
ಮೇಷ : ಅಧಿಪತಿ ಭಾಗ್ಯದಲ್ಲಿದ್ದಾನೆ ಸ್ವಲ್ಪ ಮಟ್ಟಿಗೆ ಶುಭ ಆದರೆ ಶನಿಯುತನಾದ್ದರಿಂದ ಭಾಗ್ಯದಲ್ಲೂ ಜಗಳ-ಕಲಹ ಸಂಭವ.
ವೃಷಭ : ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ಸ್ತ್ರೀಯರಿಂದ ಲಾಭ. ಆದರೆ ರವಿಯುತನಾದ್ದರಿಂದ ಸ್ವಲ್ಪ ಕಲಹಾದಿಗಳು ಸಂಭವ
ಮಿಥುನ : ಉದ್ಯೋಗದಲ್ಲಿ ಪ್ರಗತಿ, ಸಂಸಾರದಲ್ಲಿ ಕಲಹ, ಅಷ್ಟಮದ ಕೇತು ದೇಹಬಾಧೆ ತರಲಿದ್ದಾನೆ, ಗಣಪತಿ ದರ್ಶನ ಮಾಡಿ
ಕಟಕ : ದೈವಾನುಕೂಲವಿದೆ, ಆರೋಗ್ಯ ತೊಂದರೆ ಸರಿಯಾಗಲಿದೆ, ಉತ್ತಮ ದಿನ, ಶೃಂಗೇರಿ ಭೇಟಿ ಮಾಡಿ
ಸಿಂಹ : ಭಾಗ್ಯ ಒಲಿದುಬರಲಿದೆ, ಸ್ತ್ರೀ ಸೌಖ್ಯ, ಆದರೆ ಸಣ್ಣಪುಟ್ಟ ಕಲಹಗಳೂ ಇವೆ. ಕೆಂಪು ವಸ್ತ್ರ ದಾನ ಮಾಡಿ
ಕನ್ಯಾ : ಕುಟುಂಬ ಸೌಖ್ಯ, ಧನ ಪ್ರಾಪ್ತಿ, ವಾಹನ ಅವಘಡ ಸಂಭವ, ಸುಬ್ರಹ್ಮಣ್ಯ ದರ್ಶನ ಮಾಡಿ
ತುಲಾ : ತೃತೀಯಭಾವದಲ್ಲಿ ಪಾಪ ಗ್ರಹಗಳಿದ್ದರೆ ಶುಭವೆಂಬ ಆಧಾರವಿದೆ, ಸಾಹಸ ಪ್ರದರ್ಶನ ಸಾಧ್ಯತೆ, ಛಲದ ಬದುಕು
ವೃಶ್ಚಿಕ : ಧನವ್ಯಯವಾಗುವ ಸಾಧ್ಯತೆ, ಗುರುವಿನ ಅನುಕೂಲವೂ ಇಲ್ಲ. ಸಾಧಾರಣ ದಿನವಾಗಿರಲಿದೆ. ನಾಗಾರಾಧನೆ ಮಾಡಿ
ಧನಸ್ಸು : ದ್ವತಿತೀಯದ ಕೇತುವಿನಿಂದ ಮಾತಿನಿಂದ ಕಲಹ, ಚತುರ್ಥದಲ್ಲಿನ ಶುಕ್ರನಿಂದ ವಾಹನ ಖರೀದಿ ಯೋಗ.
ಮಕರ : ಸುಖಾಧಿಪತಿ ವ್ಯಯದಲ್ಲಿರುವುದರಿಂದ ಬಾಧೆ, ಧನಾಧಿಪತಿಯೂ ವ್ಯಯಗತ, ಶನಿ-ಸುಬ್ರಹ್ಮಣ್ಯರ ದರ್ಶನ ಮಾಡಿ
ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿಯ ಕಾಲ, ಉತ್ತಮ ದಿನ, ಶಿವ ಧ್ಯಾನ ಮಾಡಿ
ಮೀನ : ಗುರುವಿನ ಅನುಗ್ರಹ ಬೇಕು, ಶೃಂಗೇರಿ, ಮಂತ್ರಾಲಯ, ಗಣಗಾಪುರ, ಶ್ರೀಧರಾಶ್ರಮಕ್ಕೆ ಹೋಗಿಬನ್ನಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.