Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!

Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!

Published : Jun 23, 2026, 09:12 PM IST

ಮದುವೆಗೆ ಕೆಲವೇ ಗಂಟೆಗಳಿರುವಾಗ, ಯುವಕನೊಬ್ಬನ ಮಾನಸಿಕ ಕಿರುಕುಳಕ್ಕೆ ಬೇಸತ್ತು ವಧು ರಕ್ಷಿತಾ ಹಾಗೂ ಆಕೆಯ ಹೆತ್ತವರು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಉಲ್ಲಾಸ್ ಗೌಡ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದು, ಆತನೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಅದೊಂದು ಸಾಧಾರಣ ಹಾಗೂ ನೆಮ್ಮದಿಯ ಪುಟ್ಟ ಕುಟುಂಬ. ತಂದೆ, ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು. ದೊಡ್ಡ ಮಗಳಿಗೆ ಎರಡು ವರ್ಷಗಳ ಹಿಂದೆಯೇ ವಿವಾಹವಾಗಿ ಗಂಡನ ಮನೆ ಸೇರಿದ್ದಾಳೆ. ಇನ್ನುಳಿದಿದ್ದ ಎರಡನೇ ಮಗಳು ರಕ್ಷಿತಾಳಿಗೆ ನಾಳೆ ಅದ್ಧೂರಿಯಾಗಿ ಮದುವೆ ನಡೆಯಬೇಕಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ ಮನೆಯ ಮುಂದೆ ಮದುವೆ ಚಪ್ಪರ ಇರಬೇಕಿತ್ತು, ಮದುಮಗಳ ನಗುವಿನ ಸದ್ದು ಕೇಳಿಸಬೇಕಿತ್ತು. ಆದರೆ, ವಿಧಿಯ ಆಟ ಮತ್ತು ನರರಾಕ್ಷಸನೊಬ್ಬನ ಕಾಟದಿಂದಾಗಿ ಇಂದು ಆ ಮನೆಯ ಮುಂದೆ ಚಟ್ಟಗಳು ನಿಂತಿವೆ! ಹಸೆಮಣೆ ಏರಬೇಕಿದ್ದ ಮಗಳು ಹೆತ್ತವರೊಂದಿಗೆ ಸ್ಮಶಾನದ ಹಾದಿ ಹಿಡಿದಿದ್ದಾಳೆ.

ಹೌದು, ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಡೀ ಕುಟುಂಬವೇ ವಿಷ ಸೇವಿಸಿ ಸಾಮೂಹಿಕವಾಗಿ ಆ*ತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ದುರಂತ ನಡೆದಿದೆ. ಈ ಇಡೀ ಸಾವಿನ ಹಿಂದಿರುವುದು ಉಲ್ಲಾಸ್ ಗೌಡ ಎಂಬಾತನ ಕ್ರೌರ್ಯ. ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಆತನೊಬ್ಬನ ಹೆಸರೇ ಪ್ರಮುಖವಾಗಿ ಉಲ್ಲೇಖವಾಗಿದೆ.

ಅನ್ನ ಹಾಕಿದ ಮನೆಗೇ ದ್ರೋಹ ಬಗೆದ ಪಾಪಿ:

ಸ್ಥಳೀಯರ ಪ್ರಕಾರ, ಉಲ್ಲಾಸ್ ಗೌಡ ಆ ಕುಟುಂಬಕ್ಕೆ ಅತ್ಯಂತ ಆಪ್ತನಾಗಿದ್ದ, ಮನೆಯ ಮಗನಂತಿದ್ದವನು. ಅದೇ ಮನೆಯಲ್ಲಿ ಎಷ್ಟೋ ದಿನ ಅನ್ನ ತಿಂದಿದ್ದ. ಆದರೆ ರಕ್ಷಿತಾ ಮದುವೆ ನಿಶ್ಚಯವಾದ ಮೇಲೆ ಆತನ ಕಣ್ಣು ಕೆಂಪಾಗಿದೆ. 'ರಕ್ಷಿತಾಳನ್ನು ನನಗೇ ಕೊಟ್ಟು ಮದುವೆ ಮಾಡಿ' ಎಂದು ಆಕೆಯ ತಂದೆಯ ಬಳಿ ಹಠ ಹಿಡಿದಿದ್ದಾನೆ. ಆದರೆ ಅದಕ್ಕೆ ತಂದೆ ಒಪ್ಪದಿದ್ದಾಗ ವಿಕೃತ ರೂಪ ತಳೆದಿದ್ದಾನೆ.

ಮದುವೆ ಗಂಡಿಗೆ ಸಂದೇಶ, ಫೋಟೋ ರವಾನೆ:

ರಕ್ಷಿತಾ ಯಾರನ್ನು ಮದುವೆಯಾಗಬೇಕಿತ್ತೋ, ಆ ಹುಡುಗನಿಗೆ ಉಲ್ಲಾಸ್ ಗೌಡ ಮೆಸೇಜ್ ಮಾಡಿದ್ದಾನೆ. 'ನಾನು ಮತ್ತು ರಕ್ಷಿತಾ ಪ್ರೀತಿಸುತ್ತಿದ್ದೇವೆ, ಅವಳನ್ನು ನೀನು ಮದುವೆಯಾಗಬೇಡ' ಎಂದು ಹೇಳಿ ಒಂದೆರಡು ಫೋಟೋಗಳನ್ನೂ ಕಳುಹಿಸಿ ಮದುವೆ ಮುರಿಯಲು ಯತ್ನಿಸಿದ್ದಾನೆ. ಆದರೆ, ಈ ಸಮಯದಲ್ಲಿ ಮದುವೆಯಾಗಬೇಕಿದ್ದ ಹುಡುಗ, ಹುಡುಗಿಯ ಮನೆಗೆ ಬಂದು 'ಏನೇ ಆದರೂ ನಿಮ್ಮ ಮಗಳನ್ನೇ ನಾನು ಮದುವೆಯಾಗುತ್ತೇನೆ' ಎಂದು ಧೈರ್ಯ ತುಂಬಿ ಹೋಗಿದ್ದಾನೆ. ಆದರೂ, ಸಮಾಜದಲ್ಲಿ ಆಗಬಹುದಾದ ಅಪಮಾನ ಹಾಗೂ ಉಲ್ಲಾಸ್ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಹೆದರಿದ ಅಪ್ಪ, ಅಮ್ಮ ಮತ್ತು ಮಗಳು ಮೂವರೂ ವಿಷ ಸೇವಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಅನ್ನ ಹಾಕಿದ ಮನೆಗೇ ಕೊಳ್ಳಿ ಇಟ್ಟ ಉಲ್ಲಾಸ್ ಗೌಡನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more