
ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಮಾತಿದೆ. ಉಪ್ಪು ಹೆಚ್ಚಾದ್ರೂ ಕಷ್ಟ, ಕಡಿಮೆ ಆದ್ರೂ ಕಷ್ಟ. ರುಚಿಗೆ ತಕ್ಕಷ್ಟು ಉಪ್ಪನ್ನು ಪ್ರತಿಯೊಂದು ಪದಾರ್ಥಕ್ಕೂ ಹಾಕ್ಲೇಬೇಕು. ನಾವು ಯಾವುದೇ ಪಲ್ಯ ಮಾಡ್ತಿರಲಿ, ತರಕಾರಿ ಸ್ವಲ್ಪ ಫ್ರೈ ಆಗ್ತಿದ್ದಂತೆ ಅದಕ್ಕೆ ಉಪ್ಪು ಹಾಕ್ತೇವೆ. ಉಪ್ಪು ಹಾಕ್ತಿದ್ದಂತೆ ತರಕಾರಿ ನೀರು ಬಿಡಲು ಶುರು ಮಾಡುತ್ತೆ. ಪ್ರತಿ ದಿನ ಇದನ್ನು ನೋಡ್ತಿದ್ರೂ ಏಕೆ ಎನ್ನುವ ಪ್ರಶ್ನೆ ನಿಮಗೆ ಬಂದೇ ಇಲ್ಲ ಅಲ್ವಾ?
ಇದೇನೂ ಮ್ಯಾಜಿಕ್ ಅಲ್ಲ. ಆಸ್ಮೋಸಿಸ್ ಎಂಬ ವಿಜ್ಞಾನದ ಅತ್ಯಂತ ಸರಳ ಮತ್ತು ಆಸಕ್ತಿದಾಯಕ ತತ್ವವು ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದು ತರಕಾರಿ ಬಹಳಷ್ಟು ನೀರು ಮತ್ತು ನೈಸರ್ಗಿಕ ರಸಗಳನ್ನು ಹೊಂದಿರುತ್ತದೆ. ತರಕಾರಿ ಮೇಲೆ ಉಪ್ಪನ್ನು ಹಾಕಿದಾಗ ತರಕಾರಿ ಹೊರಗೆ ಉಪ್ಪಿನ ಪ್ರಮಾಣ ಹೆಚ್ಚಾಗುತ್ತದೆ.
ಪಾಲಕ್ ಸೊಪ್ಪು 10 ದಿನದವರೆಗೆ ಹಾಳಾಗಲ್ಲ, ಎಲೆ ಹಳದಿಯಾಗಲ್ಲ.. ತಂದ ತಕ್ಷಣ ಈ ಟ್ರಿಕ್ ಬಳಸಿ
ಪ್ರಕೃತಿಯು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುವ ನಿಯಮವನ್ನು ಹೊಂದಿದೆ. ಆದ್ದರಿಂದ, ಹೊರಗೆ ಇರುವ ಬಲವಾದ ಉಪ್ಪನ್ನು ಕರಗಿಸಿ ಹಗುರಗೊಳಿಸಲು, ತರಕಾರಿಯೊಳಗಿನ ನೀರು ತನ್ನ ಸ್ಥಳವನ್ನು ಬಿಟ್ಟು ಹೊರಬರಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ಆಸ್ಮೋಸಿಸ್ ಎಂದು ಕರೆಯಲಾಗುತ್ತದೆ.
ಬ್ಯಾಚುಲರ್ಸ್ ಸ್ಪೆಷಲ್.. ಮ್ಯಾರಿನೇಟ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದ್ರೆ
ನೀವು ಈರುಳ್ಳಿ ಅಥವಾ ಟೊಮೆಟೊಗಳಿಗೆ ಉಪ್ಪು ಸೇರಿಸಿದಾಗ ನೀರು ಆವಿಯಾಗುತ್ತದೆ. ತರಕಾರಿ ಬೇಗ ಕರಗುತ್ತದೆ. ನಿಮ್ಮ ಅಡುಗೆ ಬೇಗ ಸಿದ್ಧವಾಗುತ್ತದೆ. ಅದೇ ಹಾಗಲಕಾಯಿಗೆ ಉಪ್ಪು ಹಾಕುವುದರಿಂದ ತರಕಾರಿಯಿಂದ ಕಹಿ ನೀರು ಹೊರಗೆ ಬರುತ್ತದೆ. ಮೂಲಂಗಿ ಅಥವಾ ಎಲೆಕೋಸು ಪರಾಠಗಳನ್ನು ತಯಾರಿಸುವಾಗ, ಅದಕ್ಕೆ ಉಪ್ಪು ಹಾಕಿದ್ರೆ ರಸ ಬಿಡುತ್ತದೆ. ಇದ್ರಿಂದ ಪರಾಠ ರುಚಿ ಹಾಳಾಗುತ್ತದೆ. ನೀವು ಮೊದಲೇ ಉಪ್ಪು ಹಾಕಿ ರಸ ತೆಗೆದರೆ ಪರಾಠ ತಯಾರಿಸುವುದು ಸುಲಭ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.