಂದ್ ನಡುವಿನ ನಾಕ್ಷತ್ರಿಕ ದೃಶ್ಯವು ಅವಳ ಪ್ರೀತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವೀಕ್ಷಕರಿಗೆ ಸಹಾಯ ಮಾಡುತ್ತದೆ.

ರಾವಣ್ಣ ಮತ್ತು ಅವನ ಒಡನಾಡಿಗಳ ವ್ಯಾಮೋಹ ಮತ್ತು ಪ್ರಾಯೋಗಿಕತೆಯೊಂದಿಗೆ ವೆನ್ನೆಲನ ಮುಗ್ದತೆಯನ್ನು ಚಿತ್ರವು ಮುಂದುವರೆದಂತೆ ಉತ್ತಮ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ನಾಯಕ ಮತ್ತು ನಾಯಕಿಯ ನಡುವೆ ಕನಸು ಕಾಣುವ ಸನ್ನಿವೇಶಗಳನ್ನು ಪಡೆಯುವ ಪ್ರೇಮಕಥೆ ಇದು ಅಲ್ಲ. ಬದಲಾಗಿ ನೀವು ಪಡೆಯುವುದು ಬಹಳಷ್ಟು ಕಠಿಣತೆ ಮತ್ತು ಹಾತೊರೆಯುವಿಕೆ ಕಾಣಬಹುದು. 

ಕಮ್ಯುನಿಸ್ಟ್ ಸಿದ್ಧಾಂತವು ಯಾವಾಗಲೂ ಅವರನ್ನು ಒಟ್ಟಿಗೆ ಜೋಡಿಸುವ ಸಂಗತಿಯಾಗಿಲ್ಲದಿದ್ದರೂ, ಅವರನ್ನು  ಗೌರವಿಸುವಂತೆ ಮಾಡುತ್ತದೆ. ಅವಳು ತನ್ನ ಪ್ರೀತಿಗೆ ಗೌರವವನ್ನು ಬಯಸುತ್ತಾಳೆ ಆದರೆ ಅವನು ತನ್ನ ಕ್ರಾಂತಿ ಮತ್ತು ಜನರಿಗೆ ಗೌರವವನ್ನು ಬಯಸುತ್ತಾನೆ.

ವಿರಾಟ ಪರ್ವಂ ಕಥೆಯಲ್ಲಿ ಸಾಯಿ ಪಲ್ಲವಿಯ ಹೆಸರು ಸರಳಾ ಎಂದು ಆಧರಿಸಿ ಅವರ ಪಾತ್ರದ ಮೇಲೆ ಬಹಳಷ್ಟು ಹಣವನ್ನು ಹೂಡಿದೆ ಮತ್ತು ನಟಿ ಅದ್ಭುತವಾದ ಅಭಿನಯವನ್ನು ಹೊರತೆಗೆಯುತ್ತಾರೆ ಎಂಬ ಭಾವನೆಗಳು ಎಲ್ಲರಲ್ಲೂ ಇದೆ. ನೀವು ನಟಿಯನ್ನು ಬೇರೆ ಚಲನಚಿತ್ರಗಳಲ್ಲಿ ನೋಡಿರಬಹುದು, ಆದರೆ ಈ ಚಿತ್ರ ನಿಮ್ಮನ್ನು ಸೆಳೆಯುತ್ತದೆ ಮತ್ತು ನಿಮ್ಮ ಕಣ್ಣಂಚಲ್ಲಿ ನೀರು ತರಿಸುತ್ತದೆ. 

Fathers Day 2022- ಬಾಲಿವುಡ್‌ ನಟರ ಮತ್ತು ಅವರ ಮಕ್ಕಳ ನಡುವಿನ ಬಾಂಡಿಂಗ್‌ ಹೇಗಿದೆ

ಆಕೆಯ ವೆನ್ನೆಲಾ ಪಾತ್ರವು ಕೂಡ ನಿಮ್ಮನ್ನು ಅವಳೊಂದಿಗೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ರಾವಣ್ಣನು ಯಾವಾಗಲೂ ಹೋರಾಟದಲ್ಲಿ ಚತುರನಾಗಿರುತ್ತಾನೆ. ಪಾತ್ರವು ಅವನನ್ನು ಮುಗ್ದವಾಗಿರಲು ಒತ್ತಾಯಿಸುತ್ತದೆ ಆದರೆ ಅವನು ತನ್ನ ಕಣ್ಣುಗಳ ಸನ್ನೆಯಲ್ಲಿ ಮಾತನಾಡುತ್ತಾನೆ. ನಂದಿತಾ ದಾಸ್, ಜರೀನಾ ವಹಾಬ್, ಪ್ರಿಯಾಮಣಿ, ನವೀನ್ ಚಂದ್ರ, ರಾಹುಲ್ ರಾಮಕೃಷ್ಣ ತಮ್ಮ ಪಾತ್ರಗಳಲ್ಲಿ ಮಿಂಚಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಈ ಚಿತ್ರವು ಸಾಯಿ ಪಲ್ಲವಿ ಮತ್ತು ಉಳಿದ ಪಾತ್ರವರ್ಗಕ್ಕೆ ಸೇರಿದ್ದು, ಮುಖ್ಯವಾಗಿ ವೇಣು ಉಡುಗುಲ ಅವರ ಬರವಣಿಗೆ ಮತ್ತು ನಿರ್ದೇಶನಕ್ಕೆ ಸೇರಿದೆ.  ಎಲ್ಲಾ ಪೋಲೀಸರು ಬಹುಪಾಲು ಒಂದೇ ಸ್ವರದವರಾಗಿರುತ್ತಾರೆ ಎಂಬ ವಾದವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈ ಅಸಾಂಪ್ರದಾಯಿಕ ಪ್ರೇಮಕಥೆಯನ್ನು ಅವರು ತೆರೆದುಕೊಳ್ಳಲು ರೀತಿಯೂ ಅದ್ಭುತವಾಗಿದೆ ಮತ್ತು ಕೆಲವು ಪಂಚ್‌ ಡೈಲಾಗ್‌ಗಳು ಹೊಂದಿದ್ದು ಇನ್ನು ಕೆಲವು  ಡೈಲಾಗ್‌ಗಳು ಭಾವನೆಗಳನ್ನು ಮೀರಿ ಮನೆಮಾತಾಗಿವೆ. ಇನ್ನು ಸುರೇಶ್ ಬೊಬ್ಬಿಲಿ ಅವರ OST ಮತ್ತು ಹಿನ್ನೆಲೆ ಸಂಗೀತ ಕೇಳುಗರ ಮನ ಮಿಡಿಯುತ್ತದೆ. ಡ್ಯಾನಿ ಸ್ಯಾಂಚೆಜ್-ಲೋಪೆಜ್ ಮತ್ತು ದಿವಾಕರ್ ಮಣಿ ಅವರ ಕ್ಯಾಮರಾ ವರ್ಕ್ ಕಣ್ಣಿಗೆ ರೋಮಾಂಚನ ನೀಡುತ್ತದೆ. 

ರಾವಣ್ಣನ ದಳದ ಜಗತ್ತಿನಲ್ಲಿ ನಿಮ್ಮನ್ನು ಮುಳುಗಿಸಲು ಮತ್ತು ಚಿತ್ರ ಮುಗಿದ ನಂತರ ನಿಮ್ಮೊಂದಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ವಿರಾಟ ಪರ್ವಂ ಸಾಂಪ್ರದಾಯಿಕ ಅರ್ಥದಲ್ಲಿ ಮನರಂಜನೆ ನೀಡುವ ರೀತಿಯ ಚಿತ್ರವಂತು ಖಂಡಿತ ಅಲ್ಲಾ, ಆದರೆ ಇದು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುವ ರೀತಿಯ ಚಲನಚಿತ್ರವಾಗಿದೆ. ನೋಡುಗರ ಮೆಚ್ಚುಗೆಗೆ ಪಾತ್ರವಾಗಲಿದೆ.

click me!