ಗಂಡ್ಮಗು ಆಸೆ: 11 ಹೆಣ್ಮಕ್ಳಾದ್ಮೇಲೆ ಹೊರ ಬಂದಲ್ಯೋ ಕೂಸೇ!

Published : Nov 25, 2019, 04:02 PM IST
ಗಂಡ್ಮಗು ಆಸೆ: 11 ಹೆಣ್ಮಕ್ಳಾದ್ಮೇಲೆ ಹೊರ ಬಂದಲ್ಯೋ ಕೂಸೇ!

ಸಾರಾಂಶ

11 ಹೆಣ್ಣುಮಕ್ಕಳಾದ ಮೇಲೆ ಗಂಡು ಮಗು ಜನನ| ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದ ಮಹಿಳೆಗೆ 12ನೇ ಮಗು| ರಾಜಸ್ಥಾನದ ಚುರು ಜಿಲ್ಲೆಯ ಜಾಡ್ಸರ್’ನಲ್ಲಿ ಅಪರೂಪದ ಘಟನೆ| ಕೊನೆಗೂ ಗಂಡುಮಗುವಿಗೆ ಜನ್ಮ ನೀಡಿದ 42 ವರ್ಷದ ಗುಡ್ಡಿ| ಗುಡ್ಡಿಯ ಹಿರಿಯ ಮಗಳಿಗೆ ಈಗಾಗಲೇ 22 ವರ್ಷ|

ಜೈಪುರ್(ನ.25): ಆಧುನಿಕ ಭಾರತ, ಬದಲಾದ ಭಾರತ ಹೀಗೆ ದೇಶದ ಬದಲಾದ ರಾಜಕೀಯ  ಸನ್ನಿವೇಶವನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಆದರೆ ಭಾರತದ ಸಾಮಾಜಿಕ ಸನ್ನಿವೇಶ ಮಾತ್ರ ಇನ್ನೂ ಶತಮಾನಗಳಷ್ಟು ಹಿಂದಿರುವುದು ಸುಳ್ಳಲ್ಲ.

ಗಂಡು ಮಗುವಿನ ಹಂಬಲ, ಹೆಣ್ಣು ಮಗುವಿಗೆ ತಾತ್ಸಾರ ಇದು ಭಾರತೀಯ ಸಮಾಜದ ಡಿಎನ್’ಎಯಲ್ಲಿ ಹಾಸು ಹೊಕ್ಕಾಗಿರುವ ಸಮಸ್ಯೆ. ಗಂಡು ಮಗುವಿಗಾಗಿ ಮಾಡಬಾರದ್ದನ್ನೂ ಮಾಡಲು ಹೇಸದ ಸಮಾಜ ನಮ್ಮದು.

ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ ಅರ್ಜುನ್ ರಾಂಪಾಲ್ ಗೆಳತಿ

ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದ, ಗಂಡು ಮಗು ನೀಡದ ಸೊಸೆಗೆ ಬೆಂಕಿ ಹಚ್ಚಿದ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ವಿಚ್ಛೇದನ ನೀಡಿದಂತಹ  ಅನೇಕ ಅನಿಷ್ಟ ಉದಾಹರಣೆಗಳು ನಮ್ಮ ಮುಂದಿದೆ.

ಅದರಂತೆ ಗಂಡು ಮಗುವಿನ ಹಂಬಲ ಮಹಿಳೆಯೋರ್ವಳನ್ನು 12 ಮಕ್ಕಳನ್ನು ಹೆರುವಂತೆ ಮಾಡಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಜಾಡ್ಸರ್’ನಲ್ಲಿ ನಡೆದಿದೆ.

ಬ್ರಿಟನ್ ರಾಜಕುಮಾರ ಹ್ಯಾರಿ - ಮೇಘನ್ ಗೆ ಮಗು ಜನನ

ಇಲ್ಲಿನ ಗುಡ್ಡಿ ಎಂಬ 42 ವರ್ಷದ ಮಹಿಳೆ ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದು, 11 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಬಳಿಕ ಇದೀಗ 12ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ವಿಚಿತ್ರ ಎಂದರೆ 11 ಹೆಣ್ಣುಮಕ್ಕಳ ಪೈಕಿ ಈಗಾಗಲೇ ಇಬ್ಬರಿಗೆ ಮದುವೆಯಾಗಿದ್ದು, ಹಿರಿಯ ಮಗಳಿಗೆ ಈಗಾಗಲೇ 22 ವರ್ಷ ವಯಸ್ಸು. 

ಪ್ರಣವಾನಂದ ಸ್ವಾಮೀಜಿಗೆ ಗಂಡು ಮಗು: ನೀ ಮಠದ ಉತ್ತರಾಧಿಕಾರಿ ಆಗು!

ಇನ್ನು ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸಂತುಷ್ಟಗೊಂಡಿದ್ದು,   ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ