
ಪುರುಷರಾಗಲಿ, ಮಹಿಳೆಯರಾಗಲಿ ಹಿಂದೂ ಧರ್ಮದಲ್ಲಿ ಹಣೆಗೆ ಕುಂಕುಮ ಇಡುವುದು ಕಾಮನ್. ಅದರಲ್ಲಿಯೂ ವಿಶೇಷ ಕಾರ್ಯಕ್ರಮಗಳು ಅರಿಷಿಣ-ಕುಂಕುಮ ಇಲ್ಲದೇ ಸಂಪನ್ನವಾಗುವುದೇ ಇಲ್ಲ. ಏನಿದರ ಮಹತ್ವ?
- ತಿಲಕವನ್ನು ಯಾವಾಗಲೂ ಹಣೆಯ ಕೇಂದ್ರ ಭಾಗದಲ್ಲಿ ಹಚ್ಚಲಾಗುತ್ತದೆ. ನಮ್ಮ ಶರೀರದಲ್ಲಿ ಏಳು ಸಣ್ಣ ಶಕ್ತಿ ಕೇಂದ್ರಗಳಿವೆ. ತಿಲಕವನ್ನು ಮಸ್ತಿಷ್ಕದ ಮಧ್ಯದಲ್ಲಿ ಆಜ್ಞಾ ಚಕ್ರವಿದ್ದು, ಇದನ್ನು ಗುರು ಚಕ್ರ ಎಂದೂ ಕರೆಯಲಾಗುತ್ತದೆ. ಇದು ಮಾನವ ಶರೀರದ ಕೇಂದ್ರ ಭಾಗವಾಗಿದ್ದು, ಇದರಿಂದ ಏಕಾಗ್ರತೆ ಮತ್ತು ಜ್ಞಾನ ಹೆಚ್ಚುತ್ತದೆ.
- ಯಾವಾಗಲೂ ಉಂಗುರ ಬೆರಳಿನಿಂದ ತಿಲಕವನ್ನು ಹಚ್ಚಲಾಗುತ್ತದೆ. ಉಂಗುರ ಬೆರಳು ಸೂರ್ಯನ ಪ್ರತೀಕ. ಈ ಬೆರಳಿನಿಂದ ತಿಲಕ ಹಚ್ಚಿದರೆ, ಯಶಸ್ಸು ಸಿಗುತ್ತದೆ. ಇದಲ್ಲದೇ ಗೌರವದ ಪ್ರತೀಕವಾಗಿ ಹೆಬ್ಬೆಟ್ಟಿನಿಂದ ತಿಲಕವನ್ನು ಇಡಲಾಗುತ್ತದೆ. ವಿಜಯದ ಪ್ರತೀಕವಾಗಿ ತೋರು ಬೆರಳಿನಿಂದ ತಿಲಕವಿಡಲಾಗುತ್ತದೆ.
- ಯಾವುದೇ ಬಣ್ಣದ ತಿಲಕ ಹಚ್ಚಿದರೂ ಅದರಿಂದ ಶಕ್ತಿ ಹೆಚ್ಚುತ್ತದೆ. ಆದರೆ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಬಿಳಿ ಅಥವಾ ಗಂಧದ ತಿಲಕ ಸೌಮ್ಯತೆಯ ಸಂಕೇತವಾದರೆ, ಕೆಂಪು ಶಕ್ತಿಯ ಸಂಕೇತ. ಅದೇ ರೀತಿ ಹಳದಿ ಬಣ್ಣದ ತಿಲಕ ಸಂತೋಷದ ಸಂಕೇತ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.