WEB SPECIAL

ಅಂದು ದಕ್ಷ ಐಪಿಎಸ್ ಅಧಿಕಾರಿ, ಇಂದು ಯುವಕರಿಗೆ ಮಾದರಿ

Sep 28, 2018, 8:29 PM IST

ಇವರೊಬ್ಬ ಹಿರಿಯ ಐಪಿಎಸ್‌ ಅಧಿಕಾರಿ. ಕೆಲಸದಿಂದ ಮಾತ್ರ ನಿವೃತ್ತಿಯಾಗಿದ್ದಾರೆ ಆದರೆ ವೃತ್ತಿಯಿಂದಲ್ಲ. ಪ್ರತಿದಿನ ನೂರಾರು ಆಸಕ್ತರಿಗೆ ಪಾಠ ಹೇಳುತ್ತ ತಮ್ಮ ಅನುಭವ ಧಾರೆ ಎರೆಯುತ್ತಿದ್ದಾರೆ. ಹೌದು ರಾಷ್ಟ್ರಕವಿ ಕುವೆಂಪು ಅವರ ನಿಕಟ ಒಡನಾಟವಿದ್ದ ಶೃಂಗೇರಿ ಮೂಲದ ನಿವೃತ್ತ ಐಪಿಎಸ್ ಅಧಿಕಾರಿ ಕೆವಿಆರ್‌ ಠಾಗೋರ್  ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಗೆ ಏರಿದವರು. ಜತೆಗೆ ವಿವಿಧ ಇಲಾಖೆಗಳಲ್ಲಿಯೂ ದಕ್ಷ ಆಡಳಿತ ನೀಡಿದವರು. ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಠಾಗೋರ್  ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಂದಿಗೂ ಉಪನ್ಯಾಸ ನೀಡುತ್ತ ಆದರ್ಶಗಳನ್ನು ಬಿತ್ತುವ ಮಹತ್ ಕಾರ್ಯ ಮಾಡುತ್ತ ಯುವಕರಿಗೆ ಪ್ರೇರಣಾ ಶಕ್ತಿಯಾಗಿ ನಿಂತಿದ್ದಾರೆ.