
ಆರ್ ಕೇಶವಮೂರ್ತಿ
ನಾಲ್ಕು ಮಂದಿ ವಿದ್ಯಾರ್ಥಿಗಳ ಒಂದು ಗುಂಪು ಅದು. ಅವರು ಆಡಿದ್ದೇ ಆಟ, ಹೇಳಿದ್ದೇ ಮಾತು. ರಾಜಕಾರಣಿ, ಪೊಲೀಸ್, ಪತ್ರಿಕಾ ಸಂಪಾದಕ, ಸಿನಿಮಾ ನಟಿ ಎನಿಸಿಕೊಂಡವರು ಈ ಮೂವರ ವಿದ್ಯಾರ್ಥಿಗಳ ಹೆತ್ತವರು. ತಮ್ಮ ಹೆತ್ತವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆಂಬ ಅಹಂನಿಂದ ಹಾದಿ ತಪ್ಪುವ ಇವರಿಗೆ ಒಮ್ಮೆ ಎಚ್ಚರಿಕೆ ಬೆಲ್ಲು ಹೊಡೆಯುವ ಸಮಯ ಬಂದಾಗ ಏನಾಗುತ್ತದೆ ಎಂಬುದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಅಸಲಿಯತ್ತು.
ಆ ಎಚ್ಚರಿಕೆ ಬೆಲ್ಲು ಹೊಡೆಯುವುದು ಯಾರು, ಯಾಕಾಗಿ, ಇವರು ಹಾದಿ ತಪ್ಪುವುದಕ್ಕೆ ಹೆತ್ತವರೂ ಹೇಗೆ ಕಾರಣರಾಗುತ್ತಾರೆ, ಇಷ್ಟಕ್ಕೂ ಈ ವಿದ್ಯಾರ್ಥಿಗಳ ಗುಂಪು ಮಾಡಿರುವ ಅನಾಹುತ ಏನು ಎಂಬುದು ನಿರ್ದೇಶಕ ಅರುಣ್ ಅಮುಕ್ತ ಅವರು ಮಕ್ಕಳ ಆಟದಂತೆಯೇ, ಮನರಂಜನಾತ್ಮಕವಾಗಿ ತೆರೆ ಮೇಲೆ ನಿರೂಪಿಸುತ್ತಾ ಮೊದಲರ್ಧ ಕತೆಯನ್ನು ಮುಗಿಸುತ್ತಾರೆ. ವಿರಾಮದ ನಂತರದ ಕತೆ ಗಂಭೀರತೆ ಸೇರಿಕೊಂಡು, ವಿದ್ಯಾರ್ಥಿಗಳ ಜತೆಗೆ ಕಾಣದ ಕೈಯೊಂದು ಆಟವಾಡುತ್ತದೆ.
ಚಿತ್ರ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ
ತಾರಾಗಣ: ಚಂದನ್ ಶೆಟ್ಟಿ, ಅಮರ್, ಭಾವನಾ, ಮನಸ್ವಿ, ಸಿಂಚನಾ, ಮನೋಜ್, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಪ್ರಶಾಂತ್ ಸಂಬರ್ಗಿ, ಬಲರಾಜವಾಡಿ
ನಿರ್ದೇಶನ: ಅರುಣ್ ಅಮುಕ್ತ
ರೇಟಿಂಗ್: 3
ಶಾಲಾ- ಕಾಲೇಜು, ತುಂಟಾಟ, ಪಾರ್ಟಿ, ಪಬ್ಬು ಇತ್ಯಾದಿಗಳ ಹಿನ್ನೆಲೆಯಲ್ಲಿ ನಡೆಯುವ ಒಂದು ಪುಟ್ಟ ಮಗುವಿನ ಸಾವು, ಆ ಸಾವಿನ ಹಿಂದಿನ ಎಮೋಷನ್... ಇವಿಷ್ಟು ಅಂಶಗಳು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಅಡಗಿರುವುದರಿಂದ ನಿರ್ದೇಶಕರು ಕತೆ ಜತೆಗೆ ತೀರಾ ಅನಗತ್ಯವಾಗಿ ಟೈಮ್ ಪಾಸ್ ಮಾಡುವುದಕ್ಕೆ ಹೋಗಿಲ್ಲ. ನಟನೆ ವಿಚಾರಕ್ಕೆ ಬಂದರೆ ಚಂದನ್ ಶೆಟ್ಟಿ ಇಲ್ಲಿ ಫಸ್ಟ್ಕ್ಲಾಸ್ ವಿದ್ಯಾರ್ಥಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.