
ಇಂಥದ್ದೊಂದು ಸಂಬಂಧವನ್ನು ಮೆಂಟೇನ್ ಮಾಡುವುದು ಸಾಧ್ಯಾನಾ? ಕಷ್ಟ ಎನ್ನುತ್ತಾರೆ ಕೆಲವರು. ಒಂಟಿತನ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ದುಃಖ ಉಮ್ಮಳಿಸುತ್ತದೆ. ಬೇಕೆಂದಾಗ ಸಮಾಧಾನ ಮಾಡಲು ಆಪ್ತ ಕೈಯೊಂದು ಸಿಗೋಲ್ಲ. ಒರಗಲು ಅಗತ್ಯವಿರೋ ಭುಜ ಸಿಗೋಲ್ಲ. ಒಟ್ಟಿಗೆ ತಿನ್ನಲಾಗದಂಥ ಸ್ಥಿತಿ. ಸಂಗಾತಿಯ ಸ್ಪರ್ಶವಿಲ್ಲದೇ, ರಾತ್ರಿ ಜೊತೆಯಾಗಿ ಬೆಳದಿಂಗಳ ಆಕಾಶವನ್ನು ನೋಡಲಾಗದೇ.....ಬದುಕು ಬರಡೆನಿಸಿ ಬಿಡುತ್ತದೆ. ಹಾಗಂತ ಜತೆಯಿದ್ದಾಗ ಬೆಳದಿಂಗಳ ರಾತ್ರಿಯನ್ನು ನೋಡಿರುತ್ತೀರೋ ಇಲ್ಲ ಗೊತ್ತಿಲ್ಲ. ಮನುಷ್ಯನಿಗೆ ಸಾಂಗತ್ಯ ಮಾತ್ರ ಬೇಕು. ಬೇಕೆಂದಾಗ ಸಿಗದೇ ಹೋದರೆ, ಸಂಬಂಧದಲ್ಲಿ ಬಿರುಕು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ.
'ನೀ ಸಿಗದೇ ಬಾಳೊಂದು ಬಾಳೇ...' ಎಂದೆನಿಸುವುದು ನಮ್ಮವರು ನಮ್ಮಿಂದ ದೂರವಿದ್ದಾಗ ಮಾತ್ರ. ಅಲ್ಲಿ ಪ್ರೀತಿಯ ಕುರುಹು ಮಾತ್ರವಲ್ಲ, ಅನುಮಾನವೂ ಹೊಗೆಯಾಡುತ್ತದೆ. ಬೇರೆಯವರೊಂದಿಗೆ ಸುತ್ತಾಡುತ್ತಿರುವ ಭಯ ನಿಮ್ಮನ್ನು ಅಧೀರರನ್ನಾಗಿಸುತ್ತದೆ. ಮತ್ತೊಂದು ಸಂಬಂಧ ಹೊಂದಿರುವ ಬಗ್ಗೆಯೂ ಆತಂಕ ಹೆಚ್ಚಿಸುತ್ತದೆ. ಆದರೆ, ಉನ್ನತ ಶಿಕ್ಷಣ, ಉದ್ಯೋಗ...ಮುಂತಾದ ಕಾರಣಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಬೇಕಾದ ಪ್ರಸಂಗ ಬರುತ್ತದೆ. ಅದನ್ನು ನಿರ್ವಹಿಸಲು ಇಲ್ಲಿವೆ ಟಿಪ್ಸ್....
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.