ಎಮ್ಮೆಗೆ ಡಿಕ್ಕಿ:ಹಾಸಿಗೆ ಹಿಡಿದ 83ರ ವೃದ್ಧನ ವಿರುದ್ಧ 29 ವರ್ಷ ಹಳೆ ಕೇಸಲ್ಲಿ ಬಂಧನ ವಾರಂಟ್‌

Published : Jun 30, 2023, 07:51 AM ISTUpdated : Jun 30, 2023, 07:53 AM IST
ಎಮ್ಮೆಗೆ ಡಿಕ್ಕಿ:ಹಾಸಿಗೆ ಹಿಡಿದ 83ರ ವೃದ್ಧನ ವಿರುದ್ಧ  29 ವರ್ಷ ಹಳೆ ಕೇಸಲ್ಲಿ ಬಂಧನ ವಾರಂಟ್‌

ಸಾರಾಂಶ

83 ವರ್ಷದ ನಿವೃತ್ತ ಬಸ್‌ ಚಾಲಕರೊಬ್ಬರಿಗೆ 29 ವರ್ಷದ ಹಳೆ ಕೇಸಿನ ಸಂಬಂಧ ಪೊಲೀಸರು ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ ವಿಚಿತ್ರ ಘಟನೆ ಇಲ್ಲಿನ ಬರೇಲಿಯಲ್ಲಿ ನಡೆದಿದೆ. 

ಲಖನೌ: 83 ವರ್ಷದ ನಿವೃತ್ತ ಬಸ್‌ ಚಾಲಕರೊಬ್ಬರಿಗೆ 29 ವರ್ಷದ ಹಳೆ ಕೇಸಿನ ಸಂಬಂಧ ಪೊಲೀಸರು ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ ವಿಚಿತ್ರ ಘಟನೆ ಇಲ್ಲಿನ ಬರೇಲಿಯಲ್ಲಿ ನಡೆದಿದೆ. 

ಅಚ್ಚನ್‌ ಎಂಬ ನಿವೃತ್ತ ಸಾರಿಗೆ ಸಂಸ್ಥೆ ಚಾಲಕರು 29 ವರ್ಷದ ಹಿಂದೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದರು. ಹೀಗಾಗಿ ಅತಿ ವೇಗದ ಚಾಲನೆ ಅಡಿ ದೂರು ದಾಖಲಾಗಿತ್ತು. ಈ ದೂರನ್ನು ಈಗ ವಿಚಾರಣೆಗೆ ಕೈಗೆತ್ತಿಕೊಂಡಿರುವ ಪೊಲಿಸರು, ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಅಚ್ಚನ್‌ ಅವರ ಮನೆಗೆ ಬಂದು ಅರೆಸ್ಟ್‌ ವಾರೆಂಟ್‌ ತೋರಿಸಿದ್ದಾರೆ. ಬಳಿಕ ಅವರ ಸ್ಥಿತಿ ಕಂಡು ಜು.17ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ. ಇಲ್ಲವಾದರೆ ಬಲವಂತವಾಗಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

20 ವರ್ಷ ಹಳೆ ಕೊಲೆ ಪ್ರಕರಣ: ಸಿಎಂ ಯೋಗಿಗೆ ಕ್ಲೀನ್ ಚಿಟ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!