
ಅವರು ಆ ಭಾಗದ ದೇವಮಾನವ ಅನ್ನಿಸಿಕೊಂಡವರು.. ಏನೇ ಕಷ್ಟ ಬಂದರೂ ಆ ದೇವಮಾನವನನ್ನ ನೆನಪಿಸಿಕೊಂಡ್ರೆ ಸಾಕು.. ಕಷ್ಟವೆಲ್ಲಾ ದೂರವಾಗುತ್ತೆ ಅಂತ ನಂಬ್ತಾರೆ.. ವಾಹನ, ಮನೆ, ಸೈಟು ಏನ್ ತಗೊಂಡ್ರು ಮೊದಲು ಆತನದ್ದೇ ಮೂಜೆ.. ಕಷ್ಟ ಸುಖಗಳಿಗೂ ಅವರೇ ಪರಿಹಾರ.. ಆದ್ರೆ ಇವತ್ತು ಇದೇ ದೇವಮಾನವ ಅಪ್ಸ್ಕಾಂಡ್ ಆಗಿದ್ದಾರೆ.. ಪೊಲೀಸರು ಆತನಿಗಾಗಿ ಇನ್ನಿಲ್ಲದಂತೆ ಹುಡುಕಾಡುತ್ತಿದ್ದಾರೆ.. ಯಸ್.. ನಾವು ಮಾತನ್ನಾಡುತ್ತಿರೋದು ಮಲ್ಲಿಕಾರ್ಜುನ ಮುತ್ಯಾ ಬಗ್ಗೆ.. ಈತನದ್ದೇ ಒಂದು ವಿಡಿಯೋ ವೈರಲ್ ಆಗಿ ಇವತ್ತು ಅವರು ಭೂಗತನ್ನಾಗೋದಕ್ಕೆ ಕಾರಣವಾಗಿಬಿಟ್ಟಿದೆ.. ಅಷ್ಟಕ್ಕೂ ಯಾವುದು ಆ ವಿಡಿಯೋ..? ಆ ಮುತ್ಯಾನ ಹಿನ್ನಲೆಯಾದ್ರೂ ಏನು..? ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕಳೆದೆರಡು ವರ್ಷದಿಂದ.. ಇಂಥಹ ವಿಡಿಯೋಗಳು ಸಖತ್ ವೈರಲ್ ಆಗಿದ್ವು.. ಬಿಲ್ಡಪ್ ಸಾಂಗ್ಸ್.. ದೇವರ ಹಾಡುಗಳನ್ನ ಹಾಕೊಂಡು ಒಬ್ಬ ಯುವಕ ಓಡಾಡೋ ರೀಲ್ಸ್ಗಳವು.. ಆ ವಿಡಿಯೋವನ್ನ ನೋಡಿದ್ದ ದಕ್ಷಿಣ ಭಾಗದ ಜನ ನೆಗ್ಲೆಕ್ಟ್ ಮಾಡಿದ್ರು.. ಆದ್ರೆ ಉತ್ತರ ಕರ್ನಾಟಕದ ಜನ ಮಾತ್ರ ಒಂದು ಕ್ಷಣ ಆ ಯುವಕನನ್ನ ನೆನಪಿಸಿಕೊಂಡು ನಮ್ಮ ಕಷ್ಟಗಳನ್ನ ದೂರ ಮಾಡು ಮುತ್ಯಾ ಅಂತ ಪ್ರಾರ್ಥಿಸಿದ್ರು.. ಅಷ್ಟು ಭಕ್ತಿ.. ನಂಬಿಕೆ ಆ ಯುವಕನ ಮೇಲೆ.. ಅಂದಹಾಗೆ ಆತನ ಹೆಸರು ಮಲ್ಲಿಕಾರ್ಜುನ ಮುತ್ಯಾ.