‘ಕುರ್ಚಿ’ಗಾಗಿ ಕುರ್ಚಿಯಲ್ಲೇ ಕಿತ್ತಾಡಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು: ವಿಡಿಯೋ ವೈರಲ್‌

Published : Jun 18, 2023, 03:34 PM IST
‘ಕುರ್ಚಿ’ಗಾಗಿ ಕುರ್ಚಿಯಲ್ಲೇ ಕಿತ್ತಾಡಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು: ವಿಡಿಯೋ ವೈರಲ್‌

ಸಾರಾಂಶ

ಯುವ ಕಾಂಗ್ರೆಸ್‌ ಸಭೆ ಹಿಂಸಾತ್ಮಕ ಹೋರಾಟದಲ್ಲಿ ಕೊನೆಗೊಂಡಿದೆ. ಮಹಾರಾಷ್ಟ್ರ ಯುವ ಕಾಂಗ್ರೆಸ್‌ನ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಎರಡು ಬಣಗಳ ನಡುವಿನ ವಿವಾದದಿಂದ ಘರ್ಷಣೆ ಉಂಟಾಗಿದೆ.

ಮುಂಬೈ (ಜೂನ್ 18, 2023): ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕುರ್ಚಿ ಗದ್ದಲ ಜೋರಾಗಿದೆ. ನಾಯಕರೊಬ್ಬರನ್ನು ಕುರ್ಚಿಯಿಂದ ಇಳಿಸಲು ಕುರ್ಚಿಗಳಲ್ಲೇ ಜೋರಾಗಿ ಗದ್ದಲ ನಡೆದಿದೆ. ಸಭೆಯಲ್ಲಿ ಜನರ ಮಾತಿಗಿಂತ ದೈಹಿಕ ಘರ್ಷಣೆ, ಕುರ್ಚಿಯಲ್ಲಿ ಹೊಡೆದಾಟ, ಕುರ್ಚಿಯ ಹಾರಾಟಗಳೇ ಸದ್ದು ಮಾಡಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗಳ ವಿಡಿಯೋ ಸಹ ಸದ್ದು ಮಾಡಿದೆ. 

ಹೌದು, ಯುವ ಕಾಂಗ್ರೆಸ್‌ ಸಭೆ ಹಿಂಸಾತ್ಮಕ ಹೋರಾಟದಲ್ಲಿ ಕೊನೆಗೊಂಡಿದೆ. ಮಹಾರಾಷ್ಟ್ರ ಯುವ ಕಾಂಗ್ರೆಸ್‌ನ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಎರಡು ಬಣಗಳ ನಡುವಿನ ವಿವಾದದಿಂದ ಘರ್ಷಣೆ ಉಂಟಾಗಿದೆ ಎಂದು ಹೇಳಲಾಗಿದೆ. ನಂತರ ಪರಿಸ್ಥಿತಿಯು ಉಲ್ಬಣಗೊಂಡಿದ್ದು, ಪರಿಣಾಮವಾಗಿ ಎರಡೂ ಗುಂಪುಗಳು ಕುರ್ಚಿ-ಎಸೆದಾಡಿವೆ. ಅಷ್ಟೇ ಅಲ್ಲದೆ, ಕಾರ್ಯಕರ್ತರು ದೈಹಿಕ ಘರ್ಷಣೆಯಲ್ಲಿ ತೊಡಗಿದ್ದು, ಒಬ್ಬರಿಗೊಬ್ಬರು ಪಂಚ್‌ ನೀಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಇದನ್ನು ಓದಿ: ಲೈಂಗಿಕ ದೌರ್ಜನ್ಯ ಕೇಸ್‌: ‘ಕೈ’ ನಾಯಕ ಶ್ರೀನಿವಾಸ್‌ ವಿರುದ್ಧ ಎಫ್‌ಐಆರ್‌; ಅಸ್ಸಾಂ ಪೊಲೀಸರಿಂದ ಬಂಧನ ಸಾಧ್ಯತೆ 

ಇತ್ತೀಚೆಗೆ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್‌ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಇನ್ನೊಂದೆಡೆ, ಮುಂಬೈನ ದಾದರ್ ತಿಲಕ್ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಗಲಾಟೆ ನಡೆದಿರುವ ಹಿನ್ನೆಲೆ ಬಿ.ವಿ.ಶ್ರೀನಿವಾಸ್‌ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದ್ದಾರೆ. ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಉದ್ದೇಶಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಬಿ.ವಿ. ಶ್ರೀನಿವಾಸ್ ಅವರು ಯಾವುದೇ ಹೇಳಿಕೆ ನೀಡದೆ ನಿರ್ಗಮಿಸಿದರು ಎಂದು ವರದಿಯಾಗಿದೆ. 

ಇನ್ನು, ಈ ವೈರಲ್‌ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಯಾವಾಗಲೂ ಕಿತ್ತಾಟ ನಡೆಯುತ್ತಲೇ ಇರುತ್ತದೆ. ರಾಜಸ್ಥಾನ, ಛತ್ತೀಸ್‌ಘಡ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಈಗ ಮಹಾರಾಷ್ಟ್ರದಲ್ಲಿ ಗಲಾಟೆ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಜೈ ಹಿಂದ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Sexual Harassment Case; ಬಂಧನ ಭೀತಿಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪಾರು

‘’ಮುಂಬೈನಲ್ಲಿ ಯುವ ಕಾಂಗ್ರೆಸ್‌ ಸಭೆ ಹಿಂಸಾತ್ಮಕ ಜಗಳದಿಂದ ಕೊನೆಯಾಗಿದೆ. ಚೇರ್‌ಗಳ ಎಸೆದಾಟವೂ ನಡೆದಿದೆ. ಐಎನ್‌ಸಿ ಅಂದರೆ ಐ ನೀಡ್‌ ಚೇರ್‌ (ನನಗೆ ಕುರ್ಚಿ ಬೇಕು) ಅಥವಾ ಐ ನೀಡ್‌ ಟು ಥ್ರೋ ಚೇರ್‌ (ನಾನು ಕುರ್ಚಿಯನ್ನು ಎಸೆಯಬೇಕು) ಎಂದಾಗಿದೆ. ಕಾಂಗ್ರೆಸ್‌ನಲ್ಲಿ ಯಾವಾಗಲೂ ಕುರ್ಚಿಗಾಗಿ ಜಗಳ ನಡೆಯುತ್ತಿರುತ್ತದೆ, ಕುರ್ಚಿಗಳು ಹಾರಾಡುತ್ತಿರುತ್ತದೆ. ರಾಜಸ್ಥಾನ, ಛತ್ತೀಸ್‌ಘಡ, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಈಗ ಮಹಾರಾಷ್ಟ್ರದಲ್ಲಿ ಗಲಾಟೆ ನಡೆದಿದೆ. ಭಾರತ್‌ ಜೋಡೋ ಬಗ್ಗೆ ಮಾತನಾಡುವವರು ಮೊದಲು ಪಕ್ಷದ ಜೋಡಣೆ ಮಾಡಬೇಕು. ಭಾರತೀಯ ಯುವ ರಾಷ್ಟ್ರೀಯ ಕಾಂಗ್ರೆಸ್‌ ಮುಖ್ಯಸ್ಥ ಶ್ರೀನಿವಾಸ್‌ (ಪೊಲೀಸರಿಂದ ದೂರ ಓಡಿ ಹೋಗುವುದರಲ್ಲಿ ಎಕ್ಸ್‌ಪರ್ಟ್‌) ಆಗಿರುವ ಇವರು ಸಹ ಓಡಬೇಕಾಯಿತು’’ ಎಂದೂ ಟ್ವೀಟ್‌ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.  

ಇದನ್ನೂ ಓದಿ: ಶಂಕಿತ ಉಗ್ರರ ಬಂಧನ: ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ, ಮಹಮ್ಮದ್‌ ನಲಪಾಡ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು