ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!

ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!

Published : Jun 03, 2026, 10:58 AM IST
ವಿಜಯಪುರದ ಭೀಮಾತೀರದಲ್ಲಿ ನಡೆದ ನಿರಾಳೆ ಕುಟುಂಬದ ಆರು ಜನರ ಹತ್ಯಾಕಾಂಡಕ್ಕೆ ಜಮೀನು ವ್ಯಾಜ್ಯ ಕಾರಣವೆಂದು ಭಾವಿಸಲಾಗಿತ್ತು. ಆದರೆ, ಈ ಕೊಲೆಗಳ ಹಿಂದೆ ಭೀಮಾ ನದಿಯ ಮರಳು ದಂಧೆಯ ಹಿಡಿತ ಸಾಧಿಸುವ ಕೋಟಿ ಕೋಟಿ ಹಣದ ದುರಾಸೆ ಇದೆ ಎಂಬ ಹೊಸ ಸತ್ಯ ಇದೀಗ ಚರ್ಚೆಯಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕೆ ಬರೊಬ್ಬರಿ ಅರ್ಧ ಡಜನ್‌ ಹೆಣಬಿದ್ದಿದ್ದ ಕಥೆಯನ್ನ ನಾವು ಈ ಹಿಂದೆ ಹೇಳಿದ್ವಿ.. ಭೀಮಾತೀರದಲ್ಲಿ ನಡೆದಿದ್ದ ಹತ್ಯಾಕಾಂಡವನ್ನ ಕಂಡು ಆವತ್ತು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಚಡಚಣ ಪಟ್ಟಣದ ಪ್ರತಿಷ್ಟಿತ ನಿರಾಳೆ ಕುಟುಂಬದ ಸದಸ್ಯರನ್ನ ಅಟ್ಟಾಡಿಸಿ ಕೊಚ್ಚಿಹಾಕಿದ್ದ ಹಂತಕರು ಇವತ್ತು ಖಾಕಿ ಬಲೆಗೆ ಬಿದ್ದಿದ್ದಾರೆ. ಆದ್ರೆ 25 ಎಕರೆ ಜಮೀನಿಗೆ ಈ ಕೊಲೆಗಳು ನಡೆದಿದ್ವು ಅಂತ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಈಗ ಕೇಳಿ ಬರ್ತಿರೋ ಅದೊಂದು ಕಾರಣ ಮಾತ್ರ ಮತ್ತೆ ಭೀಮಾತೀರದ ಮಂದಿಯನ್ನ ಕಕ್ಕಾಬಿಕ್ಕಿಯಾಗೋ ಹಾಗೇ ಮಾಡಿದೆ. ಅಷ್ಟಕ್ಕೂ ಆ ಕಾರಣವೇನು..? ಭೀಮಾತೀರದ ಗ್ಯಾಂಗ್​ಸ್ಟರ್​​ಗಳ ಕಣ್ಣು ಕುಕ್ಕುತ್ತಿರುವ ಆ ಹೊಸ ದಂಧೆ ಯಾವುದು..? ನಿರಾಳೆ ಕುಟುಂಬದ ಸಾವುಗಳ ಹಿಂದಿನ ಅಸಲಿ ಕಥೆಯೇ ಇವತ್ತಿನ ಎಫ್​​.ಐ.ಆರ್

ಒಂದು ಜಮೀನಿಗಾಗಿ ಒಂದು ಇಡೀ ಕುಟುಂಬವನ್ನೆ ಮುಗಿಸಿದ್ರು ಅಂದ್ರೆ ಅದು ಸುಮ್ಮನೆನಾ? ಅಷ್ಟಕ್ಕು ೬ ಹೆಣಗಳನ್ನ ಕೆಡವುವಂತ ಕರಾಳತೆ ಆ ಜಮೀನಿನಲ್ಲಿ ಏನಿತ್ತು.? ಅನ್ನೋ ಪ್ರಶ್ನೆಗಳ ನಡುವೆಯೇ ಈಗ ಭೀಮಾತೀರದ ಜನ ಮರಳು ದಂಧೆಯ ವಾಸನೆ ಬರ್ತಿದೆ ಎನ್ತಿದ್ದಾರೆ. ಹಾಗಾದ್ರೆ ಏನದು ಮರಳು ದಂಧೆ..? ಒಂದು ಪ್ರತಿಷ್ಟಿತ ಮನೆತನದ ೬ ಜನರನ್ನ ಅನಾಯಾಸವಾಗಿ ಕೊಂದು ಹಾಕ್ತಾರೆ ಅಂದ್ರೆ ಇದರಲ್ಲೀ ಏನೋ ಮಸಲತ್ತಿದೆ ಅನ್ನೋದನ್ನ ಸಾಮಾನ್ಯರಿಗೂ ಅರ್ಥವಾಗುತ್ತೆ. ಭಯಾನಕ ಹತ್ಯೆಯ ಹಿಂದೆ ಹೆಣ್ಣು-ಮಣ್ಣು ಬಿಟ್ಟು ಮರಳು ದಂಧೆಯ ಒಡೆತನದ ಮಾತುಗಳು ಕೇಳಿ ಬರ್ತಿವೆ. ಹೌದು.. ಇದೇ ಭೀಮಾ ನದಿಯ ಮಹರಾಷ್ಟ್ರದ ಭಾಗದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ.. ಆದ್ರೆ ಕರ್ನಾಟಕ ಭಾಗದಲ್ಲಿ ಇನ್ನೂ ಸಹ ಸರ್ಕಾರ ಒಪ್ಪಿಗೆ ನೀಡಿಲ್ಲ.. ಆದ್ರೆ ಇಲ್ಲಿ ಒಂದಿಲ್ಲೊಂದು ದಿನ ಗಣಿಗಾರಿಕೆ ನಡೆಯುತ್ತೆ ಅನ್ನೋದು ಭೀಮಾತೀರದ ಗ್ಯಾಂಗ್​​ಸ್ಟರ್​ಗಳ ನಂಬಿಕೆ.. ಹೀಗಾಗೇ ಕೋಟಿ ಕೋಟಿ ಹಣದ ದುರಾಸೆಯೆ ಈ ದುರಂತಕ್ಕೆ ಕಾರಣ ಅಂತಾ ಭೀಮಾತೀರದ ಮಂದಿ ಮಾತನಾಡ್ತಿದ್ದಾರೆ

23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more