ಪಿತ್ತ ಕೆದರಿದರೆ ಹುಣಸೆ ರಸ ಮದ್ದು. ಮೂಲವ್ಯಾಧಿಗೂ ರಾಮಬಾಣ

Published : Nov 21, 2018, 04:12 PM ISTUpdated : Nov 21, 2018, 04:13 PM IST
ಪಿತ್ತ ಕೆದರಿದರೆ ಹುಣಸೆ ರಸ ಮದ್ದು. ಮೂಲವ್ಯಾಧಿಗೂ ರಾಮಬಾಣ

ಸಾರಾಂಶ

ಪಿತ್ತ ಆಯ್ತು ಅಂದರೆ ಅಮ್ಮಂದಿರಿ ಬೆಲ್ಲ ಹುಣಸೆ ಹಣ್ಣಿನ ಪಾನಕ ಮಾಡಿ ಕೊಡುವುದು ಸಾಮಾನ್ಯ. ಅಡುಗೆ ರುಚಿ ಹೆಚ್ಚಿಸಲು ಬಳಸುವ ಹುಣಸೆ ಹಣ್ಣಿನಲ್ಲಿ ಇನ್ಯಾವ ಔಷಧೀಯ ಗುಣಗಳಿಗಿವೆ?

ಅಡುಗೆ ರುಚಿ ಹೆಚ್ಚಿಸುವ ಹುಣಸೆ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿನೆ. ಕ್ಯಾನ್ಸರ್‌, ಮೂಲವ್ಯಾಧಿಗೂ ಮದ್ದಾಗುವ ಇದರಲ್ಲಿ ಇನ್ಯಾವ ಔಷಧೀಯ ಗುಣಗಳಿವೆ?

- ನೀರಿನಲ್ಲಿ ಹುಣಸೆಹುಳಿ ಬೆರೆಸಿದ ನಿಂಬೆ ಚರಟವನ್ನು ನೆನೆಸಿ, ಕೂದಲ ಬುಡಕ್ಕೆ ಹಚ್ಚಿ. ಇದು ಕೂದಲನ್ನು ಬೇರಿನಿಂದಲೇ ಗಟ್ಟಿಗೊಳಿಸಿ, ಕೂದಲುದುರುವಿಕೆಯನ್ನು ತಡೆಯುತ್ತದೆ.
- ಹುಣಸೆ ತಿಂದರೆ ಆ್ಯಂಟಿಸೆಪ್ಟಿಕ್‌ನಂತೆ ಕೆಲಸಮಾಡಿ, ಗಾಯಗಳು ಬೇಗ ಮಾಯುವಂತೆ ಮಾಡುತ್ತದೆ.
- ದೇಹದೊಳಗೆ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ. 
- ಕೊಲೆಸ್ಟೆರಾಲ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 
- ಹುಣಸೆಹುಳಿಯನ್ನು ಟೀಯೊಂದಿಗೆ ಬೆರೆಸಿ ಕೊಡುವುದು ಮಲೇರಿಯಾ ನಿಯಂತ್ರಣಕ್ಕೆ ಸಹಕಾರಿ.
- ಜಾಂಡೀಸ್ ಹಾಗೂ ಅಲ್ಸರ್ ಔಷಧಿ ತಯಾರಿಕೆಯಲ್ಲಿ ಹುಣಸೆ ರಸವನ್ನು ಬಳಸಲಾಗುತ್ತದೆ.
- ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಿದ್ದು, ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಕುಂಠಿಸುತ್ತದೆ.
- ಹುಣಸೆ ಹೂವಿನಿಂದ ತೆಗೆದ ರಸವು ಮೂಲವ್ಯಾಧಿಯನ್ನು ನಿವಾರಿಸುತ್ತದೆ.
-ರಕ್ತ ಶುದ್ಧಿಗೂ ಹುಣಸೆ ಹಣ್ಣು ಬೆಸ್ಟ್ ಮದ್ದು.

ಮನೆ ಮದ್ದಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Silent Killer: 'ಹೈ ಬ್ಲಡ್ ಪ್ರೆಶರ್' ಎಂಬ 'ಸೈಲೆಂಟ್ ಕಿಲ್ಲರ್'.. ಹೃದಯಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ, ನೆನಪಿರಲಿ!
Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ ಹಿಂದಿದೆ ಶಾಕಿಂಗ್ ವೈಜ್ಞಾನಿಕ ಕಾರಣ!